MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಕನ್ನಡತಿ ಪವಿತ್ರಾ ಲೋಕೇಶ್ ಗಂಡ ನರೇಶ್‌ಗೆ ನಪುಂಸಕ ನಟನಾಗುವ ಆಸೆ; ಹಾಗಾದ್ರೆ ಸಂಸಾರ ಹೇಗೆ?

ಕನ್ನಡತಿ ಪವಿತ್ರಾ ಲೋಕೇಶ್ ಗಂಡ ನರೇಶ್‌ಗೆ ನಪುಂಸಕ ನಟನಾಗುವ ಆಸೆ; ಹಾಗಾದ್ರೆ ಸಂಸಾರ ಹೇಗೆ?

ಕನ್ನಡತಿ ಪವಿತ್ರಾ ಲೋಕೇಶ್ ಅವರ ಹಾಲಿ ಪತಿ ನಟ ನರೇಶ್ ಅವರು ತೆಲುಗು ಚಿತ್ರರಂಗದಲ್ಲಿ 52 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ, ತನ್ನ ವಯಸ್ಸು ಗೂಗಲ್‌ನಲ್ಲಿ 65 ಆಗಿದ್ದರೂ ಕೇವಲ 23 ಎಂದು ಹೇಳಿಕೊಳ್ಳುವ ಅವರು ತಮಗೆ ನಪುಂಸಕನಾಗಿ ನಟಿಸುವ ಆಸೆಯಿದೆ ಎಂದು ಹೇಳಿದ್ದಾರೆ.

1 Min read
Sathish Kumar KH
Published : Jan 19 2025, 06:44 PM IST| Updated : Jan 19 2025, 06:50 PM IST
Share this Photo Gallery
  • FB
  • TW
  • Linkdin
  • Whatsapp
14

ಕನ್ನಡತಿ ಪವಿತ್ರಾ ಲೋಕೇಶ್ ಅವರ ಗಂಡ ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ ಜನವರಿ 20 ರಂದು ತಮ್ಮ 65 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ತಮ್ಮ ವೃತ್ತಿಜೀವನದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನರೇಶ್ ಕೆಲವು ತಿಂಗಳ ಹಿಂದೆ ನರೇಶ್ ತಮ್ಮ 3ನೇ ಪತ್ನಿ ರಮ್ಯ ಅವರಿಂದ ದೂರಾಗಿ ಪವಿತ್ರ ಲೋಕೇಶ್ ಅವರನ್ನು ಮದುವೆಯಾದರು.

24

ನರೇಶ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 52 ವರ್ಷಗಳಿಂದ ಚಿತ್ರರಂಗದಲ್ಲಿ ಇರುವುದಕ್ಕೆ ತುಂಬಾ ಸಂತೋಷವಾಗಿದೆ. ಕೊನೆಯುಸಿರಿನವರೆಗೂ ನಟಿಸುತ್ತಲೇ ಇರುತ್ತೇನೆ. ಇಲ್ಲಿಯವರೆಗೆ ಹಲವು ಪಾತ್ರಗಳನ್ನು ಮಾಡಿದ್ದೇನೆ. ಆದರೆ, ನನಗೆ ಒಂದು ಕನಸಿನ ಪಾತ್ರವಿದೆ. ಅದನ್ನು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ ಎಂದು ಹೇಳಿದ್ದಾರೆ.

34

ಅದೇನೆಂದರೆ ನನಗೆ ನಪುಂಸಕನ ಪಾತ್ರದಲ್ಲಿ ನಟಿಸಬೇಕೆಂಬ ಆಸೆ ಇದೆ. ನಟನಾಗಿ ಯಾವುದೇ ಸವಾಲನ್ನು ನಾನು ಸ್ವೀಕರಿಸುತ್ತೇನೆ. ನಪುಂಸಕನ ಪಾತ್ರ ಬಂದರೆ ಖಂಡಿತ ಮಾಡುತ್ತೇನೆ. ಇನ್ನು ನನ್ನ ವಯಸ್ಸಿನ ಬಗ್ಗೆ ಗೂಗಲ್‌ನಲ್ಲಿ ತಪ್ಪಾಗಿ ತೋರಿಸಲಾಗುತ್ತಿದೆ ಎಂದು ತಮಾಷೆ ಮಾಡಿದರು. ಗೂಗಲ್ ತೋರಿಸುವಷ್ಟು ವಯಸ್ಸು ನಿಜಕ್ಕೂ ನನಗಿಲ್ಲ. ನನ್ನ ಮನಸ್ಸಿನಲ್ಲಿ ನನ್ನ ವಯಸ್ಸು  ಕೇವಲ 23 ವರ್ಷಕ್ಕೆ ಸ್ಥಗಿತಗೊಂಡಿದೆ ಎಂದು ಹೇಳಿದರು.

44
ramarao on duty

ramarao on duty

ಇದಾದ ನಂತರ ಕೇಂದ್ರ ಸರ್ಕಾರದಿಂದ ನೀಡಲಾಗುವ ಪದ್ಮ ಪ್ರಶಸ್ತಿಗಳ ಬಗ್ಗೆ ಮಾತನಾಡಿ, ನನ್ನ ತಾಯಿ ವಿಜಯ ನಿರ್ಮಲ ಅವರು ಬದುಕಿದ್ದಾಗ ಅವರಿಗೆ ಪದ್ಮ ಪ್ರಶಸ್ತಿಗ ಕೊಡಿಸುವುದಕ್ಕಾಗು ದೆಹಲಿವರೆಗೂ ಹೋಗಿ ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಲಿಲ್ಲ. ಈ ಹಿಂದೆ ಕೆಸಿಆರ್ ಸರ್ಕಾರ ಇದ್ದಾಗ ಪದ್ಮ ಪ್ರಶಸ್ತಿಗಾಗಿ ವಿಜಯ ನಿರ್ಮಲ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ ಆಗಲೂ ಪದ್ಮ ಪ್ರಶಸ್ತಿ ಸಿಗಲಿಲ್ಲ. ನಾನು ಯಾವ ಸರ್ಕಾರವನ್ನೂ ಟೀಕಿಸುವುದಿಲ್ಲ. ಕನಿಷ್ಠ ಮರಣೋತ್ತರವಾಗಿ ಆದರೂ ಅಮ್ಮನಿಗೆ ಪದ್ಮ ಪ್ರಶಸ್ತಿ ಸಿಗುವಂತೆ ಹೋರಾಟ ಮಾಡುತ್ತೇನೆ ಎಂದು ನರೇಶ್ ಹೇಳಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved