MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಕರ್ನಾಟಕದ 7 ಜಿಲ್ಲೆಗಳ ಈ ಪ್ರದೇಶಗಳಲ್ಲಿ ಚಿನ್ನಕ್ಕಾಗಿ ಹುಡುಕಾಟ; ಬಂಗಾರದ ತವರೂರು ಆಗಲಿದೆ ಕರುನಾಡು?

ಕರ್ನಾಟಕದ 7 ಜಿಲ್ಲೆಗಳ ಈ ಪ್ರದೇಶಗಳಲ್ಲಿ ಚಿನ್ನಕ್ಕಾಗಿ ಹುಡುಕಾಟ; ಬಂಗಾರದ ತವರೂರು ಆಗಲಿದೆ ಕರುನಾಡು?

Gold Mining: ಕರ್ನಾಟಕದ ಆರು ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪಗಳನ್ನು ಹುಡುಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆಯಾದರೆ, ಕರ್ನಾಟಕ ಚಿನ್ನದ ಉತ್ಪಾದನೆಯಲ್ಲಿ ಮತ್ತಷ್ಟು ಮುಂಚೂಣಿಯಲ್ಲಿರಲಿದೆ. ಈ ಯೋಜನೆಯ ಅನ್ವೇಷಣೆಯು ಈಗಾಗಲೇ ಆರಂಭವಾಗಿದ್ದು, ಶೀಘ್ರದಲ್ಲೇ ವರದಿಗಳು ಬರಲಿವೆ.

2 Min read
Mahmad Rafik
Published : May 09 2025, 03:58 PM IST
Share this Photo Gallery
  • FB
  • TW
  • Linkdin
  • Whatsapp
17

ಕರ್ನಾಟಕ ಚಿನ್ನ ಉತ್ಪಾದನೆಯ ಪ್ರಮುಖ ರಾಜ್ಯವಾಗಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ 20 ಕಿ.ಮೀ. ದೂರದಲ್ಲಿರುವ ಹಟ್ಟಿಯಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ. ಕೋಲಾರದ ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆ ಸ್ಥಗಿತಗೊಂಡಿದೆ. ಇದೀಗ ಮತ್ತೆ ರಾಜ್ಯದ ಆರು ಜಿಲ್ಲಗಳಲ್ಲಿ ಚಿನ್ನದ ಹುಡುಕಾಟಕ್ಕೆ ಕೇಂದ್ರ ಸರ್ಕಾರಕ್ಕೆ ಮುಂದಾಗಿದೆ. ಒಂದು ವೇಳೆ ಈ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆಯಾದ್ರೆ ಕರುನಾಡು ಚಿನ್ನದ ಬೀಡು ಆಗೋದು ಪಕ್ಕಾ. 

27

ಈಗಾಗಲೇ ಆರು ಜಿಲ್ಲೆಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಖನಿಜಾನ್ವೇಷಣೆ ಆರಂಭಗೊಂಡಿದೆ. ಕೇಂದ್ರ ಸರ್ಕಾರ ಆದೇಶದ ಮೇಲೆ ಅನ್ವೇಷಣಾ ಸಂಸ್ಥೆಗಳು ಕರ್ನಾಟಕದಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದು, ಶೀಘ್ರದಲ್ಲಿಯೇ ವರದಿಯನ್ನು ಸಲ್ಲಿಸಲಿವೆ ಎಂದು ವರದಿಯಾಗಿದೆ. ಈ ವರದಿಯಲ್ಲಿ ಚಿನ್ನದ ನಿಕ್ಷೇಪ ಎಷ್ಟಿರಲಿದೆ? ಈ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆಸಬಹುದಾ ಎಂಬಿತ್ಯಾದಿ ಅಂಶಗಳು ಇರಲಿವೆ. 

Related Articles

Related image1
ಒಂದಲ್ಲ, ಎರಡಲ್ಲ ಬರೋಬ್ಬರಿ 10 ಸಾವಿರ ಇಳಿಕೆ.... ಚಿನ್ನದಂಗಡಿಗೆ ಜನರ ದಾಂಗುಡಿ
Related image2
ಟ್ರಂಪ್ ಸುಂಕದ ಒತ್ತಡದ ನಡುವೆಯೂ 2% ಇಳಿಕೆಯಾದ ಚಿನ್ನ! ಜಾಗತೀಕಮಟ್ಟದಲ್ಲಾದ ಬೆಳವಣಿಗೆ ಏನು?
37

2016-17ನೇ ಸಾಲಿನಿಂದ  2024-25ರವೆರೆಗೆ ರಾಜ್ಯದ 34 ಖನಿಜಾನ್ವೇಷಣೆಗೆ ಎನ್‌ಎಂಇಟಿ ಅನುಮೋದನೆಯನ್ನು ನೀಡಿದೆ. 34ರಲ್ಲಿ 23 ಖನಿಜಾನ್ವೇಷಣೆಗಳು ಪೂರ್ಣಗೊಂಡಿವೆ. ಇನ್ನುಳಿದ 11 ಭಾಗದಲ್ಲಿ ಖನಿಜಗಳ ಸಂಶೋಧನೆ ನಡೆಯುತ್ತಿದೆ. 4 ಪ್ರದೇಶದಲ್ಲಿ ಅನ್ಷೇಷಣೆಗಾಗಿ 7.15 ಕೋಟಿಯ ಅನುಮೋದನೆಯನ್ನು ನೀಡಲಾಗಿದೆ. ಎನ್‌ಎಂಇಟಿ ಮಾರ್ಗದರ್ಶನದಲ್ಲಿಯೇ ಈ ಅನ್ವೇಷಣೆ ನಡೆಯುತ್ತಿದೆ.

47

ಈಗಾಗಲೇ ಗುರುತಿಸಲಾಗಿರುವ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಖನಿಜಾನ್ವೇಷಣೆಯನ್ನು ನಡೆಸಲಾಗುತ್ತಿದೆ. ಕೇಂದ್ರಕ್ಕೆ ಸಲ್ಲಿಕೆಯಾಗುವ ಮೊದಲ ವರದಿಯಲ್ಲಿ ಖನಿಜಗಳ ಲಭ್ಯತೆಯ ಅಂದಾಜು ಮಾಹಿತಿಯನ್ನು ಹೊಂದಿರುತ್ತದೆ. ಯಾವ ಪ್ರದೇಶದಲ್ಲಿ ಅತ್ಯಧಿಕ ಚಿನ್ನದ ಲಭ್ಯತೆ ಇದೆ ಎಂಬುದನ್ನು ಎರಡನೇ ವರದಿಯಲ್ಲಿ ಸಲ್ಲಿಕೆ ಮಾಡಲಾಗುತ್ತದೆ. 2024-25ನೇ ಸಾಲಿನಲ್ಲಿ ಖನಿಜಾನ್ವಷೇಣೆ ನಡೆಸಿರುವ ಹಾಗೂ ಅನುಮೋದನೆಗೊಂಡಿರುವ ಪಟ್ಟಿಯಲ್ಲಿ ಕರ್ನಾಟಕದ ಏಳು ಜಿಲ್ಲೆಗಳ ಹೆಸರುಗಳಿವೆ.

57

ರಾಜ್ಯದ ಎಲ್ಲೆಲ್ಲಿ ಚಿನ್ನದ ಅನ್ವೇಷಣೆ?

ಕೊಪ್ಪಳ: ಕಿಲ್ಲರಹಟ್ಟಿ
ಹಾವೇರಿ: ನಾಗವಂದ್, ಕಾಕೋಳ್
ದಾವಣೆಗೆರೆ: ಕುದುರೆಕೊಂಡ-ಹಲ್ಲವನಗಳ್ಳಿ
ಬಳ್ಳಾರಿ: ಸಿರಿಗೆರೆ ಚಿನ್ನಕ್ಷೇತ್ರ
ಚಿಕ್ಕಮಗಳೂರು: ಕಳಶಾಪುರ
ಹಾಸನ: ರಂಗಾಪುರ
ಮಂಡ್ಯ: ಯಡಿಯೂರು

67

ಯಾವ ಖನಿಜದ ಅನ್ವೇಷಣೆ ಎಲ್ಲಿ ನಡೆಯುತ್ತಿದೆ?

ಮಂಡ್ಯ (ಯಡಿಯೂರು): ಚಿನ್ನ, ತಾಮ್ರ, ಅಲ್ಯುಮಿನಿಯಂ, ಬೇಸ್ ಮೆಟಲ್ 
ಚಿಕ್ಕಮಗಳೂರು (ಕಳಶಾಪುರ): ಚಿನ್ನ
ಹಾಸನ: (ರಾಮಪುರ-ಗೊಲ್ಲರಹಟ್ಟಿ): ನಿ-ಕ್ರೋಮೈಟ್ ಮತ್ತು ಪ್ಲಾಟಿನಂ ಗುಂಪಿಗೆ ಸೇರುವ ಇತರೆ ಲೋಹಗಳು
ಬಳ್ಳಾರಿ (ಸಿರಿಗೆರೆ): ಚಿನ್ನ 
ಹಾವೇರಿ (ನಾಗವಂದ್ ಮತ್ತು ಕಾಕೋಳ್): ಚಿನ್ನ
ದಾವಣಗೆರೆ (ಕುದುರೆಕೊಂಡ-ಹಲ್ಲವನಗಳ್ಳಿ): ಚಿನ್ನ

77
Gold Mining

Gold Mining

ಚಿನ್ನದ ಪರಿಶೀಲನೆ ಅಥವಾ ಅನ್ವೇಷಣೆಯನ್ನು ನಡೆಸುತ್ತಿರುವ ಸಂಸ್ಥೆಗಳು

ಜಿಯೋ ಮೈರೆನ್ ಸಲ್ಯೂಷನ್ 
ಮೈನಿಂಗ್ ಟೆಕ್ ಕನ್ಸಲ್ವೆನ್ಸಿ ಸರ್ವಿಸಸ್ ಲಿಮಿಟೆಡ್
ಇಓಮೆನ್ ಲ್ಯಾಬೊರೇಟರೀಸ್
ಅಧಿಸೂಚಿತ ಅನ್ವೇಷಣಾ ಸಂಸ್ಥೆ ಎಮ್‌ಇಸಿಎಲ್

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚಿನ್ನ
ಬಂಗಾರದ ನಿಧಿ
ವ್ಯವಹಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved