ಮಗನಿಗೆ ಆಸ್ತಿ ಕೊಟ್ಟು ಕೆಟ್ಟೆ; ನಾನು ರಸ್ತೆಯಲ್ಲಿದ್ರೇನೆ ಅವನಿಗೆ ಖುಷಿ: ರೇಮಂಡ್ಸ್ ಸಂಸ್ಥಾಪಕ ಬೇಸರ
ಗೌತಮ್ ಮೇಲೆ ದೈಹಿಕ ಹಲ್ಲೆ ಆರೋಪ ಮಾಡಿದ ಮಾಜಿ ಪತ್ನಿ ನವಾಜ್ ಮೋದಿ ಹೇಳಿಕೆ ನೀಡಿದ ನಂತರ ತಂದೆ ಪ್ರತಿಕ್ರಿಯೆ ನೀಡಿರೋದು ಹೀಗೆ..

ರೇಮಂಡ್ ಗ್ರೂಪ್ನ ಸಂಸ್ಥಾಪಕ ಮತ್ತು ಹಾಲಿ ಅಧ್ಯಕ್ಷ ಗೌತಮ್ ಸಿಂಘಾನಿಯಾ ಅವರ ತಂದೆ ವಿಜಯಪತ್ ಸಿಂಘಾನಿಯಾ ಮಗ - ಸೊಸೆ ಡಿವೋರ್ಸ್ ವಿಚಾರದಲ್ಲಿ ಪರೋಕ್ಷವಾಗಿ ಸೊಸೆಗೆ ಬೆಂಬಲ ಕೊಟ್ಟಿದ್ದಾರೆ. ಗೌತಮ್ ಮೇಲೆ ದೈಹಿಕ ಹಲ್ಲೆ ಆರೋಪ ಮಾಡಿದ ಮಾಜಿ ಪತ್ನಿ ನವಾಜ್ ಮೋದಿ ಹೇಳಿಕೆ ನೀಡಿದ ನಂತರ ಇವರು ಪ್ರತಿಕ್ರಿಯೆ ನೀಡಿರೋದು ಹೀಗೆ..
ತಮ್ಮ ಅಸ್ತಿಯನ್ನು ಮಗ ಗೌತಮ್ ಸಿಂಘಾನಿಯಾಗೆ ನೀಡಿದ್ದಕ್ಕಾಗಿಯೂ ತಂದೆ ಸಂದರ್ಶನವೊಂದರಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಗೌತಮ್ ಸಿಂಘಾನಿಯಾ ತನ್ನನ್ನು ರಸ್ತೆ ಪಾಲಾಗಿರುವುದನ್ನು ನೋಡಲು ಸಂತೋಷ ಪಡುತ್ತಾನೆ ಎಂದೂ ಹೇಳಿಕೊಂಡಿದ್ದಾರೆ.
ಇನ್ನು, ಒಂದು ವೇಳೆ ನವಾಜ್ ಮೋದಿ ನಿಮ್ಮನ್ನು ಸಂಪರ್ಕಿಸಿದರೆ ತಮ್ಮ ಮಗನೊಂದಿಗೆ ಮಾತನಾಡಲು ಸಿದ್ಧರಿದ್ದಾರೆಯೇ ಎಂದು ಕೇಳಿದ್ದಕ್ಕೆ, ನಾನು ಅವರನ್ನು ಭೇಟಿಯಾಗಲು ಮುಕ್ತನಾಗಿರುತ್ತೇನೆ. ಆದರೆ, ಅವನನ್ನು ಭೇಟಿಯಾಗುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅವನು ನನ್ನ ಮಾತನ್ನು ಕೇಳುವುದಿಲ್ಲ ಎಂದೂ ಹೇಳಿದ್ದಾರೆ.
ಮತ್ತು ಅವನಿಗೆ ಇಷ್ಟವಿಲ್ಲದದ್ದನ್ನು ನಾನು ಹೇಳಿದರೆ, ಅವನು ನನ್ನ ಮೇಲೆ ಕಿರುಚಬಹುದು, ನಿಂದಿಸಬಹುದು. ಅವನು ಈ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಾನೆ. ಆದ್ದರಿಂದ, ನಾನು ಬಹುಶಃ ನನ್ನಿಂದ ಸಾಧ್ಯವಾದಷ್ಟು ದೂರವಿರಲು ಪ್ರಯತ್ನಿಸುತ್ತೇನೆ ಎಂದೂ ಹೇಳಿದರು.
ಮಗ ಗೌತಮ್ ತನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ ಮತ್ತು ಅವನು ಈಗ ಉಳಿದಿರುವ ಅಲ್ಪ ಹಣದಿಂದ ಬದುಕುತ್ತಿದ್ದೇನೆ ಎಂದೂ ಬಹಿರಂಗಪಡಿಸಿದ್ದಾರೆ.
ನನಗೆ ಯಾವುದೇ ವ್ಯವಹಾರವಿಲ್ಲ. ನಾನು ಅವನಿಗೆ ಎಲ್ಲವನ್ನೂ ಕೊಟ್ಟಿದ್ದೇನೆ. ನನ್ನ ಬಳಿ ಸ್ವಲ್ಪ ಹಣ ಉಳಿದಿತ್ತು, ಅದರ ಮೇಲೆ ನಾನು ಇಂದು ಬದುಕುತ್ತಿದ್ದೇನೆ.
ಇಲ್ಲದಿದ್ದರೆ ನಾನು ರಸ್ತೆಯಲ್ಲೇ ಇರುತ್ತಿದ್ದೆ. ಅವನು ನನ್ನನ್ನು ರಸ್ತೆಯಲ್ಲಿ ನೋಡಿದರೆ ಸಂತೋಷಪಡುತ್ತಾನೆ. ನನಗೆ ಅದು ಖಚಿತವಾಗಿದೆ.
ಅವನು ತನ್ನ ಹೆಂಡತಿಯನ್ನು ಹೀಗೆ ತಳ್ಳಲು ಸಾಧ್ಯವಾದರೆ, ಅವನ ತಂದೆಯನ್ನು ಹೀಗೆ ದೂರ ಮಾಡಲು ಸಾಧ್ಯವಾದರೆ, ಅವನು ಏನೆಂದು ನನಗೆ ತಿಳಿದಿಲ್ಲ ಎಂದೂ ಹೇಳಿದರು.
ಹಾಗೆ, ತಮ್ಮ ಮಕ್ಕಳಿಗೆ ಎಲ್ಲವನ್ನೂ ನೀಡುವ ಮೊದಲು, ನನ್ನಂತಹ ಪೋಷಕರು ಸ್ವಲ್ಪ ಗಂಭೀರವಾಗಿ ಯೋಚಿಸಬೇಕು ಎಂದೂ ಹೇಳಿದರು. ಎಲ್ಲ ರೀತಿಯಿಂದಲೂ, ನಿಮಗೆ ಬೇಕಾದುದನ್ನು ನೀಡಿ. ನಾನು ನಿಮಗೆ ಕೊಡಬೇಡಿ ಎಂದು ಹೇಳುತ್ತಿಲ್ಲ.
ಆದರೆ, ನೀವು ಸತ್ತ ನಂತರ ಕೊಡಿ ಎಂದು ಮಾತ್ರ ಹೇಳುತ್ತಿದ್ದೇನೆ. ನಿಮ್ಮ ಜೀವಿತಾವಧಿಯಲ್ಲಿ ಅದನ್ನು ನೀಡಬೇಡಿ. ಏಕೆಂದರೆ ನೀವು ಭಾರಿ ಬೆಲೆ ತೆರಬೇಕಾಗಬಹುದು ಎಂದೂ ವಿಜಯಪತ್ ಸಿಂಘಾನಿಯಾ ಪೋಷಕರಿಗೆ ಸಲಹೆ ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.