MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ರತನ್ ಟಾಟಾ ಬಯೋಪಿಕ್ ಗೆ ಜೀ ಎಂಟರ್‌ಟೈನ್‌ಮೆಂಟ್ ಪ್ರಸ್ತಾಪ, ಪುಸ್ತಕ ಬಿಡುಗಡೆಗೆ ನೂರೆಂಟು ಅಡ್ಡಿ, ಸಿನೆಮಾ ಸಾಧ್ಯವೇ!

ರತನ್ ಟಾಟಾ ಬಯೋಪಿಕ್ ಗೆ ಜೀ ಎಂಟರ್‌ಟೈನ್‌ಮೆಂಟ್ ಪ್ರಸ್ತಾಪ, ಪುಸ್ತಕ ಬಿಡುಗಡೆಗೆ ನೂರೆಂಟು ಅಡ್ಡಿ, ಸಿನೆಮಾ ಸಾಧ್ಯವೇ!

ರತನ್ ಟಾಟಾ ಅವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡೋಣ ಅಂತ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಪುನೀತ್ ಗೋಯೆಂಕಾ ಹೇಳಿದ್ದಾರೆ. ಟಾಟಾ ಗ್ರೂಪ್‌ನ ಒಪ್ಪಿಗೆ ಸಿಕ್ಕಿದ ಮೇಲೆ, ಜೀ ಸ್ಟುಡಿಯೋಸ್‌ನಲ್ಲಿ ಈ ಸಿನಿಮಾ ನಿರ್ಮಿಸಿ, ರತನ್ ಟಾಟಾ ಅವರಿಗೆ ಗೌರವ ಸಲ್ಲಿಸೋದಾಗಿ ZEEL ಅಧ್ಯಕ್ಷ ಆರ್. ಗೋಪಾಲನ್ ತಿಳಿಸಿದ್ದಾರೆ.

3 Min read
Gowthami K
Published : Oct 11 2024, 05:51 PM IST| Updated : Oct 11 2024, 05:58 PM IST
Share this Photo Gallery
  • FB
  • TW
  • Linkdin
  • Whatsapp
16

ದೇಶದ ಅತಿ ದೊಡ್ಡ ಬಿಸಿನೆಸ್ ಟ್ರಸ್ಟ್ ಟಾಟಾ ಸನ್ಸ್‌ನ ಗೌರವ ಅಧ್ಯಕ್ಷ ರತನ್ ಟಾಟಾ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಇದರಿಂದ ಇಡೀ ದೇಶವೇ ದುಃಖದಲ್ಲಿ ಮುಳುಗಿಹೋಯ್ತು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಭಾರತ ಮಾತ್ರವಲ್ಲ, ಇಡೀ ಪ್ರಪಂಚವೇ ಹೆಮ್ಮಪಡುವ ವ್ಯಕ್ತಿಯಾಗಿದ್ದರು ರತನ್ ಟಾಟಾ. ಅವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡೋ ಪ್ರಸ್ತಾಪನೆ ಜೀ ಸಂಸ್ಥೆಯಿಂದ ಬಂದಿದೆ.

26

ಟಾಟಾ ಗ್ರೂಪ್‌ನ ಒಪ್ಪಿಗೆ ಸಿಕ್ಕಿದ ಮೇಲೆ, ಜೀ ಸ್ಟುಡಿಯೋಸ್‌ನಲ್ಲಿ ಈ ಸಿನಿಮಾ ನಿರ್ಮಿಸಿ, ರತನ್ ಟಾಟಾ ಅವರಿಗೆ ಗೌರವ ಸಲ್ಲಿಸೋದಾಗಿ ZEEL ಅಧ್ಯಕ್ಷ ಆರ್. ಗೋಪಾಲನ್ ತಿಳಿಸಿದ್ದಾರೆ. ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ಅಕ್ಟೋಬರ್ 10 ರಂದು ಪ್ರಸಿದ್ಧ ಉದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ಅದರ MD ಮತ್ತು CEO ಪುನೀತ್ ಗೋಯೆಂಕಾ, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರ ಜೀವನ ಚರಿತ್ರೆಯನ್ನ ಸಿನಿಮಾ ಮಾಡೋ ಪ್ರಸ್ತಾಪನೆ ಮಾಡಿದ್ದಾರೆ. ಟಾಟಾ ಅವರು ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನ ಸ್ಮರಿಸಿಕೊಂಡಿದ್ದಾರೆ.

36

ಇನ್ನು 2022ರ ಜನವರಿಯಲ್ಲಿ ಕೈಗಾರಿಕೋದ್ಯಮಿ, ದೇಶದ ಅತಿದೊಡ್ಡ ಸಮೂಹ ಟಾಟಾ ಸನ್ಸ್ ನ (TATA Sons) ಮಾಜಿ ಚೇರ್ಮನ್ ರತನ್ ಟಾಟಾ (Ratan Tata) ಅವರ ಜೀವನ ಚರಿತ್ರೆಯನ್ನು ಹಾರ್ಪರ್ ಕಾಲಿನ್ಸ್ (HarperCollins ) ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿತ್ತು. ಸಂಪೂರ್ಣ ನೈಜ ಅಂಶಗಳನ್ನು ಒಳಗೊಂಡ ನಾನ್-ಫಿಕ್ಷನ್ (Non-Fiction) ಜೀವನಚರಿತ್ರೆಯನ್ನು ಕೇರಳ (Kerala) ಮೂಲದ ಮಾಜಿ ಅಧಿಕಾರಿ ಐಎಎಸ್ ಥಾಮಸ್ ಮ್ಯಾಥ್ಯೂ (Thomas Mathew) ಬರೆದಿದ್ದು, ಜಾಗತಿಕ ಹರಾಜಿನಲ್ಲಿ ಇದನ್ನು ಖರೀದಿಸುವಲ್ಲಿ ಹಾರ್ಪರ್ ಕಾಲಿನ್ಸ್ ಯಶಸ್ವಿಯಾಗಿತ್ತು. ಭಾರತೀಯ ಕೈಗಾರಿಕಾ ಕ್ಷೇತ್ರದ ಅತ್ಯಂತ ಪ್ರಸಿದ್ಧ ಮುಖವಾಗಿರುವ ರತನ್ ಟಾಟಾ ಅವರ ಪುಸ್ತಕವನ್ನು ಪ್ರಕಟಿಸುವ ಹಕ್ಕು ಹಾರ್ಪರ್ ಕಾಲಿನ್ಸ್ ಪಾಲಾಗಿತ್ತು. ಈ ಪುಸ್ತಕದಲ್ಲಿ ರತನ್ ಟಾಟಾ ಅವರ ಬಾಲ್ಯ, ಕಾಲೇಜು ದಿನಗಳು ಹಾಗೂ ಆರಂಭಿಕ ದಿನಗಳಲ್ಲಿ ಅವರಿಗೆ ಪ್ರಭಾವ ಬೀರಿದ ವ್ಯಕ್ತಿಗಳ ಕುರಿತಾದ ವಿವರಗಳನ್ನು ಒಳಗೊಂಡಿದೆ.

46

ಬಹು ವರ್ಷಗಳಿಂದ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರ ಖಾಸಗಿ ಪತ್ರಗಳು, ಛಾಯಾಚಿತ್ರಗಳು ಕುರಿತಾದ ಮಾಹಿತಿಯನ್ನು ಹೊಂದಿದ್ದ ಮ್ಯಾತ್ಯೂ, ಟಾಟಾ ಮೋಟಾರ್ಸ್ (Tata Motars) ಅಭಿವೃದ್ಧಿಪಡಿಸಿದ ವಿಶ್ವದ ಅತ್ಯಂತ ಅಗ್ಗದ ಕಾರು ನ್ಯಾನೋ (NaNo)ತಯಾರಿಕೆ, ಟಾಟಾ ಸ್ಟೀಲ್ (Tata Steel)ಮತ್ತು ಕೋರಸ್ ಅನ್ನು ಸ್ವಾಧೀನಪಡಿಸಿಕೊಂಡಂತಹ ಘಟನೆಗಳನ್ನೂ ಇದರಲ್ಲಿ ದಾಖಲಿಸಲಾಗಿದೆ. ಅದರೊಂದಿಗೆ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ವಿವಾದಾತ್ಮಕ ನಿರ್ಗಮನದ ವಿಚಾರವೂ ಈ ಪುಸ್ತಕದಲ್ಲಿದೆ. 1983ರ ಬ್ಯಾಚ್ ನ ಐಎಎಸ್ ಅಧಿಕಾರಿಗೆ ತಮ್ಮ ಕುರಿತಾದ ಜೀವನಚರಿತ್ರೆಯನ್ನು ಬರೆಯಲು ರತನ್ ಟಾಟಾ  ಒಪ್ಪಿಗೆ ಕೊಟ್ಟಿದ್ದರು. ಇದಕ್ಕೂ ಮುನ್ನ "ದಿ ವಿಂಗ್ಡ್ ವಂಡರ್ಸ್ ಆಫ್ ರಾಷ್ಟ್ರಪತಿ ಭವನ"ಮತ್ತು "ಅಬೋಡ್ ಅಂಡರ್ ದ ಡೋಮ್" ಎನ್ನುವ ಕೃತಿಗಳನ್ನೂ ಬರೆದವರಾಗಿದ್ದಾರೆ. ಅಂದಾಜು ಹಾರ್ಪರ್ ಕಾಲಿನ್ಸ್ 2 ಕೋಟಿಗೆ ಬಿಡ್ ಗೆದ್ದಿತ್ತು.

56

ರತನ್ ಟಾಟಾ ಜೀವನ ಚರಿತ್ರೆಯ ಪ್ರಿಂಟ್, ಈ ಬುಕ್ ಮತ್ತು ಆಡಿಯೋಬುಕ್ ಫಾರ್ಮಾಟ್ ಗಳ ವಿಶ್ವಾದ್ಯಂತ ಹಕ್ಕುಗಳನ್ನು ಹಾರ್ಪರ್ ಕಾಲಿನ್ಸ್ ಹೊಂದಿರುತ್ತದೆ. ಆದರೆ, ಪುಸ್ತಕವನ್ನು ಆಧರಿಸಿ ನಿರ್ಮಾಣವಾಗಲಿರುವ ಒಟಿಟಿ (OTT) ವೆಬ್ ಸರಣಿಯ ಹಕ್ಕುಗಳು, ಚಿತ್ರಗಳ (Film) ಹಕ್ಕುಗಳು ಮಾತ್ರ ಲೇಖಕರ ಬಳಿ ಇರುತ್ತದೆ. ಮಾಜಿ ಹಿರಿಯ ಅಧಿಕಾರಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಥಾಮಸ್ ಮ್ಯಾಥ್ಯೂ ಬರೆದ ರತನ್ ಎನ್. ಟಾಟಾ: ಎ ಲೈಫ್ ಹಾರ್ಪರ್ ಕಾಲಿನ್ಸ್ ಆರಂಭದಲ್ಲಿ ನವೆಂಬರ್ 2022 ರಂದು ಪುಸ್ತಕವನ್ನು ಬಿಡುಗಡೆ ಮಾಡಲು ಯೋಜಿಸಿತ್ತು. ಆದರೆ ಮಾರ್ಚ್ 30 2023 ಕ್ಕೆ ಮುಂದೂಡಲಾಯಿತು. ಬಳಿಕ ಈ ವರ್ಷದ ಫ್ರೆಬ್ರವರಿಗೆ  ಮುಂದೂಡಲಾಯ್ತ.  ಇದುವರೆಗೂ ಪುಸ್ತಕ ಬಿಡುಗಡೆಯಾಗಿಲ್ಲ.

66

 ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಪದಚ್ಯುತದ ಉಲ್ಲೇಖವೇ ಇದಕ್ಕೆ ಅಡ್ಡಿ ಎಂದು ಹೇಳಲಾಗುತ್ತಿದೆ.  ಕೆಲವು ಕುಟುಂಬ ಸದಸ್ಯರು ಸೇರಿದಂತೆ ರತನ್ ಟಾಟಾ ಆಪ್ತ ಸಹಾಯಕರು ಇನ್ನೂ ಪುಸ್ತಕ ಪ್ರಕಟವಾಗುವ ವಿಷಯವನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೀವನಚರಿತ್ರೆಯ ಬಗ್ಗೆ ಬರೆದ ಹಸ್ತಪ್ರತಿಯನ್ನು ಜನವರಿ 2022 ರಲ್ಲಿ ಬರಹಗಾರ ಮ್ಯಾಥ್ಯೂ ಅವರು ರತನ್ ಟಾಟಾ ಅವರೊಂದಿಗೆ ಹಂಚಿಕೊಂಡಿದ್ದರು. ಈಗ ರತನ್ ಟಾಟಾ ನಮ್ಮೊಂದಿಗಿಲ್ಲ. ಆದರೆ ಯಾವಾಗ ಅವರ ಪುಸ್ತಕ ಹೊರಬರಬಹುದು ಎಂಬುದನ್ನು ಕಾದು ನೋಡಬೇಕಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved