MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಶ್ರೀಮಂತ ಜೀವನದಿಂದ ಬಡತನ, ತುತ್ತು ಅನ್ನಕ್ಕಾಗಿ ಬಿಕ್ಷೆ ಬೇಡಿದ ಸಿನೆಮಾ ತಾರೆಯರು!

ಶ್ರೀಮಂತ ಜೀವನದಿಂದ ಬಡತನ, ತುತ್ತು ಅನ್ನಕ್ಕಾಗಿ ಬಿಕ್ಷೆ ಬೇಡಿದ ಸಿನೆಮಾ ತಾರೆಯರು!

ಚಲನಚಿತ್ರೋದ್ಯಮವು ಒಂದು ಮಾಂತ್ರಿಕ ಸ್ಥಳವಾಗಿದೆ. ಮಾಡುವ ಕೆಲಸದ ಆಧಾರದ ಮೇಲೆ ಜನರನ್ನು ಸೂಪರ್‌ಸ್ಟಾರ್‌ಗಳಾಗಿ ಪರಿವರ್ತಿಸುತ್ತದೆ. ಅವರು ಹೆಚ್ಚಿನ ಗಮನ, ಗ್ಲಾಮರ್, ಜೀವನಶೈಲಿ ಮತ್ತು ಹೌದು, ಅವರ ಕೆಲಸಕ್ಕಾಗಿ ಸಾಕಷ್ಟು ಹಣವನ್ನು ಪಡೆಯುತ್ತಾರೆ. ಆದರೆ ಹಾದಿ ತಪ್ಪಿದರೆ ಅವರ ಸ್ಥಿತಿಯು ಕೆಟ್ಟ ಜೀವನ ಎಂಬುದು ಸ್ಪಷ್ಟವಾಗಿದೆ. ಅನೇಕ ನಟರ ಸ್ಪೂರ್ತಿದಾಯಕ ಕಥೆಗಳಿವೆ.  ಆದರೆ ಕೆಲವು ತಾರೆಯರ ಸ್ಥಿತಿ ಶೋಚನೀಯ ಜೀವನವಾಗಿತ್ತು. ಎಲ್ಲವನ್ನು ಕಳೆದುಕೊಂಡು ಬಿಕ್ಷುಕರಾದವರ ಹಲವು ಕಥೆಗಳು ಕಣ್ಣ ಮುಂದಿದೆ.

3 Min read
Author : Gowthami K
| Updated : Oct 25 2023, 02:24 PM IST
Share this Photo Gallery
  • FB
  • TW
  • Linkdin
  • Whatsapp
19

ಅತ್ಯಂತ ಜನಪ್ರಿಯ ಭೋಜ್‌ಪುರಿ ನಟಿ ಮಿತಾಲಿ ಇತ್ತೀಚೆಗೆ ಮುಂಬೈನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಇಷ್ಟೇ ಅಲ್ಲ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಆಕೆ ಕಳ್ಳತನ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಂಡರು. ಹಿಡಿಯಲು ಹೋದಾಗ ಅಧಿಕಾರಿಗಳನ್ನು ಹೊಡೆದು ನಂತರ ಪಲಾಯನ ಮಾಡಿದಳು. ಆಕೆ ಉನ್ನತ ದರ್ಜೆಯ ಚಲನಚಿತ್ರಗಳನ್ನು ಸ್ವೀಕರಿಸುತ್ತಿದ್ದಳು, ಆದರೆ ಕ್ರಮೇಣ ಆಕೆಗೆ ಆಫರ್‌ಗಳು ಕಡಿಮೆಯಾದವು ಮತ್ತು ಅಂದಿನಿಂದ ಅವಳು ತೀವ್ರ ಖಿನ್ನತೆಗೆ ಒಳಗಾಗಿದ್ದಳು. ಬದುಕು ಅನಿವಾರ್ಯವಾದಾಗ ಭಿಕ್ಷಾಟನೆ , ಕಳ್ಳತನಕ್ಕೆ ಇಳಿದಳು.

29

ಪ್ರಸಿದ್ಧ ರೂಪದರ್ಶಿ ಗೀತಾಂಜಲಿ ನಾಗ್ಪಾಲ್, ರ‍್ಯಾಂಪ್ ವಾಕ್‌ನೊಂದಿಗೆ ತಮ್ಮ ವಿನ್ಯಾಸಗಳನ್ನು ತೋರಿಸಲು ಫ್ಯಾಷನ್ ವಿನ್ಯಾಸಕರ ಮೊದಲ ಆಯ್ಕೆಯಾಗಿದ್ದಳು ಈ ನಟಿ,  ಆದರೆ ಅವಳು ಡ್ರಗ್ಸ್ ಮತ್ತು ಇತರ ಕಟ್ಟ ಪದಾರ್ಥಗಳ ವ್ಯಸನಿಯಾಗಿದ್ದಳು ಹೀಗಾಗಿ ಅವಳು ಎಲ್ಲವನ್ನೂ ಕಳೆದುಕೊಂಡಳು. ಕೊನೆಗೆ ಏನೂ ಇಲ್ಲದಾಗ  ದಕ್ಷಿಣ ದೆಹಲಿಯ ಬೀದಿಗಳಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿದಳು. ಮಾತ್ರವಲ್ಲ ತನ್ನ ಅವಶ್ಯಕತೆಗಳನ್ನು ಪೂರೈಸಲು ಮನೆ ಕೆಲಸ ಕೂಡ ಮಾಡಬೇಕಾಗಿತ್ತು. 

39

ಅಮಲು ಪದಾರ್ಥ ಎಲ್ಲವನ್ನೂ ಮತ್ತು ಎಲ್ಲರನ್ನೂ ಬದುಕಿನಿಂದ ದೂರ ಮಾಡುತ್ತದೆ. ಖ್ಯಾತ ಸಂಗೀತ ನಿರ್ದೇಶಕ O.P. ನಯ್ಯರ್ ಇದಕ್ಕೆ ಉದಾಹರಣೆ. ಕುಡಿತದ ಚಟ ಹೊಂದಿದ್ದ ಇವರು ಕುಟುಂಬ ಸಂಬಂಧವನ್ನೇ ತ್ಯಜಿಸಿದ್ದರು. ಸಂಗೀತ ಉದ್ಯಮಕ್ಕೆ ಕೆಲವು ಉತ್ತಮ ಟ್ಯೂನ್‌ಗಳನ್ನು ಒದಗಿಸುವ ಮೂಲಕ ಪ್ರಸಿದ್ಧಯಾದರು. ಆದರೆ ಇವರು ಸಾಯುವ ಮೊದಲು ಕೆಟ್ಟ ದಿನಗಳನ್ನು ಎದುರಿಸಬೇಕಾಯಿತು. 

49

ಅಚಲ ಸಚ್‌ದೇವ್  ಜನಪ್ರಿಯ ನಟಿ ಗಂಡನ ಸಾವಿನ ಬಳಿಕ ಒಬ್ಬಂಟಿಯಾದರು. ಅನಾರೋಗ್ಯದ ಬಳಿಕ ಇವರನ್ನು ಮಗ ಮತ್ತು ಮಗಳು ಕೈಬಿಟ್ಟರು. ಪುಣೆಯಲ್ಲಿರುವ ತನ್ನ ಫ್ಲಾಟ್ ಅನ್ನು ದತ್ತಿ ಸಂಸ್ಥೆಯಾದ ಜನಸೇವಾ ಫೌಂಡೇಶನ್‌ಗೆ ಬಿಟ್ಟುಕೊಟ್ಟಳು. ನಂತರ ಯಾರೂ ಬಯಸದ ಭಯಾನಕ ಸಾವಾಯ್ತು.  ಅವಳ ಕೊನೆಯ ಉಸಿರಿನ ಸಮಯದಲ್ಲಿ ಅವಳ ಕುಟುಂಬದಿಂದ ಯಾರೂ ಜೊತೆಯಲ್ಲಿ ಇರಲಿಲ್ಲ. 
 

59

ಪರ್ವೀನ್ ಬಾಬಿ ಒಬ್ಬ ಸುಂದರ, ದಿಟ್ಟ, ಮತ್ತು ಆಕರ್ಷಕ ನಟಿಯಾಗಿದ್ದು,  ಕ್ಷಿಪ್ರವಾಗಿ ಬೆಳವಣಿಗೆ ಕಂಡರು. ಆದರೆ ಅವರು ಜನವರಿ 22, 2005 ರಂದು ಮುಂಬೈನಲ್ಲಿರುವ ಅವರ ಫ್ಲಾಟ್‌ನಲ್ಲಿ ಆಶ್ಚರ್ಯಕರವಾಗಿ ಸಾವನ್ನಪ್ಪಿದರು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತದೆ. ನಟನೆಯಿಂದ ದೂರು ಉಳಿದಿದ್ದ ಅವರು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡು ಮಲಬಾರ್ ಹಿಲ್‌ನಲ್ಲಿರುವ ಪ್ರೊಟೆಸ್ಟಂಟ್ ಆಂಗ್ಲಿಕನ್ ಚರ್ಚ್‌ನಲ್ಲಿ ಬ್ಯಾಪ್ಟೈಜ್ ಆಗಿದ್ದರು. ಫ್ಲಾಟ್‌ನಲ್ಲಿದ್ದ ಮೃತದೇಹವನ್ನು 2 ದಿನಗಳಿಗಿಂತ ಹೆಚ್ಚು ಕಾಲ  ಪಡೆಯಲು ಯಾರೂ ಮುಂದೆ ಬರದಿದ್ದಾಗ, ಅಂತಿಮವಾಗಿ ಮಹೇಶ್ ಭಟ್  ಅಂತಿಮ ವಿಧಿಗಳನ್ನು ನೆರವೇರಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. 

69

ಮೀನಾ ಕುಮಾರಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ದುರಂತ ರಾಣಿ ಎಂಬ ಬಿರುದನ್ನು ಹೊಂದಿದ್ದರು. ಬಾಲಿವುಡ್‌ ನ ಈ ನಟಿ ಅಂದಿನ ಕಾಲದ ಆಗರ್ಭ ಶ್ರೀಮಂತ ನಟಿಯಾಗಿದ್ದಳು. 4 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ  ಕೇವಲ 38 ವರ್ಷಕ್ಕೆ ದುರಂತ ಅಂತ್ಯ ಕಂಡಳು. ‘ಟ್ರ್ಯಾಜಿಡಿ ಕ್ವೀನ್’  ಎಂದೇ ಈಕೆ ಬಿರುದು. ಕೇವಲ 18 ವರ್ಷ ವಯಸ್ಸಿನ ಮೀನಾ ಕುಮಾರಿ 14 ಫೆಬ್ರವರಿ 1952 ರಂದು, ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ಕಮಲ್ ಅಮ್ರೋಹಿಯೊಂದಿಗೆ ವಿವಾಹವಾದರು, ಕಮಲ್ ಅವರೊಂದಿಗಿನ ವಿವಾಹ ವಿಫಲವಾದ ನಂತರ ಮೀನಾ ಕುಮಾರಿ ಮದ್ಯವ್ಯಸನಿಯಾದರು ಮತ್ತು ಅವರು ಹಲವಾರು ಕಾಯಿಲೆಗಳಿಂದ ಚಿಕ್ಕ ವಯಸ್ಸಿನಲ್ಲಿ ನಿಧನರಾದರು.   ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದರು. ಮಾತ್ರವಲ್ಲ ಅವರು ತೀರಿಕೊಂಡ ನಂತರ  ಮೀನಾ ಕುಟುಂಬಕ್ಕೆ ಆಸ್ಪತ್ರೆಯಲ್ಲಿ 3,500 ರೂ.ಗಳನ್ನು ಪಾವತಿಸಲು ಸಾಧ್ಯವಾಗದ ಸ್ಥಿತಿ ಇತ್ತು ಎಂದರೆ ನಂಬಲೇಬೇಕು.
 

79

ಪ್ರಸಿದ್ಧ ನಟ ರಾಜ್ ಕಿರಣ್ ತಮ್ಮ ವೃತ್ತಿಜೀವನದ ಕುಸಿತದ ನಂತರ ತೀವ್ರ ಖಿನ್ನತೆಗೆ ಒಳಗಾಗಿದ್ದರು.  ಅವರನ್ನು ಮುಂಬೈನ ಬೈಕುಲ್ಲಾ ಮಾನಸಿಕ ಆಶ್ರಯಕ್ಕೆ ದಾಖಲಿಸಲಾಯಿತು. ಬಳಿಕ ಎಲ್ಲೂ ಕಾಣಿಸಿರಲಿಲ್ಲ. 2010 ರಲ್ಲಿ ನಟ ರಾಜ್ ಕಿರಣ್ ಅಟ್ಲಾಂಟಾದಲ್ಲಿ ಮಾನಸಿಕ ಆಶ್ರಯದ ಸಂಸ್ಥೆಯಲ್ಲಿ ಹುಚ್ಚನ ಸ್ಥಿತಿಯಲ್ಲಿ ಕಂಡುಬಂದರು. ಈ ಸ್ಟಾರ್ ಸತ್ತಿದ್ದಾರೆ ಮತ್ತು ಹೀಗಾಗಿ ಬಣ್ಣದ ಬದುಕಿನಿಂದ ಕಣ್ಮರೆಯಾಗಿದ್ದಾರೆ ಎಂದು ಜನರು ಭಾವಿಸಿದ್ದರು, ಜೂನ್ 2011 ರಲ್ಲಿ, ರಿಷಿ ಕಪೂರ್ ಅವರು ಯುನೈಟೆಡ್ ಸ್ಟೇಟ್ಸ್ ಪ್ರವಾಸದಲ್ಲಿ ಕಾಣೆಯಾದ ನಟನ ಸಹೋದರ ಗೋಬಿಂದ್ ಮಹ್ತಾನಿಗೆ ದೂರವಾಣಿ ಕರೆ ಮಾಡಿದರು, ಅವರು ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ ಅಟ್ಲಾಂಟಾದಲ್ಲಿ ಆಶ್ರಯದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು.

89

ಭಗವಾನ್ ದಾದಾ ನಟ ಮತ್ತು ನಿರ್ದೇಶಕ ಹಲವಾರು ದುಬಾರಿ ಕಾರುಗಳು ಮತ್ತು ಬಂಗಲೆಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬರು ಸಾಮಾನ್ಯ ಕಾರ್ಮಿಕರ ಸ್ಥಳವಾದ ಮುಂಬೈನಲ್ಲಿ ಅವ್ಯವಸ್ಥೆಯ ಮತ್ತು ಹೊಲಸು ಕೊಳೆಗೇರಿಯಲ್ಲಿ ಸಾವನ್ನಪ್ಪಿದರು. ಝಮೇಲಾ ಮತ್ತು ಲಬೆಲಾ ಮುಂತಾದ ಅವರ ಚಲನಚಿತ್ರಗಳು ವಿಫಲವಾದ ನಂತರ ಅವರು ಎಲ್ಲವನ್ನೂ ಕಳೆದುಕೊಂಡರು. ಎಲ್ಲವನ್ನೂ ಸಂಪಾದಿಸಿದರೂ ಬೀದಿಗೆ ಬಂದರು.  

99

ಇಂಡಸ್ಟ್ರಿಯಲ್ಲಿ ಗಂಭೀರ ಪಾತ್ರಗಳ ಅತ್ಯುತ್ತಮ ಚಿತ್ರಣವನ್ನು ನೀಡಿ, ಭರತ್‌ ಭೂಷಣ್‌   ಅದ್ವಿತೀಯರಾಗಿದ್ದರು. ನಟಿ ಮೀನಾ ಕುಮಾರಿಯೊಂದಿಗಿನ ಸಂಬಂಧ ಮತ್ತು ವಿಪರೀತ ದುಷ್ಟ ಅಭ್ಯಾಸಗಳು ನಟನಿಂದ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿತು.  ಅಂತಿಮವಾಗಿ ಸಿನೆಮಾ ಆಫರ್‌ಗಳು ಸಿಗಲಿಲ್ಲ. ನಂತರ ಅವರು ಫಿಲ್ಮ್ ಸ್ಟುಡಿಯೊದಲ್ಲಿ ಗೇಟ್‌ಕೀಪರ್ ಆಗಿ ಕೆಲಸ ಮಾಡುತ್ತಿದ್ದರು. ಇದಲ್ಲದೆ, ಅವರು ಬಾಡಿಗೆಗೆ ಪಡೆದಿದ್ದ ಫ್ಲ್ಯಾಟ್‌ನಲ್ಲಿ ನಿಧನರಾದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಾಲಿವುಡ್

Latest Videos
Recommended Stories
Recommended image1
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
Recommended image2
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್
Recommended image3
ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved