MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Kangana Ranaut: ಪದ್ಮಶ್ರೀ ವಾಪಸ್ ಕೊಡ್ತೀನಿ ಎಂದ ನಟಿ

Kangana Ranaut: ಪದ್ಮಶ್ರೀ ವಾಪಸ್ ಕೊಡ್ತೀನಿ ಎಂದ ನಟಿ

Kangana Ranaut: ಪದ್ಮಶ್ರೀ ವಾಪಸ್ ಕೊಡ್ತೀನಿ ಎಂದ ಕ್ವೀನ್ ನಟಿ ಆದ್ರೆ ಒಂದು ಕಂಡೀಷನ್ ಇದೆ, ಏನದು ನಟಿಯ ಹೊಸ ವರಸೆ ?

2 Min read
Author : Suvarna News
| Updated : Nov 14 2021, 11:40 AM IST
Share this Photo Gallery
  • FB
  • TW
  • Linkdin
  • Whatsapp
110

ಕಂಗನಾ ರಣಾವತ್(Kangana Ranaut) ಸ್ವಾತಂತ್ರ್ಯ ಕುರಿತ ಹೇಳಿಕೆಗಾಗಿ ಭಾರೀ ಟೀಕೆ ಎದುರಿಸಿದ ಬೆನ್ನಲ್ಲೇ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ ತಮ್ಮ ಪ್ರಶಸ್ತಿ ಹಿಂದಿರುಗಿಸಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದಾರೆ.

210

1947 ರಲ್ಲಿ ನಡೆದ ಘಟನೆಯ ಬಗ್ಗೆ ಯಾರಾದರೂ ತನಗೆ ತಿಳಿಹೇಳಿದರೆ ಪದ್ಮಶ್ರೀಯನ್ನು(Padma Shri) ಹಿಂದಿರುಗಿಸಲು ಸಿದ್ಧ ಎಂದು ನಟಿ ಕಂಗನಾ ರಣಾವತ್ ಅವರು ಹೇಳಿದ್ದಾರೆ. ಈಗಾಗಲೇ ನಟಿಯ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದ್ದು ಜನ ನಟಿಯ ಮನೆಯ ಮುಂದೆ ಜಮಾಯಿಸಿದ್ದರು.

310

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾರತವು 2014 ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು ಎಂದು ಕಂಗನಾ ಹೇಳಿದ್ದರು. 1947 ರಲ್ಲಿ ದೇಶದ ಸ್ವಾತಂತ್ರ್ಯವಲ್ಲ ಭಿಕ್ಷೆ ಪಡೆದಿತ್ತು ಎಂದು ಹೇಳಿದ್ದರು.

410

1857 ರ ಸ್ವಾತಂತ್ರ್ಯಕ್ಕಾಗಿ ಮೊದಲ ಸಾಮೂಹಿಕ ಹೋರಾಟದ ಅದೇ ಸಂದರ್ಶನದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್ ಜಿ ಅವರಂತಹ ಶ್ರೇಷ್ಠರ ತ್ಯಾಗ ಎಂದಿದ್ದಾರೆ.

510

1857 ನನಗೆ ಗೊತ್ತು. ಆದರೆ 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುದು ನನಗೆ ತಿಳಿದಿಲ್ಲ, ಯಾರಾದರೂ ನನ್ನ ಅರಿವಿಗೆ ತರಲು ಸಾಧ್ಯವಾದರೆ ನಾನು ನನ್ನ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಇದಕ್ಕೆ ನನಗೆ ಸಹಾಯ ಮಾಡಿ ಎಂದಿದ್ದಾರೆ ನಟಿ

610

ನಾನು ರಾಣಿ ಲಕ್ಷ್ಮಿ ಬಾಯಿಯವರ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. 1857 ರ ಸ್ವಾತಂತ್ರ್ಯದ ಮೊದಲ ಹೋರಾಟದ ಬಗ್ಗೆ ವ್ಯಾಪಕವಾಗಿ ಸಂಶೋಧನೆ ಮಾಡಿದ್ದೇನೆ. ರಾಷ್ಟ್ರೀಯತೆಯು ಬಲಪಂಥೀಯವಾಗಿ ಏರಿತು. ಆದರೆ ಅದು ಏಕೆ ಹಠಾತ್ ಕೊನೆಯಾಯಿತು ಎಂದು ಪ್ರಶ್ನಿಸಿದ್ದಾರೆ.

710

ಏಕೆ ಗಾಂಧಿಯವರು ಭಗತ್ ಸಿಂಗ್ ಅವರನ್ನು ಸಾಯಲು ಬಿಟ್ಟರು ? ಏಕೆ ನೇತಾ ಬೋಸ್ ಕೊಲ್ಲಲ್ಪಟ್ಟರು ? ಅವರೇಕೆ ಗಾಂಧಿಯವರ ಬೆಂಬಲವನ್ನು ಪಡೆಯಲಿಲ್ಲ? ಬಿಳಿಯ ವ್ಯಕ್ತಿ ಏಕೆ ವಿಭಜನೆಯ ಗೆರೆಯನ್ನು ಎಳೆದಿದ್ದಾರೆ ? ಎಂದು ಪ್ರಶ್ನೆ ಮಾಡಿದ್ದಾರೆ.

810

ಇದರ ಪರಿಣಾಮ ಎದುರಿಸಲು ಸಿದ್ಧ ಎಂದು ಕಂಗನಾ ರಣಾವತ್ ಹೇಳಿದ್ದಾರೆ. 2014 ರಲ್ಲಿ ಆಜಾದಿಗೆ ಸಂಬಂಧಿಸಿದಂತೆ ನಾನು ನಿರ್ದಿಷ್ಟವಾಗಿ ಹೇಳಿದ್ದೇನೆಂದರೆ ಭೌತಿಕ ಆಜಾದಿ ನಮ್ಮಲ್ಲಿರಬಹುದು. ಆದರೆ 2014 ರಲ್ಲಿ ಭಾರತದ ಪ್ರಜ್ಞೆ ಮತ್ತು ಆತ್ಮಸಾಕ್ಷಿಯನ್ನು ಮುಕ್ತಗೊಳಿಸಲಾಯಿತು ಎಂದಿದ್ದಾರೆ.

910

ಸತ್ತ ನಾಗರಿಕತೆಯು ಜೀವಂತವಾಯಿತು. ಅದರ ರೆಕ್ಕೆಗಳನ್ನು ಬೀಸಿತು. ಈಗ ಘರ್ಜಿಸುತ್ತಿದೆ. ಎತ್ತರಕ್ಕೆ ಏರುತ್ತಿದೆ. ತಪ್ಪಿತಸ್ಥ ಮನಸ್ಸಾಕ್ಷಿ ಇರುವವರು ಸುಟ್ಟಗಾಯವನ್ನು ಅನುಭವಿಸುತ್ತಾರೆ. ಅದರ ಬಗ್ಗೆ ಏನೂ ಮಾಡಲಾಗುವುದಿಲ್ಲ ಎಂದು ಸ್ಪಷ್ಟನೆಯಲ್ಲೂ ಮೊನಚಾದ ಒಂದು ಟಾಂಗ್ ಕೊಟ್ಟಿದ್ದಾರೆ.

1010

ಆಮ್ ಆದ್ಮಿ ಪಕ್ಷವು ಮುಂಬೈ ಪೊಲೀಸರಿಗೆ ದೇಶದ್ರೋಹಿ ಮತ್ತು ಪ್ರಚೋದನಕಾರಿ ಕಾಮೆಂಟ್‌ಗಳಿಗಾಗಿ ಪ್ರಕರಣವನ್ನು  ದಾಖಲಿಸಲು ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಸ್ಪೆಕ್ಟ್ರಮ್‌ನಾದ್ಯಂತದ ರಾಜಕಾರಣಿಗಳು ಅವರ ಕಾಮೆಂಟ್‌ಗಳಿಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ಕಂಗನಾ ರಣಾವತ್
ನಟಿ

Latest Videos
Recommended Stories
Recommended image1
ರಶ್ಮಿಕಾಗೆ ವಾರ್ನಿಂಗ್ ಮಾಡಿದ್ದ ಅತ್ತೆ.. ಅದೊಂದು ಕಂಡೀಷನ್‌ ಒಪ್ಪಿಯೇ ವಿಜಯ್ ಮನೆ ಸೇರಲು ಓಕೆ ಎಂದಿರೋ ರಶ್ಮಿಕಾ ಮಂದಣ್ಣ!
Recommended image2
'ಮೈ ಡಾರ್ಲಿಂಗ್ ರುಷಿ' ಎಂದು ಸೊಸೆಯನ್ನು ಕರೆದು ಮುದ್ದಾಡಿದ ಅತ್ತೆ ಮಾಧವಿ; ವಿಜಯ್ ರಿಯಾಕ್ಷನ್ ಏನಿತ್ತು ಗೊತ್ತಾ?
Recommended image3
ವಿಜಯ್​ ಜೊತೆ 2018ರಲ್ಲಿ ಮೊದಲ ಬಾರಿ ಲಿಪ್​ಲಾಕ್​​: ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved