MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • Bay Leaf Farming: ಒಂದೇ ಮರದಿಂದ 20kg ಎಲೆಗಳು, 25 ವರ್ಷದವರೆಗೂ ಆದಾಯ; 400 ಕೋಟಿ ರೂ ಮಾಡಿದ ರೈತ!

Bay Leaf Farming: ಒಂದೇ ಮರದಿಂದ 20kg ಎಲೆಗಳು, 25 ವರ್ಷದವರೆಗೂ ಆದಾಯ; 400 ಕೋಟಿ ರೂ ಮಾಡಿದ ರೈತ!

ಇಂದು ಸಾಕಷ್ಟು ರೈತರು ವಿವಿಧ ರೀತಿಯ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ. ಅದೇ ರೀತಿ ತೇಜಪತ್ರೆ ಅಥವಾ ದಾಲ್ಚಿನ್ನಿ ಬೆಳೆ ಬೆಳೆದು ಇಲ್ಲೋರ್ವ ರೈತ ದೊಡ್ಡ ಮಟ್ಟದ ಜಯ ಸಾಧಿಸಿದ್ದಾರೆ.  

2 Min read
Padmashree Bhat
Published : May 20 2025, 04:26 PM IST| Updated : May 20 2025, 04:32 PM IST
Share this Photo Gallery
  • FB
  • TW
  • Linkdin
  • Whatsapp
19
ಎಷ್ಟು ದರ?

ಎಷ್ಟು ದರ?

ತೇಜಪತ್ರೆಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ, ಈ ಭಾಗದ ರೈತರು ಈ ಬೆಳೆಯತ್ತ ಮುಖ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 20 ವರ್ಷಗಳ ಹಿಂದೆ ತೇಜಪತ್ರೆಯನ್ನು ಬೆಳೆಯುತ್ತಿರಲಿಲ್ಲ. ಆದರೆ ಇಂದು, ಉತ್ತರ ದಿನಾಜ್‌ಪುರ ರಾಜ್ಯದ ತೇಜಪತ್ರೆ ಉತ್ಪಾದನೆಯ ಕೇಂದ್ರವಾಗಿದೆ. ಇದು 400 ಕೋಟಿ ರೂಪಾಯಿಯ ಉದ್ಯಮವಾಗಿದ್ದು, ಕ್ವಿಂಟಾಲ್‌ಗೆ 5,000 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.

29
ಎಷ್ಟು ಜನರು ಬೆಳೆಯುತ್ತಿದ್ದಾರೆ?

ಎಷ್ಟು ಜನರು ಬೆಳೆಯುತ್ತಿದ್ದಾರೆ?

ಪುರುಷರು ದಾಲ್ಚಿನ್ನಿ ಮರಗಳನ್ನು ಬೆಳೆಸಿ, ಕೊಯ್ಲು ಮಾಡುತ್ತಾರೆ, ಮಹಿಳೆಯರು ಎಲೆಗಳನ್ನು ಕೊಂಬೆಗಳಿಂದ ಬೇರ್ಪಡಿಸಿ, ಒಣಗಿಸುವ ಕೆಲಸ ಮಾಡುತ್ತಾರೆ. ಉತ್ತರ ದಿನಾಜ್‌ಪುರದಲ್ಲಿ 80% ರೈತರು ದಾಲ್ಚಿನ್ನಿ ಬೆಳೆಯುತ್ತಿದ್ದಾರೆ. 64% ಮಹಿಳೆಯರು ಎಲೆಗಳನ್ನು ಬೇರ್ಪಡಿಸುವ ಮತ್ತು ಒಣಗಿಸುವ ಕೆಲಸದಲ್ಲಿ ಮಾಡುತ್ತಾರೆ. ಎಲೆಗಳನ್ನು ಬೇರ್ಪಡಿಸಲು, ಕತ್ತರಿಸಲು ಎಂದು ಬೇರೆ ಬೇರೆ ಹಣ ಫಿಕ್ಸ್‌ ಮಾಡಿದ್ದಾರಂತೆ. 

Related Articles

Related image1
ತ್ವಚೆ ಹೊಳೆಯುವಂತೆ ಮಾಡುತ್ತೆ ಈ ಮಸೂರು ದಾಲ್ ಫೇಸ್ ಪ್ಯಾಕ್
Related image2
ದಿನಾ ಮುಂಜಾನೆ ಜೀರಿಗೆ ಹಾಗೂ ದಾಲ್ಚಿನ್ನಿ ನೀರು ಕುಡಿರಿ: ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ
39
ಬಂದ ಆದಾಯ ಎಷ್ಟು?

ಬಂದ ಆದಾಯ ಎಷ್ಟು?

2007ರಲ್ಲಿ, ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಬೆಳೆಗಳ ಬದಲು ತೇಜಪತ್ರೆ (ಬೇ ಲೀಫ್) ಬೆಳೆಯಲು ನಿರ್ಧಾರ ಮಾಡಿದರು. ಇದು ಅವರ ಲೈಫ್‌ ಬದಲು ಮಾಡಿತು. 650 ಮರಗಳಿಂದ ವರ್ಷಕ್ಕೆ 80-90 ಕ್ವಿಂಟಾಲ್ ತೇಜಪತ್ರೆ ಸಿಗುತ್ತದೆ, ಪ್ರತಿ ಮೂರು ವರ್ಷಕ್ಕೆ 5 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ.

49
ಉತ್ಪಾದನೆ ಎಷ್ಟಾಗಿದೆ?

ಉತ್ಪಾದನೆ ಎಷ್ಟಾಗಿದೆ?

ಕಡಿಮೆ ನಿರ್ವಹಣೆ ಮಾಡುವುದರ ಜೊತೆಗೆ ನಿರಂತರ ಬೇಡಿಕೆ ಇರುವ ಬೆಳೆಯಾಗಿದೆ. 2020ರಲ್ಲಿ 240 ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗುತ್ತಿದ್ದ ದಾಲ್ಚಿಯನ್ನು, ಕಳೆದ ವರ್ಷ 318 ಹೆಕ್ಟೇರ್‌ಗೆ ವಿಸ್ತರಿಸಲಾಗಿತ್ತು. 769 ಮೆಟ್ರಿಕ್ ಟನ್‌ನಿಂದ 2024-25ರಲ್ಲಿ 1019 ಮೆಟ್ರಿಕ್ ಟನ್‌ಗೆ ಉತ್ಪಾದನೆಯೂ ಏರಿದೆ. ಸುಮಾರು 10,000 ಜನರು ಈ ಉದ್ಯಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿದ್ದಾರೆ.

59
ದಾಲ್ಚಿನ್ನಿ ಕೃಷಿ ಹೇಗೆ ಮಾಡ್ತಾರೆ?

ದಾಲ್ಚಿನ್ನಿ ಕೃಷಿ ಹೇಗೆ ಮಾಡ್ತಾರೆ?

ದಾಲ್ಚಿನ್ನಿ ಎಲೆಗಳನ್ನು ಆಹಾರದಲ್ಲಿ ಬಳಸುವುದರ ಜೊತೆಗೆ, ಕೊಂಬೆಗಳನ್ನು ಪುಡಿಮಾಡಿ, ಎಲೆಗಳನ್ನು ನೈಸರ್ಗಿಕ ಬಣ್ಣವಾಗಿ ಬಳಸಲಾಗುತ್ತದೆ. ತೇಜಪತ್ರೆ ಮರಗಳು ಎಂದಿಗೂ ಹಸಿರಾಗಿರುತ್ತವೆ, 2-3 ವರ್ಷಗಳಲ್ಲಿ ಬೆಳೆಯುತ್ತವೆ. ಒಂದು ಮರ ವರ್ಷಕ್ಕೆ 15-20 ಕೆ.ಜಿ. ಎಲೆಗಳನ್ನು 25 ವರ್ಷಗಳವರೆಗೆ ಕೊಡುತ್ತದೆ. ರೈತರು ಅವರ ತೋಟವನ್ನು ವ್ಯಾಪಾರಿಗಳಿಗೆ 3 ವರ್ಷಗಳಿಗೆ ಗುತ್ತಿಗೆಗೆ ನೀಡುತ್ತಾರೆ. ವ್ಯಾಪಾರಿಗಳು ಕೊಯ್ಲು, ಒಣಗಿಸುವಿಕೆ, ಪ್ಯಾಕಿಂಗ್, ಸಾಗಾಟ ಎಲ್ಲವನ್ನೂ ನೋಡಿಕೊಳ್ತಾರೆ. ಇದರಿಂದ ರೈತರಿಗೆ ಜಾಸ್ತಿ ಕೆಲಸ ಇರೋದಿಲ್ಲ. 
 

69
ಕೊಯ್ಲು ಯಾವಾಗ?

ಕೊಯ್ಲು ಯಾವಾಗ?

ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ತೇಜಪತ್ರೆಯ ಕೊಯ್ಲು ಮಾಡಲಾಗುತ್ತದೆ. ಪ್ರತಿ 6-8 ತಿಂಗಳಿಗೊಮ್ಮೆ, ಕೆಲವೊಮ್ಮೆ ವರ್ಷಕ್ಕೆ ಎರಡು ಬಾರಿ ಕೊಯ್ಲು ಮಾಡಲಾಗುವುದು. ಎಲೆಗಳನ್ನು 3-4 ದಿನ ಒಣಗಿಸುತ್ತಾರೆ. ಮಳೆಗಾಲದಲ್ಲಿ, ಎಲೆಗಳನ್ನು ಪ್ಲಾಸ್ಟಿಕ್ ಶೀಟ್‌ಗಳಿಂದ ಮುಚ್ಚುವುದರಿಂದ ಹೆಚ್ಚಿನ ಶ್ರಮ ಬೇಕು. 
 

79
ಬೇರೆ ಬೆಳೆಯನ್ನು ಬೆಳೆಯಲಾಗತ್ತೆ

ಬೇರೆ ಬೆಳೆಯನ್ನು ಬೆಳೆಯಲಾಗತ್ತೆ

ಈ ಮರಗಳ ಮಧ್ಯೆ ಆಲೂಗಡ್ಡೆ, ಕಾಳುಗಳನ್ನು ಕೂಡ ಬೆಳೆಯಲಾಗಿದೆಯಂತೆ. ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ಕೆಲ ರೈತರು ಹೇಳಿದ್ದಾರೆ.
 

89
ಎಲ್ಲೆಲ್ಲಿ ರಫ್ತು ಮಾಡ್ತಾರೆ?

ಎಲ್ಲೆಲ್ಲಿ ರಫ್ತು ಮಾಡ್ತಾರೆ?

ದಾಲ್ಚಿನ್ನಿಯನ್ನು A, B, C ಗುಣಮಟ್ಟದ ಶ್ರೇಣಿಗಳಾಗಿ ವಿಭಾಗ ಮಾಡಲಾಗಿದೆ. A ಗುಣಮಟ್ಟದ ಎಲೆಗಳನ್ನು ಗಲ್ಫ್ ರಾಷ್ಟ್ರಗಳಿಗೆ, B ಮತ್ತು C ಗುಣಮಟ್ಟದ ಎಲೆಗಳನ್ನು ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿಯಂತಹ ಭಾರತದಲ್ಲಿರುವ ನಗರಗಳಿಗೆ ರಫ್ತು ಮಾಡುತ್ತಾರೆ. ಕೊಯ್ಲು, ಪ್ಯಾಕಿಂಗ್ ಮಾಡುವುದು, ನೀರಾವರಿ ಕೊಡುವುದು, ಗೊಬ್ಬರ ಹಾಕುವುದು, ಕೀಟನಾಶಕಗಳಿಗೆ ಸೇರಿ ಕ್ವಿಂಟಾಲ್‌ಗೆ 2,600 ರೂಪಾಯಿ ಖರ್ಚಾಗುತ್ತದೆ ಎಂದು ಒಬ್ಬ ವ್ಯಾಪಾರಿ ಹೇಳುತ್ತಾರೆ. 
 

99
ಆದಾಯ ಎಷ್ಟು?

ಆದಾಯ ಎಷ್ಟು?

ಸಾಂಪ್ರದಾಯಿಕ ಬೆಳೆಗಳಾದ ಭತ್ತವು ವರ್ಷಕ್ಕೆ 30,000-40,000 ರೂಪಾಯಿ ಆದಾಯ ನೀಡುತ್ತಿತ್ತು. ಆದರೆ ತೇಜಪತ್ರೆ ಕೃಷಿಯಿಂದ ಆದಾಯ ಇನ್ನಷ್ಟು ಹೆಚ್ಚಾಗಿದೆ. ಇದರಿಂದ ಆರ್ಥಿಕ ಅಭಿವೃದ್ಧಿ ಆಗಿದೆ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಕೃಷಿ
ವ್ಯಾಪಾರ ಕಲ್ಪನೆ
ವ್ಯವಹಾರ
ವ್ಯಾಪಾರ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved