MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಚಿರಂಜೀವಿಗೆ ಯುಕೆ ಸಂಸತ್ತಿನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ! ಬ್ರಿಟೀಷ್ ಗೌರವ ಪಡೆದ ಮೊದಲ ಭಾರತೀಯ ನಟ!

ಚಿರಂಜೀವಿಗೆ ಯುಕೆ ಸಂಸತ್ತಿನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ! ಬ್ರಿಟೀಷ್ ಗೌರವ ಪಡೆದ ಮೊದಲ ಭಾರತೀಯ ನಟ!

ದಕ್ಷಿಣದ ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ ಯುಕೆ ಸಂಸತ್ತಿನಲ್ಲಿ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬ್ರಿಟಿಷ್ ಸರ್ಕಾರದಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಈ ಗೌರವವು ತಮ್ಮ ಕೆಲಸವನ್ನು ಹುರುಪಿನಿಂದ ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ಚಿರಂಜೀವಿ ಹೇಳಿದ್ದಾರೆ.

2 Min read
Gowthami K
Published : Mar 21 2025, 01:23 PM IST| Updated : Mar 21 2025, 02:18 PM IST
Share this Photo Gallery
  • FB
  • TW
  • Linkdin
  • Whatsapp
15

ದಕ್ಷಿಣದ ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ ಯುಕೆ ಸಂಸತ್ತಿನಲ್ಲಿ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರ ಜೊತೆಗೆ ಬ್ರಿಟಿಷ್ ಸರ್ಕಾರದಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆ ಚಿರಂಜೀವಿ ಪಾಲಾಗಿದೆ.

ಮೆಗಾಸ್ಟಾರ ಚಿರಂಜೀವಿ-ಮಂಚು ಫ್ಯಾಮಿಲಿ ವಿವಾದ ಬಗ್ಗೆ ವಿಷ್ಣು ಕಾಮೆಂಟ್ ಇದು!

25

ಮಾರ್ಚ್ 19 ರಂದು ಲಂಡನ್‌ನ ಯುಕೆ ಸಂಸತ್ತಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಗಮನಾರ್ಹ ಸಾಧನೆಗೆ ಚಿರಂಜೀವಿ ಅವರ ಸಹೋದರ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮೆಗಾಸ್ಟಾರ್ ಸ್ಥಾನಕ್ಕೆ ಇಬ್ಬರು ಹೀರೋಗಳಿಂದ ಭಾರೀ ಪೈಪೋಟಿ; ರಾಮ್‌ಚರಣ್‌ಗೆ ಅರ್ಹತೆ ಇಲ್ವಾ?

35

ಸಮಾರಂಭದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪವನ್‌ , ವಾಲ್ಟೇರ್ ವೀರಯ್ಯ ಅವರ ಕಿರಿಯ ಸಹೋದರನಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. "ನಾನು ಚಿರಂಜೀವಿ ಅವರನ್ನು ಅಣ್ಣನಿಗಿಂತ ತಂದೆಯಂತೆ ಪರಿಗಣಿಸುತ್ತೇನೆ. ಜೀವನದಲ್ಲಿ ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೊಳಗಾದಾಗ ಅವರು ನನಗೆ ದಾರಿ ತೋರಿಸಿದ ವ್ಯಕ್ತಿ. ನನ್ನ ಅಣ್ಣ ಚಿರಂಜೀವಿ ನನ್ನ ಜೀವನದ ನಾಯಕ" ಎಂದು ಬರೆದುಕೊಂಡಿದ್ದಾರೆ.

ಪವನ್ ಕಲ್ಯಾಣ್ ಮೆಚ್ಚಿದ ಚಿರಂಜೀವಿಯ ಆ ಸಿನಿಮಾ: ರೀಮೇಕ್‌ಗೆ ಸಿದ್ಧತೆ.. ಆದರೆ ಆ ಚಿತ್ರ ಆರಂಭದಲ್ಲೇ?

45

ಯುಕೆಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಮೆಗಾಸ್ಟಾರ್,  ಈ ಗೌರವಕ್ಕೆ  ಕೃತಜ್ಞತೆ ಸಲ್ಲಿಸಿದ್ದು,  ಇದು ತಮ್ಮ ಕೆಲಸವನ್ನು  ಹುರುಪಿನಿಂದ ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ಹೇಳಿದರು.  ಯುಕೆ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಹಲವಾರು ಗೌರವಾನ್ವಿತ ಸದಸ್ಯರು, ಸಚಿವರು ಮತ್ತು ಅಧೀನ ಕಾರ್ಯದರ್ಶಿಗಳು, ರಾಜತಾಂತ್ರಿಕರು ನೀಡಿದ ಗೌರವಕ್ಕಾಗಿ ಹೃದಯ ತುಂಬಿ ಬಂದಿದೆ. ಟೀಮ್ ಬ್ರಿಡ್ಜ್ ಇಂಡಿಯಾದಿಂದ ಜೀವಮಾನ ಸಾಧನೆ ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಟ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಧನ್ಯವಾದ ಸಂದೇಶ ಬರೆದುಕೊಂಡಿದ್ದಾರೆ.

ಸಿಲ್ಕ್ ಸ್ಮಿತಾ ಸಾವಿಗೂ ಮುನ್ನ ಚಿರಂಜೀವಿ, ಬಾಲಯ್ಯ, ರಜನಿಕಾಂತ್ ಬಿಟ್ಟು ರವಿಚಂದ್ರನ್‌ಗೆ ಫೋನ್ ಮಾಡಿದ್ದೇಕೆ?

55

ಮಾತುಗಳು ಬರುತ್ತಿಲ್ಲ. ಆದರೆ ನನ್ನ ಪ್ರೀತಿಯ ಅಭಿಮಾನಿಗಳು, ಒಡಹುಟ್ಟಿದ ಸಹೋದರರು, ಒಡಹುಟ್ಟಿದ   ಸಹೋದರಿಯರು, ನನ್ನ ಚಲನಚಿತ್ರ ಕುಟುಂಬದ ಹಿತೈಷಿಗಳು, ಸ್ನೇಹಿತರು ಮತ್ತು ನನ್ನ ಎಲ್ಲಾ ಕುಟುಂಬ ಸದಸ್ಯರು ಮತ್ತು ನನ್ನ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಕೊಡುಗೆ ನೀಡಿದ ಮತ್ತು ನಾನು ಪ್ರತಿಪಾದಿಸುತ್ತಿರುವ ಮಾನವೀಯ ಕಾರ್ಯಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಈ ಗೌರವವು  ಮತ್ತಷ್ಟು ಹುರುಪಿನಿಂದ  ನನ್ನ ಕೆಲಸವನ್ನು ಮುಂದುವರಿಸಲು ನನ್ನನ್ನು ಪ್ರೇರೇಪಿಸುತ್ತದೆ. ಮತ್ತು ನಿಮ್ಮ ಸುಂದರ ಅಭಿನಂದನಾ ಸಂದೇಶಗಳಿಗಾಗಿ ಪ್ರತಿಯೊಬ್ಬರಿಗೂ ಪ್ರೀತಿ ಕಳಿಸುತ್ತೇನೆ ಎಂದಿದ್ದಾರೆ.

ಚಿರಂಜೀವಿ, ಬಾಲಯ್ಯ ಬಂದ್ರೂ ಕಾಲ್ ಮೇಲೆ ಕಾಲ್ ತೆಗೀಲಿಲ್ಲ, ಆದ್ರೆ ಆ ನಟ ಬಂದರೆ ಸ್ಮಿತಾ ಎದ್ದು ನಿಲ್ಲುತ್ತಿದ್ದರು!

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಭಾರತ ಸುದ್ದಿ
ಚಿರಂಜೀವಿ
Latest Videos
Recommended Stories
Recommended image1
ಸಿನಿಮಾ ಮಾಡದೇ 11 ವರ್ಷ, ಆದರೂ 300 ಕೋಟಿಯ ಒಡತಿ ಬಾಲಿವುಡ್’ನ ಈ ಎವರ್ ಗ್ರೀನ್ ಬ್ಯೂಟಿ
Recommended image2
ಒಂದೇ ವರ್ಷದಲ್ಲಿ 3ನೇ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟಿ ಮೀರಾ, ಮತ್ತೆ ಸಿಂಗಲ್ ಸಿಗ್ನಲ್
Recommended image3
ಕೆಂಪು ಸೀರೆಯಲ್ಲಿ 'ಕ್ರಶ್ಮಿಕಾ' ಬಿರುದು ಪಡೆದ ರಶ್ಮಿಕಾ; ಮದುವೆ ತಯಾರಿ ಶುರುವಾಗಿದ್ಯಾ? ಗುಟ್ಟು ರಟ್ಟಾಯ್ತಾ!?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved