ಆದಿತ್ಯ ಪಂಚೋಲಿ - ಅಧ್ಯಾಯನ್ ಸುಮನ್ ಜೊತೆ ಡೇಟಿಂಗ್ ಮಾಡಿದ್ದಾರೆ ಕಂಗನಾ!
ಕಂಗನಾ ರಣಾವತ್ ಈ ದಿನಗಳಲ್ಲಿ ಸದಾ ಚರ್ಚೆಯಲ್ಲಿರುವ ನಟಿ. ಈ ಬೋಲ್ಡ್ ನಟಿಯ ಪರ್ಸನಲ್ ಲೈಫ್ ಸಹ ಸಾಕಷ್ಟು ಸುದ್ದಿಯಾಗಿತ್ತು. ನಟ ಆದಿತ್ಯ ಪಂಚೋಲಿಯಿಂದ ಹಿಡಿದು, ಅಧ್ಯಾಯನ್ ಸುಮನ್ವರೆಗೆ ಕೆಲವರ ಜೊತೆ ಡೇಟ್ ಮಾಡಿದ್ದರು. ಇವರ ವಿವಾದತ್ಮಕ ಲವ್ ಲೈಫ್ನ ಬಗ್ಗೆ ಇಲ್ಲಿದೆ ಮಾಹಿತಿ.
ಕಂಗನಾ ರಣಾವತ್ ಬಾಲಿವುಡ್ನ ಬೋಲ್ಡ್ ನಟಿ. ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ಮಾಫಿಯಾ ಹಾಗೂ ಸ್ವಜನಪಕ್ಷಪಾತದ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದೇ ಇವರೆನ್ನಬಹುದು.
ನಟಿಯ ಲವ್ ಆಫೇರ್ಗಳು ಸಖತ್ ವಿವಾದವನ್ನು ಹುಟ್ಟು ಹಾಕಿದ್ದವು.
ಕಂಗನಾ ಡೇಟ್ ಮಾಡಿದ್ದ ಪುರುಷರ ಬಗ್ಗೆ ಇಲ್ಲಿದೆ ವಿವರ.
ಆದಿತ್ಯ ಪಂಚೋಲಿಯಿಂದ ಅಧ್ಯಾಯನ್ ಸುಮನ್ವರೆಗೆ ಕಂಗನಾಳ ಹೆಸರು ಲಿಂಕ್ ಅಪ್ ಆಗಿತ್ತು.
ಆದಿತ್ಯ ಪಾಂಚೋಲಿ:
ಕಂಗನಾ ಅವರ ಮೊದಲ ಮತ್ತು ಟಾಪ್ ಲವ್ ಆಫೇರ್ ಆದಿತ್ಯ ಪಾಂಚೋಲಿ ಜೊತೆಯದು. 20 ವರ್ಷ ವಯಸ್ಸಿನ ವ್ಯತ್ಯಾಸ ಮತ್ತು ಇಬ್ಬರು ಮಕ್ಕಳ ವಿವಾಹಿತ ವ್ಯಕ್ತಿಯಾಗಿದ್ದ ಪಾಂಚೋಲಿ ಜೊತೆ ರಿಲೆಷನ್ಶಿಪ್ನಲ್ಲಿದ್ದರು ನಟಿ. ಕಂಗನಾರ ಹೊಸ ಮನೆಗೆ ಅದಿತ್ಯ ಹಣ ನೀಡಿದ್ದರು. ಅಲ್ಲಿ ಅವರು ನಟಿ ಮೇಲೆ ದೌರ್ಜನ್ಯ ಎಸಗುತ್ತಿದ್ದರು ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದೂ ಸುದ್ದಿಯಾಗಿತ್ತು.
ಹೃತಿಕ್ ರೋಷನ್:
ಬಾಲಿವುಡ್ನಲ್ಲಿ ಹೆಚ್ಚು ಚರ್ಚೆಯಾದ ಹಾಗೂ ಅತ್ಯಂತ ಕೆಟ್ಟ ಕಾರಣಕ್ಕೆ ಫೇಮಸ್ ಆದ ಸಂಬಂಧ ಈ ಜೋಡಿಯದ್ದು. ಕಂಗನಾ ಇದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುವುದಿಲ್ಲ. ಕಾರ್ಯಕ್ರಮವೊಂದರಲ್ಲಿ ಅವರ ಸಂಬಂಧದ ಬಗ್ಗೆ ಕೆಲವು ರಹಸ್ಯಗಳನ್ನು ಬಹಿರಂಗಗೊಳಿಸಿದ್ದರು. ಹೃತಿಕ್ ಮತ್ತು ಕಂಗನಾ ಪರಸ್ಪರ ಕೊಳಕು ಆರೋಪಗಳನ್ನು ಮಾಡಿ ಕೊಂಡು, ಕಿತ್ತಾಡಿಕೊಂಡಿದ್ದರು.
ನಿಕೋಲಸ್ ಲಾಫರ್ಟಿ:
ಕಂಗನಾ ಬ್ರಿಟಿಷ್ ಡಾಕ್ಟರ್ ನಿಕೋಲಸ್ ಜೊತೆ ಸಂಬಂಧ ಹೊಂದಿದ್ದರು. ಅವರು ಮುಂಬೈಗೆ ಬಂದಾಗಿ ನೀಡಿದಾಗ ಈ ಇಬ್ಬರು ಭೇಟಿಯಾಗಿದ್ದರು. ಈ ಲಾಂಗ್ ಡಿಸ್ಟೆನ್ಸ್ ರಿಲೆಷನ್ಶಿಪ್ ಹೆಚ್ಚು ದಿನ ಮುಂದುವರೆಯಲಿಲ್ಲ. ಇದು ಕೇವಲ ಪಬ್ಲಿಸಿಟಿ ಸ್ಟಂಟ್ ಎಂದು ಊಹಾಪೋಹಗಳು ಹುಟ್ಟಿಕೊಂಡಿದ್ದವು.
ಅಧ್ಯಾಯನ್ ಸುಮನ್:
ಕಂಗನಾ ಅಧ್ಯಾಯನ್ ಸುಮನ್ ಜೊತೆ ಸ್ವಲ್ಪ ಸಮಯ ಡೇಟಿಂಗ್ ಮಾಡಿದ್ದಾರೆ. 2009ರಲ್ಲಿ ರಾಜ್ ಸಿನಿಮಾ ಸೆಟ್ನಲ್ಲಿ ಅವರ ಭೇಟಿಯಾಯಿತು. ಆದರೆ ಇವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ತನ್ನ ಮಗ ಕೆರಿಯರ್ಕಡೆ ಗಮನ ಹರಿಸಬೇಕೆಂದು ತಂದೆ ಶೇಖರ್ ಸುಮನ್ ಬಯಸಿದ್ದು, ಬ್ರೇಕಪ್ಗೆ ಕಾರಣವಾಯಿತೆಂದು ಹೇಳಲಾಗಿತ್ತು.
ಅಜಯ್ ದೇವ್ಗನ್:
ಸುಮನ್ ಜೊತೆ ಬ್ರೇಕಪ್ ನಂತರ 2010ರಲ್ಲಿ ಅಜಯ್ ದೇವ್ಗನ್ ಜೊತೆ ಕಂಗನಾಳ ಹೆಸರು ಕೇಳಿ ಬಂದಿತ್ತು. ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಶೂಟಿಂಗ್ ಸಮಯದಲ್ಲಿ ಇಬ್ಬರೂ ಭೇಟಿಯಾದರು. ಅಜಯ್ ಈ ನಟಿಗಾಗಿ ಪತ್ನಿ ಕಾಜೋಲ್ ಅನ್ನು ಬಿಡಲು ರೆಡಿ ಇರಲಿಲ್ಲ. ವಿವಾಹಿತ ಪುರುಷನೊಂದಿಗೆ ಇನ್ವಾಲ್ ಆಗುವುದು ತಪ್ಪು ಎಂದು ಕಂಗನಾ ನಂತರ ಒಪ್ಪಿಕೊಂಡರು. ಕಾಜೋಲ್ ಅಜಯ್ ಅವರನ್ನು ಕಂಗನಾದಿಂದ ದೂರವಿರಲು ಕೇಳಿಕೊಂಡರು, ಇಲ್ಲವಾದಲ್ಲಿ ಅವನನ್ನು ಬಿಟ್ಟು ಹೋಗುವುದಾಗಿ ಹೇಳಿದ್ದರಂತೆ.