ಸಾಲಕ್ಕಾಗಿ ಅಲೆಯಬೇಕಿಲ್ಲ, ಆಧಾರ್ ಕಾರ್ಡ್ ಇದ್ದರೆ ಸಾಕು ಪಡೆಯಿರಿ 2.5 ಲಕ್ಷ ರೂ ಲೋನ್
ದುಡ್ಡಿನ ಅವಶ್ಯಕತೆ ಬಿದ್ದಾಗ, ಮೈಕ್ರೋಫೈನಾನ್ಸ್ ಸೇರಿದಂತೆ ಇತರ ಅಪಾಯಕಾರಿ ಮಾರ್ಗದ ಮೂಲಕ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಬೇಡಿ, ಕಡಿಮೆ ಬಡ್ಡಿ ದರದಲ್ಲಿ ಕೇಂದ್ರ ಯೋಜನೆ ಮೂಲಕ ಸಾಲ ಪಡೆಯಲು ಸಾಧ್ಯವಿದೆ ಪಿಎಂ ಸ್ವನಿಧಿ ಸಾಲ ಪಡೆಯಲು ಕೇವಲ ಆಧಾರ್ಡ್ ಕಾರ್ಡ್ ಇದ್ದರೆ ಸಾಕು.

PM SVANidhi ಯೋಜನೆಯಡಿ ಸಾಲ
ಜೀವನದಲ್ಲಿ ದುಡ್ಡಿನ ಅವಶ್ಯಕತೆ ಇದ್ದೇ ಇರುತ್ತದೆ. ಸಾಲ ರೂಪದಲ್ಲಿ ಹಣ ಪಡೆದು ಕಂತಗಳ ಮೂಲಕ ಪಾವತಿಸುವ ವಿಧಾನವೇ ಭಾರತದ ಬಹುತೇಕರ ಅನುಸರಿಸುವ ವಿಧಾನ. ಆದರೆ ಮೈಕ್ರೋಫೈನ್ಸ್ ಸೇರಿದಂತೆ ಇತರ ಅಪಾಯಾಕಾರಿ ಮಾರ್ಗದ ಮೂಲಕ ಸಾಲ ಪಡೆದು ಬಳಿಕ ಸಂಕಷ್ಟಕ್ಕೆ ಸಿಲುಕಿದ ಘಟನೆಗಳೇ ಹೆಚ್ಚಿದೆ. ಆದರೆ ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಯೋಜನೆ ಮೂಲಕ ಸುಲಭವಾಗಿ ಸಾಲ ನೀಡುತ್ತದೆ.
ಕೇಂದ್ರದಿಂದ ಸಾಲ ಯೋಜನೆ
ಸ್ವಲ್ಪ ಹಣದ ಸಾಲ ಬೇಕಾದಾಗ PM SVANidhi ಯೋಜನೆಯ ಮೂಲಕ ಅರ್ಜಿ ಸಲ್ಲಿಸಬಹುದು. ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬಹುದು. ಈ ಯೋಜನೆ ಮೂಲಕ ಗರಿಷ್ಠ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯವಿದೆ. ಇದು ಹಲವರಿಗೆ ಪ್ರಯೋಜನವಾಗಲಿದೆ. ಕಡಿಮೆ ಬಡ್ಡಿದರ, ಸುಲಭ ಸಾಲಗಳಿಂದ ಜನರು ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯಲಿದೆ.
ಪ್ರಧಾನಿ ಸ್ವನಿಧಿ ಯೋಜನೆ ಪ್ರಮುಖವಾಗಿ ರಸ್ತೆ ಬದಿಯಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡುವವರಿಗಾಗಿ ತರಲಾಗಿದೆ. ಚಿಕ್ಕ ವ್ಯಾಪಾರಿಗಳಿಗೆ ಸಾಲದ ಸೌಲಭ್ಯ ನೀಡಲು ಬ್ಯಾಂಕ್ ಹಿಂದೇಟು ಹಾಕುತ್ತದೆ. ಇನ್ನು ಗ್ಯಾರೆಂಟಿ, ಶ್ಯೂರಿಟಿ ಸೇರಿದಂತೆ ಇತರ ದಾಖಲೆ ಒದಗಿಸಲು ಸಣ್ಣ ವ್ಯಾಪಾರಿಗಳು ವಿಫಲರಾಗುತ್ತಾರೆ. ಕಾರಣ ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳ ವಹಿವಾಟು ಬ್ಯಾಂಕ್ ಮೂಲಕ ಸಾಲ ಪಡೆಯುವ ಮಟ್ಟಕ್ಕೆ ಇರುವುದಿಲ್ಲ. ಆದರೆ ಪ್ರಧಾನಿ ಸ್ವನಿಧಿ ಯೋಜನೆ ಉಪಯುಕ್ತವಾಗಿದೆ.
ಯೋಜನೆ ಆರಂಭ
ಕೊರೋನಾ ಸಮಯದಲ್ಲಿ ಪ್ರಧಾನಿ ಮೋದಿ ಈ ಯೋಜನೆ ಜಾರಿಗೆ ತಂದರು. ಚಿಕ್ಕ ವ್ಯಾಪಾರಿಗಳಿಗೆ ಸಾಲ ಸಿಗುವಂತೆ ಮಾಡಿದರು. ಈ ಯೋಜನೆ ಮೂಲಕ ಹಲವು ಸಣ್ಣ ವ್ಯಾಪಾರಿಗಳು ಸಾಲ ಪಡೆದು ಉದ್ಯಮ ಬೆಳೆಸಿದ್ದಾರೆ. ವ್ಯಾಪಾರ ವಹಿವಾಟು ಹೆಚ್ಚಿಸಿದ್ದಾರೆ. ಸ್ವಾಲಂಬಿ ಬದುಕು ನಡೆಸುತ್ತಿದ್ದಾರೆ. ಸ್ವನಿಧಿ ಯೋಜನೆ ದೇಶದಲ್ಲಿನ ಆರ್ಥಿಕವಾಗಿ ಕುಗ್ಗಿಹೋದ ಸಣ್ಣ ವ್ಯಾಪಾರಿಗಳಿಗೆ ಉಪಯುಕ್ತವಾಗಿದೆ.
ನಿಯಮಗಳು
ಕೋರೋನಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಸ್ವನಿಧಿ ಯೋಜನೆ ಸಾಲ ಸೌಲಭ್ಯದಲ್ಲಿ ಸೀಮಿತ ಮೊತ್ತವಿತ್ತು. ಆರಂಭದಲ್ಲಿ 10,000 ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಬಳಿಕ ಸ್ವನಿಧಿ ಸಾಲ ಮೊತ್ತವನ್ನು ಹೆಚ್ಚಿಸಲಾಗಿದೆ. ಇದೀಗ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಂತ ಹಂತವಾಗಿ ಈ ಮೊತ್ತ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಹಣ ಮರುಪಾವತಿ
ಮೊದಲ ಕಂತನ್ನು ಸರಿಯಾದ ಸಮಯಕ್ಕೆ ಕಟ್ಟಬೇಕು. ಒಂದು ವರ್ಷದೊಳಗೆ ಸಾಲ ತೀರಿಸಬೇಕು. ಬಡ್ಡಿ ದರ ಕಡಿಮೆ. ಇದರಿಂದ ಮತ್ತೆ ಸಾಲ ಪಡೆಯಲು ಸುಲಭವಾಗುತ್ತದೆ. ಅತೀ ಕಡಿಮೆ ಬಡ್ಡಿ ದರ ಕಾರಣ ಯಾವತ್ತೂ ಹೊರೆಯಾಗುವುದಿಲ್ಲ. ಇನ್ನು ಸಾಲ ಪಡೆಯಲು ಆಧಾರ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ಇರಬೇಕು. ಇಷ್ಟಿದ್ದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಆನ್ಲೈನ್ ಅಥವಾ CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಬಡ್ಡಿ ದರ ಸಾಲ ಪಡೆಯುವ ಸಮಯದಲ್ಲಿ ನಿರ್ಧಾರವಾಗುತ್ತದೆ. ಆಧಾರ್ ಕಾರ್ಡ್ ಇದ್ದವರು ಯಾರೇ ಆದರೂ ಅರ್ಜಿ ಸಲ್ಲಿಸಬಹುದು. ಬೇರೆ ಕಡೆ ಸಾಲ ಪಡೆದರೆ ಬೇಗ ಹಣ ವಾಪಸ್ ಕೊಡಬೇಕಾಗುತ್ತದೆ. ಆದರೆ PM SVANidhi ಯೋಜನೆಯಲ್ಲಿ 12 ತಿಂಗಳುಗಳ ಅವಧಿ ಇರುತ್ತದೆ.