MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಮಧ್ಯಪ್ರಾಚ್ಯ ಯುದ್ಧದಿಂದ 25 ಲಕ್ಷ ಭಾರತೀಯರಿಗೆ ಬಡತನ; ಆಹಾರ ಅಭದ್ರತೆ, ಮಾನವ ಅಭಿವೃದ್ಧಿ ಕುಂಠಿತ

ಮಧ್ಯಪ್ರಾಚ್ಯ ಯುದ್ಧದಿಂದ 25 ಲಕ್ಷ ಭಾರತೀಯರಿಗೆ ಬಡತನ; ಆಹಾರ ಅಭದ್ರತೆ, ಮಾನವ ಅಭಿವೃದ್ಧಿ ಕುಂಠಿತ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಿಶ್ವಾದ್ಯಂತ 88 ಲಕ್ಷ ಹಾಗೂ ಭಾರತದಲ್ಲಿ 25 ಲಕ್ಷ ಜನರು ಬಡತನಕ್ಕೆ ತಳ್ಳಲ್ಪಡಲಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ತೈಲ ಬೆಲೆ ಏರಿಕೆ ಮತ್ತು ಹೆಚ್ಚಿದ ವೆಚ್ಚಗಳು ಇದಕ್ಕೆ ಕಾರಣವಾಗಿದೆ.

2 Min read
Author : Kannadaprabha News
Published : Apr 15 2026, 10:07 AM IST
Share this Photo Gallery
  • FB
  • TW
  • Linkdin
  • Whatsapp
15
ವಿಶ್ವಾದ್ಯಂತ 88 ಲಕ್ಷ ಮಂದಿಯನ್ನು ಬಡತನಕ್ಕೆ
Image Credit : AI Meta

ವಿಶ್ವಾದ್ಯಂತ 88 ಲಕ್ಷ ಮಂದಿಯನ್ನು ಬಡತನಕ್ಕೆ

ಮಧ್ಯಪ್ರಾಚ್ಯ ಸಂಘರ್ಷವು 25 ಲಕ್ಷ ಭಾರತೀಯರನ್ನು ಹಾಗೂ ವಿಶ್ವಾದ್ಯಂತ 88 ಲಕ್ಷ ಮಂದಿಯನ್ನು ಬಡತನಕ್ಕೆ ತಳ್ಳಲಿದೆ ಎಂಬ ಕಳವಳಕಾರಿ ಮಾಹಿತಿಯನ್ನು ವಿಶ್ವಸಂಸ್ಥೆ ನೀಡಿದೆ. ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶದ ಮಾನವ ಅಭಿವೃದ್ಧಿಯ ಮೇಲೆ ಯುದ್ಧ ಬೀರಬಹುದಾದ ಪರಿಣಾಮಗಳ ಬಗೆಗಿನ ವರದಿಯಲ್ಲಿ ಈ ಅಂದಾಜು ಮಾಡಲಾಗಿದೆ.

25
ಬಡವರ ಪ್ರಮಾಣ ಏರಿಕೆ
Image Credit : AI Meta

ಬಡವರ ಪ್ರಮಾಣ ಏರಿಕೆ

ವರದಿ ಅನ್ವಯ ಭಾರತದಲ್ಲಿ ಪ್ರಸಕ್ತ 35.15 ಕೋಟಿ ಕಡುಬಡವರಿದ್ದು, ಯುದ್ಧ ಮುಗಿಯುವ ಹೊತ್ತಿಗೆ ಈ ಪ್ರಮಾಣ 35.40 ಕೋಟಿಗೆ ಏರಲಿದೆ. ಅಂದರೆ ಬಡವರ ಪ್ರಮಾಣದಲ್ಲಿ ಕನಿಷ್ಠ 4 ಲಕ್ಷದಿಂದ ಗರಿಷ್ಠ 25 ಲಕ್ಷದವರೆಗೆ ಏರಿಕೆ ಸಂಭವವಿದೆ. ಈ ಮೂಲಕ ಭಾರತದಲ್ಲಿ ಬಡವರ ಪ್ರಮಾಣ ಹಾಲಿ ಇರುವ ಶೇ.23.9ರಿಂದ ಶೇ.24.2ಕ್ಕೆ ಏರಲಿದೆ ಎಂದು ವರದಿ ಹೇಳಿದೆ.

Related Articles

Related image1
ಇರಾನ್-ಅಮೆರಿಕ ಸಂಘರ್ಷ; ಶಾಂತಿ ಸ್ಥಾಪನೆಗೆ 4 ಸೂತ್ರ ನೀಡಿ ಖಡಕ್ ಎಚ್ಚರಿಕೆ ಕೊಟ್ಟ ಚೀನಾ
Related image2
ಇರಾನ್ ಜೊತೆಗಿನ ಮಾತುಕತೆ ವಿಫಲ: ಕೆರಳಿದ ಟ್ರಂಪ್‌ನಿಂದ ಶಾಕಿಂಗ್ ಘೋಷಣೆ, ಇಡೀ ವಿಶ್ವವೇ ಸ್ತಬ್ಧ!
35
ಕಾರಣವೇನು?
Image Credit : AI Meta

ಕಾರಣವೇನು?

ಪ್ರಮುಖ ತೈಲ ಮತ್ತು ಅನಿಲ ರಫ್ತುದಾರ ದೇಶಗಳೇ ಯುದ್ಧದ ಭಾಗವಾಗಿರುವ ಕಾರಣ ಹಾಗೂ ಅವುಗಳು ಬರೆಬೇಕಿದ್ದ ಹೋರ್ಮುಜ್‌ ಜಲಸಂಧಿ ಕೂಡ ಮುಚ್ಚಿರುವುದರಿಂದ ಅವಲಂಬಿತ ದೇಶಗಳಲ್ಲಿ ತೈಲಾನಿಲ ಅಭಾವ ಸೃಷ್ಟಿಯಾಗಿದೆ. ಸರಕುಸಾಗಣೆ ವೆಚ್ಚವೂ ಏರಿದೆ. ಪರಿಣಾಮವಾಗಿ ಬೆಲೆ ಗಗನಮುಖಿಯಾಗಿದೆ. ಹೀಗೆ ದಿನನಿತ್ಯದ ಖರ್ಚುಗಳು ಹೆಚ್ಚಾಗುವ ಕಾರಣ ಜನರ ಉಳಿತಾಯ ಕ್ಷೀಣಿಸಿ, ಜೀವನಮಟ್ಟ ಕುಸಿಯುತ್ತದೆ. ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಬೆಲೆಯಲ್ಲೂ ಶೇ.50ರಷ್ಟು ಹೆಚ್ಚಳವಾಗಲಿದೆ.

45
ವ್ಯಾಪಾರಿಗಳ ಆದಾಯ ಕುಸಿತ
Image Credit : AI Meta

ವ್ಯಾಪಾರಿಗಳ ಆದಾಯ ಕುಸಿತ

ಭಾರತದ ಸುಮಾರು 93 ಲಕ್ಷ ಜನ ಗಲ್ಫ್‌ನಲ್ಲಿ ವಾಸವಿದ್ದು, ಅವರ ಆದಾಯಕ್ಕೂ ಅಲ್ಲಿ ಕತ್ತರಿ ಬಿದ್ದಿದೆ. ಇತ್ತ ಕಚ್ಚಾವಸ್ತುಗಳಿಗಾಗಿ ಹಾಗೂ ಮಾರುಕಟ್ಟೆಗಾಗಿ ಗಲ್ಫ್‌ ರಾಷ್ಟ್ರಗಳನ್ನು ನೆಚ್ಚಿಕೊಂಡಿರುವ ಆಹಾರ ಸಂಸ್ಕರಣೆ, ನಿರ್ಮಾಣ ಸಾಮಗ್ರಿ, ಉಕ್ಕು ಆಧರಿತ ಉತ್ಪಾದನೆ, ರತ್ನ, ವಜ್ರ ವ್ಯಾಪಾರಿಗಳ ಆದಾಯ ಕುಸಿಯಲಿದೆ.

ಇದನ್ನೂ ಓದಿ: ಕಾರ್ಪೊರೇಟ್ ಜಿಹಾದ್ ಗುಟ್ಟು ರಟ್ಟಾಗಿದ್ದೇಗೆ? ಪೊಲೀಸರ ಮಾರುವೇಷದ ಕಾರ್ಯಾಚರಣೆ ಹೇಗಿತ್ತು?

55
ಕೊಲ್ಲಿ ಯುದ್ಧದ ಮಧ್ಯೆಯೂ ಭಾರತದ ಜಿಡಿಪಿ ದರ ಶೇ.6.5 ದಾಖಲು
Image Credit : AI Meta

ಕೊಲ್ಲಿ ಯುದ್ಧದ ಮಧ್ಯೆಯೂ ಭಾರತದ ಜಿಡಿಪಿ ದರ ಶೇ.6.5 ದಾಖಲು

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮದ GDP ನಡುವೆಯೂ ಭಾರತದ ಸಮಗ್ರ ಆರ್ಥಿಕ ಬೆಳವಣಿಗೆ (ಜಿಡಿಪಿ) ಬೆಳವಣಿಗೆ ದರ 2027ರ ವಿತ್ತೀಯ ವರ್ಷಕ್ಕೆ ಶೇ.6.5ರಷ್ಟು ದಾಖಲಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿದೆ. ಈ ಬಗ್ಗೆ ಐಎಂಎಫ್ ಮಾಹಿತಿ ಹಂಚಿಕೊಂಡಿದ್ದು, '2027ರಲ್ಲಿ ಆರ್ಥಿಕತೆ ಬೆಳವಣಿಗೆಯು ಶೇ.6.5ರಷ್ಟಿರಲಿದೆ. ಭಾರತೀಯ ಸರಕುಗಳ ಮೇಲೆ ಟ್ರಂಪ್ ವಿಧಿಸಿದ್ದ ಹೆಚ್ಚುವರಿ ತೆರಿಗೆಯನ್ನು ಶೇ.10ಕ್ಕೆ ಇಳಿಸಿದ ಪರಿಣಾಮ ಮಧ್ಯಪ್ರಾಚ್ಯ ಸಂಘರ್ಷದ ಪ್ರತಿಕೂಲ ನಡುವೆಯೂ ಆರ್ಥಿಕತೆ ವೇಗ ಪಡೆಯುವ ಸಾಧ್ಯತೆಯಿದೆ'ಎಂದಿದೆ.

ಇದನ್ನೂ ಓದಿ: Women s Reservation Bill: ಮಹಿಳಾ ಮೀಸಲಾತಿ ಓಕೆ; ಚುನಾವಣಾ ಟೈಮಲ್ಲೇ ಏಕೆ - ಸೋನಿಯಾ ಗಾಂಧಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಇರಾನ್
ಕೊಲ್ಲಿ ಯುದ್ಧ
ಭಾರತ ಸುದ್ದಿ
ಭಾರತ

Latest Videos
Recommended Stories
Recommended image1
ಬಟ್ಟೆ ಬಳಸಿ ಬೇಜಾರು ಬಂದ್ರೆ ಇಲ್ಲಿ ಬರಬಹುದು!
Recommended image2
Viral: ಎರಡನೇ ಸಲ ಕೆಲಸ ಹೋಯ್ತು, ಐಟಿ ಜಾಬ್‌ಗೆ ಬೇಸತ್ತು ರೆಸ್ಟೋರೆಂಟ್ ತೆರೆದ, ಈಗ ತಿಂಗಳಿಗೆ 1.3 ಕೋಟಿ ದುಡಿತಿದ್ದಾನೆ ಟೆಕ್ಕಿ!
Recommended image3
ಯುದ್ಧದ ಸಂಕಷ್ಟಕ್ಕೆ ನಲುಗಿದ ಅಂಬಾನಿ, ಭಾರೀ ಮೊತ್ತಕ್ಕೆ ಅಂಗಸಂಸ್ಥೆಯನ್ನು ಮಾರಿದ ರಿಲಯನ್ಸ್‌ ಇಂಡಸ್ಟ್ರೀಸ್‌
Related Stories
Recommended image1
ಇರಾನ್-ಅಮೆರಿಕ ಸಂಘರ್ಷ; ಶಾಂತಿ ಸ್ಥಾಪನೆಗೆ 4 ಸೂತ್ರ ನೀಡಿ ಖಡಕ್ ಎಚ್ಚರಿಕೆ ಕೊಟ್ಟ ಚೀನಾ
Recommended image2
ಇರಾನ್ ಜೊತೆಗಿನ ಮಾತುಕತೆ ವಿಫಲ: ಕೆರಳಿದ ಟ್ರಂಪ್‌ನಿಂದ ಶಾಕಿಂಗ್ ಘೋಷಣೆ, ಇಡೀ ವಿಶ್ವವೇ ಸ್ತಬ್ಧ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved