ಬಜೆಟ್ ಅಧಿವೇಶನದಲ್ಲಿ ಹೊಸ ನೇರ ತೆರಿಗೆ ಮಸೂದೆ ಮಂಡನೆ ಸಾಧ್ಯತೆ, ಇದರಿಂದ ಯಾರಿಗೆ ಲಾಭ?
ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ನೇರ ತೆರಿಗೆ ಮಸೂದೆಯನ್ನು ಮಂಡಿಸುವ ಸಾಧ್ಯತೆ ಹೆಚ್ಚಿದೆ. ಹೊಸ ಆದಾಯ ತೆರಿಗೆ ವ್ಯವಸ್ಥೆಯಿಂದ ಯಾರಿಗೆ ಲಾಭ? ಇದರಿಂದ ಜನಸಾಮಾನ್ಯರಿಗೆ ಒಳಿತಾಗುತ್ತಾ?

ಹೊಸ ನೇರ ತೆರಿಗೆ ಮಸೂದೆ
ಭಾರತದ ತೆರಿಗೆ ರೂಪದಲ್ಲಿ ಅತೀ ಹೆಚ್ಚಿನ ಹಣವನ್ನು ಸಂಗ್ರಹಿಸುತ್ತದೆ. ಜನಸಾಮಾನ್ಯರಿಗೆ ಹೊರೆಯಾದರೂ ಬೇರೆ ಮಾರ್ಗವಿಲ್ಲ. ಆದರೆ ಹಳೇ ಪದ್ಧತಿ ಬದಲು ಕೇಂದ್ರ ಸರ್ಕಾರ ಇದೀಗ ಹೊಸ ಪದ್ಧತಿ ಜಾರಿಗೆ ತರಲು ಮುಂದಾಗಿದೆ. 63 ವರ್ಷ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಲು ಹೊಸ ಕಾನೂನು ಎರಡು ಅಥವಾ ಮೂರು ಭಾಗಗಳಲ್ಲಿ ಇರಬಹುದು ಎಂದು ಹಣಕಾಸು ಮೂಲಗಳು ತಿಳಿಸಿವೆ. ಅಧಿಕಾರಿಗಳ ಸಮಿತಿಯು ರಚಿಸಿದ ಕರಡು ಮಸೂದೆಯನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಆದಾಯ ತೆರಿಗೆ
ತೆರಿಗೆ ಕಾನೂನುಗಳು ಸಂಕೀರ್ಣವಾಗಿವೆ ಎಂಬ ಹಲವು ಟೀಕೆಗಳು ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ. ತೆರಿಗೆದಾರರು ಮತ್ತು ತಜ್ಞರ ಅಭಿಪ್ರಾಯಗಳನ್ನು ಪಡೆದು ಕರಡು ಮಸೂದೆಯನ್ನು ಪರಿಷ್ಕರಿಸಲು ಸರ್ಕಾರ ಯೋಜಿಸಿದೆ.
ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಯ ಸಮಯದಲ್ಲಿ ಕರಡು ಮಸೂದೆಯನ್ನು ಸಿದ್ಧಪಡಿಸಲು ಹಣಕಾಸು ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಆರು ರಿಂದ ಎಂಟು ವಾರಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದಾರೆ. ಹೊಸ ನೇರ ತೆರಿಗೆ ಮಸೂದೆ ಜಟಿಲ ಸಮಸ್ಯೆಯನ್ನು ದೂರವಾಗಿಸಲಿದೆ ಎಂದು ಹೇಳಲಾಗುತ್ತದೆ. ನೇರ ತೆರಿಗೆ ಮೂಲಕ ಜನಸಾಮಾನ್ಯರಿಗೂ ಒಳಿತಾಗಲಿದೆ ಎಂದು ಹೇಳಲಾಗುತ್ತಿದೆ.
ಬಜೆಟ್ ಅಧಿವೇಶನ 2025
ಕಳೆದ ಜುಲೈನಲ್ಲಿ ಮಂಡಿಸಿದ ಬಜೆಟ್ನಲ್ಲಿ ಈ ಕ್ರಮದ ಬಗ್ಗೆ ಘೋಷಿಸಿದ್ದ ನಿರ್ಮಲಾ ಸೀತಾರಾಮನ್, ಫೆಬ್ರವರಿ 1 ರಂದು ತಮ್ಮ ಭಾಷಣದಲ್ಲಿ ಈ ಕಾನೂನಿನ ಬಗ್ಗೆಯೂ ಪ್ರಸ್ತಾಪಿಸುವ ನಿರೀಕ್ಷೆಯಿದೆ. ಆದರೆ ಈ ಮಸೂದೆಯನ್ನು ಅಧಿವೇಶನದಲ್ಲಿ ಯಾವಾಗ ಮಂಡಿಸಲಾಗುವುದು ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಆದಾಯ ತೆರಿಗೆ ಸ್ಲ್ಯಾಬ್ಗಳು
2010 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ನೇರ ತೆರಿಗೆ ಸಂಹಿತೆ ಮಸೂದೆಯ ನಂತರ ಆದಾಯ ತೆರಿಗೆ ಕಾಯ್ದೆಯನ್ನು ಪುನಃ ಬರೆಯುವ ಮೂರನೇ ಪ್ರಯತ್ನ ಇದಾಗಿದೆ. ಬಿಜೆಪಿ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿದ್ದರೂ, ಅದರ ವರದಿಗಳನ್ನು ಬಿಡುಗಡೆ ಮಾಡಿಲ್ಲ. ತೆರಿಗೆ ಕಾನೂನಿನಲ್ಲಿರುವ ಸಂಕೀರ್ಣ ನಿಬಂಧನೆಗಳನ್ನು ಹೊಸ ಕಾನೂನಿನಲ್ಲಿ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಸಮಿತಿಗೆ ಸೂಚಿಸಲಾಗಿದೆ.
ತೆರಿಗೆದಾರರು
ಆದಾಯ ತೆರಿಗೆ ಕಾಯ್ದೆಯಲ್ಲಿರುವ ಹಲವು ವಿಭಾಗಗಳನ್ನು ಹಲವು ವರ್ಷಗಳಿಂದ ತೆಗೆದುಹಾಕಿಲ್ಲ. ಅವು ಅನಗತ್ಯವಾಗಿರುವುದರಿಂದ ತೆಗೆದುಹಾಕಲಾಗುತ್ತಿದೆ. ಸಾಮಾನ್ಯ ಜನರಿಗೆ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು ಎಂಬ ಕಾರಣಕ್ಕೆ ಅದನ್ನು ಸಾಧ್ಯವಾದಷ್ಟು ಸರಳಗೊಳಿಸಲು ಸಮಿತಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ನೇರ ತೆರಿಗೆ ಸಂಹಿತೆ ಮಸೂದೆ
ಆದರೆ ಹೊಸ ಕಾನೂನಿನಲ್ಲಿ ಈಗ ಹೊಸ ಸಮಸ್ಯೆಗಳಿರುವುದಿಲ್ಲ ಎನ್ನಲಾಗಿದೆ. ಆದರೆ, ಭಾಷೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದರೆ, ತೆರಿಗೆದಾರರು ಹಲವು ಪ್ರಕರಣಗಳಲ್ಲಿ ಹೊಸ ವ್ಯಾಖ್ಯಾನವನ್ನು ಕೋರಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.