MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಆಯೋಧ್ಯೆ ಮಂಗಗಳ ಆಹಾರಕ್ಕೆ ದುಬಾರಿ ಮೊತ್ತ ದೇಣಿಗೆ ನೀಡಿದ ನಟ ಅಕ್ಷಯ್ ಕುಮಾರ್!

ಆಯೋಧ್ಯೆ ಮಂಗಗಳ ಆಹಾರಕ್ಕೆ ದುಬಾರಿ ಮೊತ್ತ ದೇಣಿಗೆ ನೀಡಿದ ನಟ ಅಕ್ಷಯ್ ಕುಮಾರ್!

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ದೇಶಕ್ಕಾಗಿ, ಧರ್ಮಕ್ಕಾಗಿ ದೇಣಿಗೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ಅಕ್ಷಯ್ ಕುಮಾರ್ ಇದೀಗ ದೀಪಾವಳಿ ಹಬ್ಬಕ್ಕೂ ಮುನ್ನ ಆಯೋಧ್ಯೆ ಮಂಗಗಳಿಗೆ ಆಹಾರ ನೀಡುವ ಯೋಜನೆಗೆ ದುಬಾರಿ ಮೊತ್ತ ದೇಣಿಗೆ ನೀಡಿದ್ದಾರೆ. 

2 Min read
Chethan Kumar
Published : Oct 30 2024, 11:43 AM IST
Share this Photo Gallery
  • FB
  • TW
  • Linkdin
  • Whatsapp
15

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯಲ್ಲಿ ಮಾತ್ರವಲ್ಲ, ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದೀಗ ಅಕ್ಷಯ್ ಕುಮಾರ್ ಶ್ರೀರಾಮನ ಜನ್ಮಸ್ಥಳ ಆಯೋಧ್ಯೆಯ ಮಂಗಳಿಗೆ ಆಹಾರ ನೀಡುವ ಯೋಜನೆಗೆ ನೆರವು ನೀಡಿದ್ದಾರೆ. ಮಂಗಳಿಗೆ ಭಾರತೀಯ ಪುರಾಣ ಹಾಗೂ ರಾಮಾಯಾಣಧಲ್ಲಿರುವ ಮಹತ್ವ ಬಿಡಿಸಿ ಹೇಳಬೇಕಿಲ್ಲ. ಆಯೋಧ್ಯೆಯಲ್ಲಿರುವ ಮಂಗಳ ರಕ್ಷಣೆ ಹಾಗೂ ಆಹಾರ ನೀಡು ಮಹತ್ವದ ಕಾರ್ಯಕ್ಕೆ ಅಕ್ಷಯ್ ಕೈಜೋಡಿಸಿದ್ದಾರೆ. 

 

25

ಆಯೋಧ್ಯೆ ಮಂಗಗಳಿಗೆ ಆಹಾರ ನೀಡುವ ಯೋಜನೆಯನ್ನು ಅಂಜನೇಯ ಸೇವಾ ಟ್ರಸ್ಟ್ ಆಯೋಜಿಸಿದೆ. ಟ್ರಸ್ಟ್‌ನ ಮುಖ್ಯಸ್ಥರಾದ ಜಗದ್ಗುರು ಸ್ವಾಮಿ ರಾಘವಾಚಾರ್ಯ ಜೀ ಮಹಾರಾಜರು ಅಕ್ಷಯ್ ಸಂಪರ್ಕಿಸಿದ್ದಾರೆ. ಈ ವೇಳೆ  ಅಕ್ಷಯ್ ಕುಮಾರ್ 1 ಕೋಟಿ ರೂಪಾಯಿ ದೇಣಿಗೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಕ್ಷಯ್ ಕುಮಾರ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

35

ಅಕ್ಷಯ್ ಅವರು ತಮ್ಮ ಹೆತ್ತವರಾದ ಹರಿ ಓಂ ಭಾಟಿಯಾ ಮತ್ತು ಅರುಣಾ ಭಾಟಿಯಾ ಹಾಗೂ ತಮ್ಮ ಮಾವ ರಾಜೇಶ್ ಖನ್ನಾ ಅವರ ಗೌರವಾರ್ಥವಾಗಿ ಆಗಾಗ್ಗೆ ದೇಣಿಗೆ ನೀಡುತ್ತಾರೆ. ಅಕ್ಷಯ್ ಕೇವಲ ಉದಾರ ದಾನಿ ಮಾತ್ರವಲ್ಲ, ಸಾಮಾಜಿಕವಾಗಿ ಜಾಗೃತ ನಾಗರಿಕರೂ ಹೌದು ಎಂದು ಜಗದ್ಗುರು ಸ್ವಾಮಿ ರಾಘವಾಚಾರ್ಯ ಜೀ ಹೇಳಿದರು. ಅವರು ಅಯೋಧ್ಯೆಯ ಜನರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.  ನಗರದಲ್ಲಿ ಯಾವುದೇ ಅನಾನುಕೂಲತೆ ಅಥವಾ ಕಸ ಹಾಕದೆ ಮಂಗಗಳಿಗೆ ಆಹಾರ ನೀಡುವ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎಂದು ಸ್ವಾಮಿಜಿ ಹೇಳಿದ್ದಾರೆ.

45

ಅಕ್ಷಯ್ ಕುಮಾರ್ ಹಲವು ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೊರೋನಾ ಪರಿಹಾರ ನಿಧಿ ಆರಂಭಿಸಿತ್ತು. ಈ ವೇಳೆ ನಾಯಕರು, ಸೆಲೆಬ್ರೆಟಿಗಳು ಸೇರಿದಂತೆ ಹಲವರು ದೇಣಿಗೆ ನೀಡಿದ್ದರು. ಈ ವೇಳೆ ಅಕ್ಷಯ್ ಕುಮಾರ್ 25 ಕೋಟಿ ರೂಪಾಯಿ ಮೊತ್ತ ಕೋವಿಡ್ ಪರಿಹಾರ ನಿಧಿಗಿ ದೇಣಿಗೆಯಾಗಿ ನೀಡಿದ್ದರು. ಈ ಮೂಲಕ ಗರಿಷ್ಠ ದೇಣಿಗೆ ನೀಡಿದ ಸಿನಿಮಾ ಸೆಲೆಬ್ರೆಟಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

55

ಚಲನಚಿತ್ರಗಳ ವಿಷಯದಲ್ಲಿ, ಅಕ್ಷಯ್ ಕುಮಾರ್ ಅವರು ರೋಹಿತ್ ಶೆಟ್ಟಿ ಅವರ ಪೊಲೀಸ್ ವಿಶ್ವದ ಇತ್ತೀಚಿನ ಚಿತ್ರ "ಸಿಂಗಮ್ ಅಗೈನ್" ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಚಿತ್ರದಲ್ಲಿ ಸೂರ್ಯವಂಶಿಯಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ, ಇದರಲ್ಲಿ ಅಜಯ್ ದೇವಗನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಇತರ ತಾರೆಯರೂ ಇದ್ದಾರೆ. ಚಿತ್ರವು ನವೆಂಬರ್ 1 ರಂದು ಬಿಡುಗಡೆಯಾಗಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಅಕ್ಷಯ್ ಕುಮಾರ್
ಅಯೋಧ್ಯೆ
ಬಾಲಿವುಡ್
ಆಹಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved