ಖಾನ್ಗಳ ಕಾದಾಟ; ರಾಧೆ ತಂದ ವರಿ, ಸಲ್ಮಾನ್ VS ಕಮಾಲ್
ಮುಂಬೈ(ಜೂ. 07) ಕೊರೋನಾ ನಡುವೆ ಬಾಲಿವುಡ್ ನಲ್ಲಿ ಖಾನ್ ಗಳ ಸಮರ ನಡೆಯುತ್ತಿದೆ. ನಟ ಕಮಾಲ್ ಆರ್ ಖಾನ್ ಅವಹೇಳನಕಾರಿ ಹೇಳಿಕೆ ನೀಡುತ್ತ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಲ್ಮಾನ್ ಖಾನ್ ಒತ್ತಾಯಿಸಿದ್ದಾರೆ.
ಬಾಲಿವುಡ್ ಬಿಗ್ ಬಾಸ್ ಸಲ್ಮಾನ್ ಖಾನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನನ್ನ ಯೋಜನಗೆಳ ಬಗ್ಗೆ ಕಮಾಲ್ ಆರ್ ಖಾನ್ ವಿಡಿಯೋ ಶೇರ್ ಮಾಡಿಕೊಳ್ಳುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕಮಾಲ್ ಆರ್ ಖಾನ್ ಪರ ವಕೀಲ ಮನೋಜ್ ಗಡ್ಕರಿ ಮಾಹಿತಿ ನೀಡಿದ್ದು ತಮ್ಮ ಕಕ್ಷಿದಾರರು ಯಾವುದೇ ಮಾನಹಾನಿ ಮಾತನ್ನಾಡಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿದ್ದ 'ರಾಧೆ' ಚಿತ್ರದ ವಿಮರ್ಶೆ ಕುರಿತು ಕಮಾಲ್ ಆರ್ ಖಾನ್ ವಿರುದ್ಧ ಸಲ್ಮಾನ್ ಖಾನ್ ಮೊಕದ್ದಮೆ ದಾಖಲಿಸಿದ್ದರು.
ನ್ಯಾಯಾಲಯ ಹೇಳಿದ್ದರೂ ಮಾನಹಾನಿ ಟೀಕೆ ಮಾಡುತ್ತಿದ್ದಾರೆ ಎನ್ನುವುದು ಸಲ್ಮಾನ್ ಕಡೆಯ ಆರೋಪ. ಒಟ್ಟಿನಲ್ಲಿ ಕೊರೋನಾ ಕಾರಣಕ್ಕೆ ಥಂಡಾಗಿದ್ದ ಬಾಲಿವುಡ್ ನಲ್ಲಿ ಮಾನಹಾನಿ ಯುದ್ಧ ನಡೆಯುತ್ತಿದೆ.