MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಈಶಾನ್ಯ ಭಾರತಕ್ಕೆ ಅದಾನಿಯಿಂದ 50 ಸಾವಿರ ಕೋಟಿ ಕೊಡುಗೆ, ಅಂಬಾನಿ 75 ಸಾವಿರ ಕೋಟಿ ರೂ ಹೂಡಿಕೆ

ಈಶಾನ್ಯ ಭಾರತಕ್ಕೆ ಅದಾನಿಯಿಂದ 50 ಸಾವಿರ ಕೋಟಿ ಕೊಡುಗೆ, ಅಂಬಾನಿ 75 ಸಾವಿರ ಕೋಟಿ ರೂ ಹೂಡಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್ ಈಶಾನ್ಯ ಭಾರತದಲ್ಲಿ ₹1.25 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿವೆ. ರಿಲಯನ್ಸ್ ₹75,000 ಕೋಟಿ ಮತ್ತು ಅದಾನಿ ಗ್ರೂಪ್ ₹50,000 ಕೋಟಿ ಹೂಡಿಕೆ ಮಾಡಲಿವೆ.

2 Min read
Author : Gowthami K
| Updated : May 23 2025, 05:32 PM IST
Share this Photo Gallery
  • FB
  • TW
  • Linkdin
  • Whatsapp
16
ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆ
Image Credit : Asianet News

ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆ

ಶುಕ್ರವಾರ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆ 2025 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್ ಭಾರತದ ಈಶಾನ್ಯ ಪ್ರದೇಶಕ್ಕೆ ಗಣನೀಯ ಹೂಡಿಕೆ ಮಾಡುವ ಪ್ರತಿಜ್ಞೆಗಳನ್ನು ಮಾಡಿವೆ. ರಿಲಾಯನ್ಸ್ 75,000 ಕೋಟಿ ಮತ್ತು ಅದಾನಿ ಗ್ರೂಪ್ 50,000 ಕೋಟಿ ರೂ.ಗಳನ್ನು ನೀಡುವ ಬದ್ಧತೆಯನ್ನು ಹೊಂದಿದೆ. ಎರಡು ಕಂಪನಿಗಳೂ ಈಶಾನ್ಯ ಭಾರತದ ಆರ್ಥಿಕ ಬೆಳವಣಿಗೆಗೆ ದೊಡ್ಡ ಬೆಂಬಲ ನೀಡುತ್ತಿವೆ ಎಂಬುದಕ್ಕೆ ಪೂರಕವಾಗಿದೆ.

26
ಅಂಬಾನಿಯ ದೃಷ್ಟಿಕೋನ: ಈಶಾನ್ಯ ಭವಿಷ್ಯ ಸಿಂಗಾಪುರದಂತೆ!
Image Credit : Asianet News

ಅಂಬಾನಿಯ ದೃಷ್ಟಿಕೋನ: ಈಶಾನ್ಯ ಭವಿಷ್ಯ ಸಿಂಗಾಪುರದಂತೆ!

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಶೃಂಗಸಭೆಯಲ್ಲಿ ಮಾತನಾಡಿ ಈಶಾನ್ಯ ಭಾರತದ ಭವಿಷ್ಯವನ್ನು ಶ್ಲಾಘಿಸಿದರು. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಇತರ ಈಶಾನ್ಯ ರಾಜ್ಯಗಳು ಸಿಂಗಾಪುರದಂತೆಯೇ ಅಭಿವೃದ್ಧಿಯಾಗಬೇಕೆಂದು ಬಯಸಿದರು. ಇದು ಅವರು ಈ ಭಾಗದ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಈಶಾನ್ಯಕ್ಕೆ ಭಾರತಕ್ಕೆ ರಿಲಯನ್ಸ್‌ ಹೊಂದಿರುವ ಬದ್ಧತೆಗಳ ಬಗ್ಗೆ ವಿವರಿಸಿದರು. ರಿಲಯನ್ಸ್ ಈಗಾಗಲೇ ಈಶಾನ್ಯ ಭಾರತದಲ್ಲಿ ₹30,000 ಕೋಟಿ ಹೂಡಿಕೆಯನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಹೂಡಿಕೆಯನ್ನು ₹75,000 ಕೋಟಿಗೆ ಹೆಚ್ಚಿಸುವ ಯೋಜನೆ ರೂಪಿಸಿದೆ ಎಂದರು.

Related Articles

Related image1
Hindenburg report on Adani: ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌!
Related image2
Now Playing
Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!
36
ಆರು ಮುಖ್ಯ ಯೋಜನೆ ಘೋಷಣೆ
Image Credit : Asianet News

ಆರು ಮುಖ್ಯ ಯೋಜನೆ ಘೋಷಣೆ

ಅಂಬಾನಿಯವರು ಈ ಭಾಗದಲ್ಲಿ ಆರು ಮುಖ್ಯ ಯೋಜನೆಗಳನ್ನು ಘೋಷಿಸಿದ್ದಾರೆ. ಅವೆಂದರೆ ಅಧಿಕ ಉದ್ಯೋಗಾವಕಾಶ ಸೃಷ್ಟಿ, ವಾಸ್ತವಿಕ ಬಂಡವಾಳ ಹೂಡಿಕೆ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ, ಸ್ಥಳೀಯ ಉದ್ಯಮಗಳಿಗೆ ಬೆಂಬಲ, ಸ್ಥಿರತೆಯೊಂದಿಗೆ ಆಧುನಿಕತೆ, ಸ್ಥಳೀಯರ ಜೀವನಮಟ್ಟದ ಸುಧಾರಣೆ, ಜಿಯೋ 5G ಸೇವೆಗಳನ್ನು ವ್ಯಾಪಕವಾಗಿ ವಿಸ್ತರಣೆ, ಕೃಷಿ ಉತ್ಪನ್ನಗಳ ಖರೀದಿ ಜಾಲ ವಿಸ್ತರಣೆ, ಶುದ್ಧ ಇಂಧನ ಯೋಜನೆಗಳು: ಸೌರಶಕ್ತಿ ಮತ್ತು ಜೈವಿಕ ಅನಿಲ, ಆಧುನಿಕ ವೈದ್ಯಕೀಯ ಸೌಲಭ್ಯಗಳ ನಿರ್ಮಾಣವನ್ನು ಘೋಷಿಸಿದರು. ಇದರಿಂದ 45 ಮಿಲಿಯನ್ ಜನರ ಜೀವನದಲ್ಲಿ ಬದಲಾವಣೆ ಆಗಲಿದೆ ಎಂದು ಅಂಬಾನಿಯವರು ತಿಳಿಸಿದ್ದಾರೆ, ರಿಲಯನ್ಸ್ ಸಂಸ್ಥೆಯ ಗುರಿಯು ಈಶಾನ್ಯ ಭಾರತದ 4.5 ಕೋಟಿ ಜನರ ಜೀವನವನ್ನು ಸುಧಾರಿಸುವುದಾಗಿದೆ. 25 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದು ಕೇವಲ ಹಣ ಹೂಡಿಕೆಯಾಗದೆ, ಜನಜೀವನದ ಮೇಲೆ ಉತ್ಸಾಹದ ಬದಲಾವಣೆ ತರಲಿರುವ ಹೂಡಿಕೆಯಾಗಿದೆ ಎಂದರು.

46
ಜಿಯೋ 5G ಸೇವೆ ದ್ವಿಗುಣಗೊಳಿಸುವ ಗುರಿ
Image Credit : Asianet News

ಜಿಯೋ 5G ಸೇವೆ ದ್ವಿಗುಣಗೊಳಿಸುವ ಗುರಿ

ಜಿಯೋ 5G ಸೇವೆಗಳು ಈಗಾಗಲೇ ಜನಸಂಖ್ಯೆಯ 90% ತಲುಪಿದ್ದು, 5 ಮಿಲಿಯನ್ ಬಳಕೆದಾರರಿದ್ದಾರೆ. ಈ ಸಂಖ್ಯೆಯನ್ನು ಮುಂದಿನ ವರ್ಷದಲ್ಲಿ ದ್ವಿಗುಣಗೊಳಿಸುವ ಗುರಿ ಇದೆ. ಶಿಕ್ಷಣ, ಆರೋಗ್ಯ, ಮತ್ತು ಮನೆಯ ತಂತ್ರಜ್ಞಾನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಉಪಯೋಗದತ್ತ ಹೆಚ್ಚಿನ ಗಮನ ನೀಡಲಾಗಿದೆ. "ಪ್ರತಿಭೆ ತಂತ್ರಜ್ಞಾನವನ್ನು ಪೂರೈಸಿದಾಗ, ಈಶಾನ್ಯ ಮುಂದಕ್ಕೆ ಸಾಗುತ್ತದೆ" ಎಂದು ಅಂಬಾನಿ ತಿಳಿಸಿದರು. ಮಣಿಪುರದಲ್ಲಿ 150 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ. ಮಿಜೋರಾಂ ವಿಶ್ವವಿದ್ಯಾಲಯದೊಂದಿಗೆ ಸಹಯೋಗದಿಂದ ಸ್ತನ ಕ್ಯಾನ್ಸರ್ ಅಧ್ಯಯನ. ಗುವಾಹಟಿಯಲ್ಲಿ ಜೀನೋಮ್ ಅಧ್ಯಯನ ಕೇಂದ್ರ ಸ್ಥಾಪನೆ. ಇದು ಭಾರತದ ಅತ್ಯಂತ ಮುಂಚೂಣಿಯ ಆಣ್ವಿಕ ರೋಗನಿರ್ಣಯ ಕೇಂದ್ರಗಳಲ್ಲಿ ಒಂದಾಗಿದೆ.

56
ಅದಾನಿ ಗ್ರೂಪಿನ ₹50,000 ಕೋಟಿ ಬದ್ಧತೆ
Image Credit : Asianet News

ಅದಾನಿ ಗ್ರೂಪಿನ ₹50,000 ಕೋಟಿ ಬದ್ಧತೆ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಕೂಡ ಈಶಾನ್ಯದಲ್ಲಿ ₹50,000 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ. ಮೂಲಸೌಕರ್ಯ, ಶಕ್ತಿ (energy), ಲಾಜಿಸ್ಟಿಕ್ಸ್ ಮತ್ತು ಹಸಿರು ಇಂಧನ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಯೋಜನೆ ಇದೆ. ಈಶಾನ್ಯ ಭಾರತವು ಬಹುಮಾನ್ಯ ಸಂಸ್ಕೃತಿ, ಪ್ರಕೃತಿ ಸಂಪತ್ತು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದ ಭಾಗ. ಆದರೆ ಆರ್ಥಿಕವಾಗಿ ಸಾಕಷ್ಟು ಹಿಂದುಳಿದ ಪ್ರದೇಶವಾಗಿದೆ. ಇದೀಗ, ದೇಶದ ಶಕ್ತಿಶಾಲಿ ಕೈಗಾರಿಕಾ ಕಂಪನಿಗಳು ಇಲ್ಲಿ ಬಂಡವಾಳ ಹೂಡುತ್ತಿರುವುದು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಸ್ಥಳೀಯ ಜನರ ಜೀವನ ಮಟ್ಟವನ್ನು ಹೆಚ್ಚಿಸುತ್ತದೆ. ರಾಜ್ಯದ ಆರ್ಥಿಕತೆಗೆ ಬಲ ನೀಡುತ್ತದೆ ಎಂದಿದ್ದಾರೆ. ಜೊತೆಗೆ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪ್ರಧಾನಿ ಮೋದಿಯವರ ಕಾರ್ಯತಂತ್ರವನ್ನು ಒಪ್ಪಿಕೊಂಡರು. ಪ್ರಧಾನ ಮಂತ್ರಿಗಳು ಈ ಭಾಗದ ಕಡೆಗೆ ಎಚ್ಚರಿಕೆಯ ಕರೆ ನೀಡಿದ್ದಾರೆ. ನಾವು ಅದನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದರು.

66
ಅದಾನಿ ಗ್ರೂಪ್‌ ಯೋಜನೆ ಏನೇನ
Image Credit : Getty

ಅದಾನಿ ಗ್ರೂಪ್‌ ಯೋಜನೆ ಏನೇನ

ಅದಾನಿ ಗ್ರೂಪ್‌ನ ಹೊಸ ಹೂಡಿಕೆಯು ಮೂಲಸೌಕರ್ಯ, ಲಾಜಿಸ್ಟಿಕ್ಸ್ ನೆಟ್‌ವರ್ಕ್‌ಗಳ ವಿಸ್ತರಣೆ, ಇಂಧನ (ಪರ್ಯಾಯ ಶಕ್ತಿ) ಯೋಜನೆಗಳು, ಡಿಜಿಟಲ್ ಸಂಪರ್ಕ ಮತ್ತು ಡೇಟಾ ನೆಟ್‌ವರ್ಕ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ, ಇದು ಪ್ರದೇಶದ ಸಮಗ್ರ ಬೆಳವಣಿಗೆಗೆ ಅವರ ನಿರಂತರ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ. ಈ ಎಲ್ಲಾ ಯೋಜನೆಗಳು ಕೇಂದ್ರ ಸರ್ಕಾರದ ಆಕ್ಟ್ ಈಸ್ಟ್ ನೀತಿಗೆ ಪೂರಕವಾಗಿವೆ. ಈ ನೀತಿಯ ಉದ್ದೇಶ, ಈಶಾನ್ಯ ಭಾರತದ ಮೂಲಕ ಆಗ್ನೇಯ ಏಷ್ಯಾ ದೇಶಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸುವುದು. ಹೀಗಾಗಿ, ಈ ಹೂಡಿಕೆಗಳು ಕೇವಲ ವ್ಯಾಪಾರಕ್ಕೆ ಮಾತ್ರವಲ್ಲದೆ, ಭಾರತದ ಭೌಗೋಳಿಕ ರಾಜಕೀಯ ಉದ್ದೇಶಗಳಿಗೂ ಸಹಾಯಕರವಾಗಿವೆ ಎಂದು ಅದಾನಿ ಹೇಳಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವ್ಯಾಪಾರ ಸುದ್ದಿ
Latest Videos
Recommended Stories
Recommended image1
ಮಕ್ಕಳ ಕೈಗೆ ಬೀಗ ಹಾಕಿದ 'WhatsApp'.. ಇನ್ಮುಂದೆ ಪೋಷಕರ ಕಂಟ್ರೋಲ್‌ನಷ್ಟೇ ಮಕ್ಕಳ ಮೊಬೈಲ್ ಆಟ ಸಾಧ್ಯ!
Recommended image2
Crude Oil Refining: ಕಚ್ಚಾ ತೈಲದಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಹೇಗೆ ತಯಾರಿಸ್ತಾರೆ? ಒಂದೇ ತೈಲದಿಂದ ಏನೆಲ್ಲಾ ಸಿಗುತ್ತೆ ಗೊತ್ತಾ?
Recommended image3
ಟೋಲ್ ದರ ಏರಿಕೆ ಬಿಸಿ: ಏಪ್ರಿಲ್ 1 ರಿಂದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದುಬಾರಿ!
Related Stories
Recommended image1
Hindenburg report on Adani: ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌!
Recommended image2
Now Playing
Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved