ದಕ್ಷಿಣ ಭಾರತೀಯ ದಿಗ್ಗಜ ನಟರ ಪುತ್ರಿಯರ ಫೋಟೋಸ್..
ರಜನಿಕಾಂತ್, ಮೋಹನ್ ಲಾಲ್, ಮುಮ್ಮುಟ್ಟಿ, ಚಿರಂಜೀವಿ ಮೊದಲಾದವರು ಸೌತ್ ಸಿನಿಮಾ ಇಂಡಸ್ಟ್ರಿಯ ದಿಗ್ಗದರು. ಈ ಸೂಪರ್ ಸ್ಟಾರ್ಸ್ ಕೇವಲ ತಮ್ಮ ಭಾಷೆಯಲ್ಲಷ್ಟೇ ಅಲ್ಲದೇ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲೂ ನಟಿಸಿದ ಕೀರ್ತಿ ಹೊಂದಿದ್ದಾರೆ. ದಕ್ಷಿಣ ಭಾರತದ ಈ ನಟರು ಕೆಲವು ದಶಕಗಳಿಂದ ಚಿತ್ರರಂಗವನ್ನು ಆಳುತ್ತಿದ್ದು, ದೇಶದ್ಯಾಂತ್ಯ ಫ್ಯಾನ್ಸ್ ಹೊಂದಿದ್ದಾರೆ. ಈ ನಟರು ಪುತ್ರಿಯರ ಬಗ್ಗೆ ತಿಳಿದಿರುವುದು ಅಪರೂಪ. ಇಲ್ಲಿವೆ ಅವರ ಫೋಟೋಗಳು.
ಚಿರಂಜೀವಿ (ಸುಶ್ಮಿತಾ ಮತ್ತು ಶ್ರೀಜಾ):
ತೆಲಗು ಮೆಗಾ ಸ್ಟಾರ್ ಚಿರಂಜೀವಿ ಮಗ ರಾಮ್ಚರಣ್ ತೇಜ ಮತ್ತು ಇಬ್ಬರು ಪುತ್ರಿ ಸುಷ್ಮಿತಾ ಮತ್ತು ಶ್ರೀಜಾರನ್ನು ಹೊಂದಿದ್ದಾರೆ. ಸುಷ್ಮಿತಾ ವಿಷ್ಣು ಪ್ರಸಾದ್ರನ್ನು ವಿವಾಹವಾಗಿದ್ದಾರೆ.ಶ್ರೀಜಾ ಶಿರೀಶ್ ಭರದ್ವಾಜ್ ಅವರೊಂದಿಗೆ ಸೀಕ್ರೆಟ್ ಮದುವೆಯಾಗಿದ್ದರು. ನಂತರ ಇಬ್ಬರ ನಡುವಿನ ಸಂಬಂಧ ಹದಗೆಟ್ಟು, ವಿಚ್ಛೇದನ ಪಡೆದರು. ನಂತರ ಶ್ರೀಜಾ ಆಭರಣ ಉದ್ಯಮಿ ಕಲ್ಯಾಣ್ರನ್ನು ಕುಟುಂಬದ ಇಷ್ಟದಂತೆ ಮದುವೆಯಾದರು.
ರಜನಿಕಾಂತ್ (ಐಶ್ವರ್ಯಾ ಮತ್ತು ಸೌಂದರ್ಯ ):
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಕ್ಕಳು ಸೌಂದರ್ಯ ಮತ್ತು ಐಶ್ವರ್ಯಾ. ಕೈಗಾರಿಕೋದ್ಯಮಿ ಅಶ್ವಿನ್ ರಾಮ್ಕುಮಾರ್ರನ್ನು ವರಿಸಿದ್ದ ಹಿರಿಯ ಮಗಳು ಡಿವೋರ್ಸ್ ಪಡೆದಿದ್ದಾರೆ ಮತ್ತು ಕಿರಿಯ ಮಗಳು ಐಶ್ವರ್ಯಾ ನಟ ಧನುಷ್ ಮಡದಿ.
ಕಮಲ್ ಹಾಸನ್ (ಶ್ರುತಿ ಮತ್ತು ಅಕ್ಷರಾ):
ಪರ್ಸ್ಟಾರ್ ಕಮಲ್ ಹಾಸನ್ ದಕ್ಷಿಣ ಚಿತ್ರಗಳಲ್ಲದೆ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಇವರು ಅತ್ಯುತ್ತಮ ನಟನೆಗಾಗಿ ಹೆಸರುವಾಸಿಯಾಗಿದ್ದಾರೆ. ಕಮಲ್ ಹಾಸನ್ ನಟಿ ಸಾರಿಕಾರನ್ನು ವಿವಾಹವಾಗಿದ್ದು, ಅವರಿಗೆ ಶ್ರುತಿ ಮತ್ತು ಅಕ್ಷರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ನಟಿಯರು.
ಸಿ ವಿಕ್ರಮ್ (ಅಕ್ಷಿತ ವಿಕ್ರಮ್):
ಸಿ ವಿಕ್ರಮ್ ಅಕಾ ಚಿಯಾನ್ ವಿಕ್ರಮ್ ಕೆನಡಿ ಜಾನ್ ವಿಕ್ಟರ್ ತಮಿಳು ಚಿತ್ರರಂಗದ ಫೇಮಸ್ ನಟರಲ್ಲಿ ಒಬ್ಬರು. ಶೈಲಜಾ ಬಾಲಕೃಷ್ಣನ್ ಅವರನ್ನು ವಿವಾಹವಾಗಿರುವ ಇವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗ ಧ್ರುವಕೃಷ್ಣ ಮತ್ತು ಮಗಳು ಅಕ್ಷಿತಾ. ಅಕ್ಷಿತಾ ಮನು ರಂಜಿತ್ ಅವರನ್ನು ಮದುವೆಯಾಗಿದ್ದಾರೆ.
ಮೋಹನ್ ಲಾಲ್ (ವಿಸ್ಮಯ):
ಮೋಹನ್ ಲಾಲ್ ನಟನ ಜೊತೆಗೆ ನಿರ್ಮಾಪಕ, ಗಾಯಕ ಮತ್ತು ನಾಟಕ ಕಲಾವಿದರೂ ಹೌದು. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲೂ (ಕಂಪನಿ,ತೇಜ್) ಕೆಲಸ ಮಾಡಿದ್ದಾರೆ. ಮೋಹನ್ ಲಾಲ್ಗೆ ಮಗ ಪ್ರಣವ್ ಮತ್ತು ಮಗಳು ವಿಸ್ಮಯಾ ಇದ್ದಾರೆ. ವಿಸ್ಮಯಾ ಸಾಮಾನ್ಯವಾಗಿ ಕ್ಯಾಮೆರಾದಿಂದ ದೂರವಿರಲು ಬಯಸುತ್ತಾರೆ.
ಸತ್ಯರಾಜ್ ( ದಿವ್ಯಾ ಸತ್ಯರಾಜ್):
'ಬಾಹುಬಲಿ' ಚಿತ್ರದಲ್ಲಿ ಕಟ್ಟಪ್ಪನ ಪಾತ್ರದಲ್ಲಿ ನಟಿಸಿದ ದಕ್ಷಿಣ ನಟ ಸತ್ಯರಾಜ್ ಮಗ ಸಿಬಿರಾಜ್ ಕೂಡ ನಟ. ಮಗಳು ದಿವ್ಯಾ ವೃತ್ತಿಯಲ್ಲಿ ಪೌಷ್ಟಿಕ ತಜ್ಞೆ. ಈ ವಿಷಯದಲ್ಲಿ ಎಂ.ಫಿಲ್ ಮಾಡಿದ್ದು, ಪ್ರಸ್ತುತ ಪಿಎಚ್ಡಿ ಓದುತ್ತಿದ್ದಾರೆ. ಇದಲ್ಲದೇ,ಆಹಾರ ಮತ್ತು ಪೋಷಣೆಯ ಬಗ್ಗೆ ಪುಸ್ತಕವನ್ನೂ ಬರೆಯುತ್ತಿದ್ದಾರೆ. ದಿವ್ಯಾ ಇತ್ತೀಚೆಗೆ ತಮಿಳು ನಿರಾಶ್ರಿತರನ್ನು ಅಪೌಷ್ಟಿಕತೆ ಮತ್ತು ರಕ್ತಹೀನತೆಯಂತಹ ಕಾಯಿಲೆಗಳಿಂದ ರಕ್ಷಿಸಲು ಆರೋಗ್ಯಕರ ಆಹಾರ ಮತ್ತು ವಿಟಮಿನ್ ಚಿಕಿತ್ಸೆಯ ಬಗ್ಗೆ ಜಾಗೃತಿ ಶಿಬಿರವನ್ನು ಆಯೋಜಿಸಿದ್ದರು.
ಮಮ್ಮುಟ್ಟಿ (ಕುಟ್ಟಿ ಸುರುಮಿ):
ಮುಮ್ಮುಟ್ಟಿ ಮಲಯಾಳಂ ಸೂಪರ್ಸ್ಟಾರ್, ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲೂ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಅವರಿಗೆ ಕುಟ್ಟಿ ಸುರುಮಿ ಮತ್ತು ಮಗ ದುಲ್ಕಿರ್ ಸಲ್ಮಾನ್ ಮಕ್ಕಳು. ದುಲ್ಕಿರ್ ದಕ್ಷಿಣ ಚಿತ್ರಗಳ ನಟ ಕೂಡ. ಲೈಮ್ಲೈಟ್ನಿಂದ ದೂರದಲ್ಲಿರುವ ಕುಟ್ಟಿ ಸುರುಮಿ, ಡಾ. ಮೊಹಮ್ಮದ್ ರೆಹನ್ ಅವರನ್ನು ವರಿಸಿದ್ದಾರೆ.
ಮೋಹನ್ ಬಾಬು (ಮಂಚು ಲಕ್ಷ್ಮಿ):
ಮೋಹನ್ ಬಾಬು ಎರಡು ಮದುವೆಯಾಗಿದ್ದು, ಮೊದಲ ಹೆಂಡತಿಗೆ ವಿದ್ಯಾ ದೇವಿಯಿಂದ ಮಗ ಮಂಚು ವಿಷ್ಣು ಮತ್ತು ಮಗಳು ಮಂಚು ಲಕ್ಷ್ಮಿ ಎಂಬ ಮಕ್ಕಳಿವೆ. ಮತ್ತು ಎರಡನೇ ಹೆಂಡತಿ ನಿರ್ಮಲಾ ದೇವಿಗೆ ಮಂಚು ಮನೋಜ್ ಎಂಬ ಮಗನಿದ್ದಾನೆ. ಮಂಚು ಲಕ್ಷ್ಮಿ ನಟಿ.