MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಈ 500 ರೂ. ದಾಖಲೆ ನಿಮ್ಮ ಬಳಿ ಇಲ್ಲದಿದ್ರೆ ಇನ್ಮೇಲೆ ನಿಮಗೆ ಎಲ್ಲೂ ಪೆಟ್ರೋಲ್ ಡಿಸೇಲ್ ಸಿಗಲ್ಲ

ಈ 500 ರೂ. ದಾಖಲೆ ನಿಮ್ಮ ಬಳಿ ಇಲ್ಲದಿದ್ರೆ ಇನ್ಮೇಲೆ ನಿಮಗೆ ಎಲ್ಲೂ ಪೆಟ್ರೋಲ್ ಡಿಸೇಲ್ ಸಿಗಲ್ಲ

 ಸರ್ಕಾರವು ಪಿಯುಸಿ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಲು ಅವಕಾಶ ನೀಡದಿರಲು ಚಿಂತಿಸುತ್ತಿದೆ. ನಕಲಿ ಪ್ರಮಾಣಪತ್ರಗಳನ್ನು ತಡೆಯಲು ಕ್ಯೂಆರ್ ಕೋಡ್ ಆಧಾರಿತ ಪಿಯುಸಿ ದಾಖಲೆಗಳನ್ನು ಪರಿಚಯಿಸುವ ಯೋಜನೆಯೂ ಸರ್ಕಾರದ ಮುಂದಿದೆ.

2 Min read
Anusha Kb
Published : May 18 2025, 02:33 PM IST| Updated : May 18 2025, 04:14 PM IST
Share this Photo Gallery
  • FB
  • TW
  • Linkdin
  • Whatsapp
16

ಇತ್ತೀಚಿನ ಕೆಲ ಸಮಯದಿಂದ ಸರ್ಕಾರವೂ ಸಂಚಾರ ನಿಯಮಗಳನ್ನು ಶಿಸ್ತುಬದ್ಧವಾಗಿ ಫಾಲೋ ಮಾಡುವುದಕ್ಕೆ ಹಾಗೂ ಮಾಡದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸಾಕಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಹೀಗಿರುವಾಗ ಈಗ ಸಾರಿಗ ಸಚಿವಾಲಯವೂ ಮತ್ತೊಂದು ಹೊಸ ಬದಲಾವಣೆಯನ್ನು ಪ್ರಸ್ತಾಪ ಮಾಡಿದೆ.  ಈ ಪ್ರಸ್ತಾಪದ ಪ್ರಕಾರ ನೀವು ನಿಮ್ಮ ವಾಹನಕ್ಕೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳನ್ನು ಹೊಂದಿಲ್ಲದಿದ್ದರೆ ದೇಶದ ಯಾವುದೇ ಪೆಟ್ರೋಲ್‌ ಪಂಪ್‌ಗಳಲ್ಲಿ ನಿಮಗೆ ಪೆಟ್ರೋಲ್ ಡಿಸೇಲ್‌ಗಳು ಸಿಗುವುದಿಲ್ಲ. ಹಾಗಿದ್ದರೆ ಆ ಹೊಸ ಕಾನೂನು ಏನು ಎಂಬುದನ್ನು ನಾವು ಈಗ ನೋಡೋಣ. 

26

ಹೊಸ ಸಂಚಾರ ನಿಯಮವೇನು?
ಇತ್ತೀಚೆಗೆ, ಮಹಾರಾಷ್ಟ್ರ ರಾಜ್ಯ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್ ಅವರು, ಮಾಲಿನ್ಯ ನಿಯಂತ್ರಣ (ಪಿಯುಸಿ) ಮಂಡಳಿಯ ಸರಿಯಾದ  ಪ್ರಮಾಣಪತ್ರವಿಲ್ಲದ ವಾಹನ ಚಾಲಕರು ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ, ಇಲಾಖೆಯು ಕ್ಯೂಆರ್ ಕೋಡ್ ಆಧಾರಿತ ಪಿಯುಸಿ(Pollution Under Control) ದಾಖಲೆಯನ್ನು ಪರಿಚಯಿಸಲು ಸಹ ನೋಡುತ್ತಿದೆ, ಇದು ನಕಲಿ ಪ್ರಮಾಣಪತ್ರಗಳ ಬಳಕೆಯನ್ನು ತಡೆಯುತ್ತದೆ.

Related Articles

Related image1
ಬೆಂಗಳೂರು ಸಂಚಾರ ನಿಯಂತ್ರಣಕ್ಕಾಗಿ ಡ್ರೋನ್‌ಗಳ ಕಣ್ಗಾವಲು
Related image2
ಮೇ.17ರಿಂದ ಮೇ.21ರವರೆಗೆ ಹೆಬ್ಬಾಳ ಮೇಲ್ಸೇತುವೆ ಭಾಗಶಃ ಬಂದ್; ಪರ್ಯಾಯ ಮಾರ್ಗ ಇಲ್ಲಿದೆ ನೋಡಿ!
36

ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಪೆಟ್ರೋಲ್‌ ಪಂಪ್‌ಗಳು ಯುಪಿಐ ಪಾವತಿ ಮೂಲಕ ಹಣ ಪಾವತಿ ಮಾಡುವುದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು. ಸೈಬರ್‌ ವಂಚನೆ ಪ್ರಕರಣ ಹೆಚ್ಚುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದರು. ಹೀಗಿರುವಾಗ ಈಗ ಮಹಾರಾಷ್ಟ್ರ ಸರ್ಕಾರವೂ ಹೊಸ ನಿಯಮವನ್ನು ಜಾರಿಗೆ  ತರಲು ಮುಂದಾಗಿದೆ. ಇದಕ್ಕಾಗಿ ಸರಿಯಾದ ಕಾರ್ಯವಿಧಾನವನ್ನು ಶೀಘ್ರದಲ್ಲೇ ಯೋಜಿಸಿ ಜಾರಿಗೆ ತರಲಾಗುವುದು ಎಂದು ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್‌ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

46

ಇಂಧನ ತುಂಬಿಸಲು ಈ ಪಿಯುಸಿ( ಮಾಲಿನ್ಯ ನಿಯಂತ್ರಣ) ಪ್ರಮಾಣ ಪತ್ರ ಅಗತ್ಯವಿರುವುದರಿಂದ, ಅನೇಕ ವಾಹನ ಚಾಲಕರು ಅದನ್ನು ಅಕ್ರಮವಾಗಿ ಪಡೆಯಬಹುದು, ಆದ್ದರಿಂದ ಸರ್ಕಾರವು ಕ್ಯೂಆರ್ ಕೋಡ್ ಆಧಾರಿತ ಪಿಯುಸಿ ಪ್ರಮಾಣಪತ್ರಗಳನ್ನು ಪರಿಚಯಿಸಲು ಯೋಜಿಸಿದೆ. ಇದು ಪರಿಶೀಲನೆಯನ್ನು ಸುಲಭಗೊಳಿಸುತ್ತದೆ ಮತ್ತು ನಿಜವಾದ ಮತ್ತು ನಕಲಿ ಪ್ರಮಾಣಪತ್ರಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

56

ಈ ಪ್ರಸ್ತಾವಿತ ನೀತಿಯನ್ನು ಮುಂಬರುವ ದಿನಗಳಲ್ಲಿ ಅನುಮೋದನೆಗಾಗಿ ಮಂಡಿಸುವ ನಿರೀಕ್ಷೆಯಿದೆ. ಆದರೆ ಇದರ ಸಂಪೂರ್ಣ ಅನುಷ್ಠಾನಕ್ಕೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಸರ್ಕಾರವು ಪೆಟ್ರೋಲ್ ಪಂಪ್‌ಗಳಲ್ಲಿ ಸಿಬ್ಬಂದಿಗೆ ಇಂಧನ ತುಂಬಿಸುವ ಮೊದಲು ದಾಖಲೆಗಳನ್ನು ಪರಿಶೀಲಿಸಲು ತರಬೇತಿ ನೀಡಬೇಕಾಗುತ್ತದೆ. ಈ ಹೊಸ ಯೋಜನೆಯನ್ನು ಜಾರಿಗೆ ತರುವ ಮೊದಲು ಜಾಗೃತಿ ಅಭಿಯಾನವನ್ನು ಸಹ ಕೈಗೊಳ್ಳಲಾಗುವುದು ಮತ್ತು ದಂಡವಿಲ್ಲದೆ ತಮ್ಮ ಪ್ರಮಾಣಪತ್ರಗಳನ್ನು ನವೀಕರಿಸಲು ವಾಹನ ಮಾಲೀಕರಿಗೆ ಸಂಕ್ಷಿಪ್ತ ವಿವರವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

66

ಈ ಹೊಸ ಪ್ರಸ್ತಾವನೆಗೆ ನಾಗರಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವರು ಇದು ಮಾಲಿನ್ಯವನ್ನು ನಿಯಂತ್ರಿಸುತ್ತದೆ ಎಂದು ಭಾವಿಸಿದರೆ, ಇನ್ನು ಕೆಲವರು ಪೆಟ್ರೋಲ್ ಪಂಪ್‌ಗಳಲ್ಲಿ ಕಾಯುವ ಅವಧಿ  ಇದರಿಂದ ಹೆಚ್ಚಾಗಬಹುದು ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಭಾರತ ಸುದ್ದಿ
ಮಹಾರಾಷ್ಟ್ರ
ಸಂಚಾರ ನಿಯಮಗಳು
ಪೆಟ್ರೋಲ್ ಬಂಕ್
ಕ್ಯೂಆರ್ ಕೋಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved