ಪಾರದರ್ಶಕ ಕಂಗನಾ.. 'ಅಂಧ ಭಕ್ತರೇ ಏನಂತೀರಿ ನಿಮ್ಮಕ್ಕನ ಈ ಸಂಸ್ಕಾರಕ್ಕೆ?'
ಮುಂಬೈ(ಆ. 13) ವಿವಾದಿಂದಲೇ ಸುದ್ದಿ ಮಾಡುವ ನಟಿ ಕಂಗನಾ ರಣಾವತ್ ಈ ಸಾರಿ ಅಭಿಮಾನಿಗಳ ಎದೆಗೆ ಲಗ್ಗೆ ಇಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಂಗಾನರ ಬೋಲ್ಡ್ ಅವತಾರ ವೈರಲ್ ಆಗಿದೆ.
ಮಹಾರಾಷ್ಟ್ರ ಸರ್ಕಾರವನ್ನೇ ಎದುರು ಹಾಕಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಕಂಗಾನಗೆ ಸೇರಿದ್ದ ಕಟ್ಟಡವನ್ನು ಮಹಾರಾಷ್ಟ್ರ ಸರ್ಕಾರ ತೆರವು ಮಾಡಿತ್ತು.
ಧಾಕಡ್ ಚಿತ್ರೀಕರಣಕ್ಕಾಗಿ ಯುರೋಪ್ನಲ್ಲಿರುವ ಕಂಗನಾ ಶೂಟಿಂಗ್ ಮುಗಿಸಿದ ನಂತರ ಪೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.
ರಾಷ್ಟ್ರ, ರಾಷ್ಟ್ರಭಕ್ತಿ ವಿಚಾರದ ಬಗ್ಗೆ ಕಂಗನಾ ಸದಾ ಮಾತನಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಕಮೆಂಟ್ ಗಳ ಸುರಿಮಳೆಯೂ ಹರಿದು ಬಂದಿದೆ.
ಅಂಧ ಭಕ್ತರೆ... ಕಂಗನಾ ಅವರ ಈ ಅವತಾರ ನೋಡಿ ನೀವು ಏನಾದರೂ ಹೇಳುತ್ತಿರಾ! ನಿಮ್ಮ ಅಕ್ಕನ ಸಂಸ್ಕಾರದ ಬಗ್ಗೆ ಮಾತನಾಡುತ್ತೀರಾ ಎಂದು ಕಮೆಂಟ್ ಮಾಡಿದ್ದಾರೆ.
ತಿಳಿ ಸಂಜೆಯಲ್ಲಿ ಕ್ರಿಮ್ ಕಲರ್ ಡ್ರಸ್ ತೊಟ್ಟು ಕಂಗನಾ ಸಖತ್ ಸೆಕ್ಸಿ ಪೋಸ್ ನೀಡಿದ್ದಾರೆ. ಪ್ರೀತಿಯಲ್ಲಿ ಹುಟ್ಟು, ಸಾವು ಇಲ್ಲ. ಅವರನ್ನು ನೋಡುತ್ತಾ ಬದುಕುವಾಗಲೇ ನಿಜವಾದ ಶಕ್ತಿ ಹೊರಗೆ ಬರುತ್ತದೆ ಎಂದು ಕಂಗನಾ ಶೀರ್ಷಿಕೆಯನ್ನು ಬರೆದಿದ್ದಾರೆ.
ಧಾಕಡ್ ಚಿತ್ರಕ್ಕೆ ನಿರ್ದೇಶಕ ರಜನೀಶ್ ಘಾಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದೊಂದು ಸ್ಪೈ ಥ್ರಿಲ್ಲರ್ ಕಥಾಹಂದರವಾಗಿದ್ದು, ಈ ಚಿತ್ರದ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಹಾಗೂ ದಿವ್ಯಾ ಸತ್ ಅಭಿನಯಿಸಿದ್ದಾರೆ.
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತಲೈವಿ ಚಿತ್ರ ಬಿಡುಗಡೆಯಾಗಬೇಕಿದೆ. ಕೊರೋನಾ ಕಾರಣಕ್ಕೆ ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ರೀತಿ ಬರೆದ ಕಾರಣ ಕಂಗನಾ ಅವರ ಟ್ವಿಟರ್ ಖಾತೆಯನ್ನು ತೆಗೆದು ಹಾಕಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು.