ಇಂದು-ನಾಳೆ ಅಪರೂಪದ ನೀಲಿ ಹುಣ್ಣಿಮೆ: ಈ ಒಂದೇ ಒಂದು ಕ್ರಿಯೆ ಭವಿಷ್ಯವನ್ನೇ ಬದಲಿಸಬಹುದು
ಈ ಬಾರಿ ಎರಡು ದಿನಗಳ ಕಾಲ ಬಂದಿರುವ ನೀಲಿ ಹುಣ್ಣಿಮೆಯು ಇಷ್ಟಾರ್ಥ ಸಿದ್ಧಿಗೆ ವಿಶೇಷವಾಗಿದೆ. ಈ ಸಮಯದಲ್ಲಿ ಚಂದ್ರನ ಬೆಳಕಿನಲ್ಲಿ ಧ್ಯಾನ, ಕೃತಜ್ಞತೆ ಸಲ್ಲಿಸುವುದು ಮತ್ತು ಮಂತ್ರ ಪಠಣದಂತಹ ಕ್ರಿಯೆಗಳನ್ನು ಮಾಡುವುದರಿಂದ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು.

ಎರಡು ದಿನ ಹುಣ್ಣಿಮೆ
ಈ ಬಾರಿ ಎರಡು ದಿನಗಳು ಹುಣ್ಣಿಮೆ ಬಂದಿವೆ. ಅದು ಇಂದು ಶನಿವಾರ ಮೇ 30 ಮತ್ತು ನಾಳೆ ಭಾನುವಾರ ಮೇ 31. ಇದನ್ನು ನೀಲಿ ಹುಣ್ಣಿಮೆ (Blue Moon) ಎಂದು ಕರೆಯಲಾಗುತ್ತದೆ. 'ಬ್ಲೂ ಮೂನ್' ಎಂಬ ಪದವು ಕ್ಯಾಲೆಂಡರ್ ತಿಂಗಳಿನಲ್ಲಿ ಬರುವ ಎರಡನೇ ಹುಣ್ಣಿಮೆಗೆ ನೀಡಲಾಗುವ ಅನೌಪಚಾರಿಕ ಅಡ್ಡಹೆಸರು. 2023ರಲ್ಲಿ ಈ ರೀತಿಯ ಒಂದು ಅಪರೂಪದ ದಿನ ಬಂದಿತ್ತು. ಮೂರು ವರ್ಷಗಳ ಬಳಿಕ ಮತ್ತೆ ಈ ದಿನ ಬಂದಿದೆ. ಇಷ್ಟಾರ್ಥ ಸಿದ್ಧಿಗೆ ಈ ದಿನ ಹೇಳಿಮಾಡಿಸಿದ್ದು ಎಂದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗುತ್ತಿದೆ.
ಏನಿದು ಬ್ಲೂ ಮೂನ್
ಒಂದೇ ತಿಂಗಳಿನಲ್ಲಿ ಎರಡು ಬಾರಿ ಹುಣ್ಣಿಮೆ ಬರುವುದೋ, ಆಗ ಅದಕ್ಕೆ ಬ್ಲೂ ಮೂನ್ ಎಂದು ಕರೆಯುತ್ತಾರೆ. ಹಾಗೆಂದು ಚಂದ್ರ ನೀಲಿಯಾಗಿ ಕಾಣಿಸುವುದಿಲ್ಲ. ಬದಲಿಗೆ ಅಗಾಧವಾಗಿರುವ ಕೆಂಪು ಚಂದ್ರನನ್ನು ಈ ಎರಡೂ ದಿನಗಳಲ್ಲಿಯೂ ನೋಡಬಹುದಾಗಿದೆ. ಆದರೆ ಇಷ್ಟಾರ್ಥ ಸಿದ್ಧಿಗೆ ನೀವು ಮಾಡುವ ಚಿಕ್ಕ ಕ್ರಿಯೆ ನಿಮ್ಮ ಭವಿಷ್ಯವನ್ನೇ ಬದಲಿಸುವ ಶಕ್ತಿ ಹೊಂದಿದೆ.
ಚಂದ್ರನ ಬೆಳಕಿನಲ್ಲಿ ಧ್ಯಾನ
ನೀವು ಚಂದ್ರನ ಬೆಳಕಿನಲ್ಲಿ ಕುಳಿತು ಪವಿತ್ರ ದೈವಿಕ ಬೆಳಕಿನಲ್ಲಿ ಧ್ಯಾನವನ್ನು ಅಭ್ಯಾಸ ಮಾಡಬಹುದು. ಆ ಸಂದರ್ಭದಲ್ಲಿ ಮೆನಿಫೆಸ್ಟೇಷನ್ ಮಾಡಬಹುದು. ಇದರ ಅರ್ಥ, ಆರೋಗ್ಯ, ಸಂಪತ್ತು, ಶಿಕ್ಷಣ ಯಾವುದರ ಬಗ್ಗೆ ನಿಮ್ಮ ಇಷ್ಟಾರ್ಥ ಸಾಧನೆ ಆಗಬೇಕು ಎಂದು ಎನ್ನಿಸುತ್ತದೆಯೋ ಅವೆಲ್ಲವೂ ಆದ ಹಾಗೆ, ಅದು ನೆರವೇರಿದ ಮೇಲೆ ನೀವು ಎಷ್ಟು ಖುಷಿಯಾಗಿರುತ್ತೀರಿ, ನೀವು ಏನೇನು ಮಾಡುತ್ತೀರಿ ಎನ್ನುವಂಥ ಸಕಾರಾತ್ಮಕ ಕಲ್ಪನೆಯನ್ನು ನೀವು ಆ ಸಂದರ್ಭದಲ್ಲಿ ಮಾಡಬೇಕು. ಯಾವುದೇ ಕಾರಣಕ್ಕೂ ಅಲ್ಲಿ ನೆಗೆಟಿವ್ ಯೋಚನೆ ಬರಲೇಬಾರದು. ಕಣ್ಮುಚ್ಚಿಕೊಂಡು ಚಂದ್ರನ ಬೆಳಕಿನಲ್ಲಿ ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿಸಿದ ಹಾಗೆ ಕಲ್ಪನೆ ಮಾಡಿಕೊಳ್ಳಿ. ಬಳಿಕ ನಿಮ್ಮ ಇಷ್ಟದ ದೇವರನ್ನು ನೆನಪಿಸಿಕೊಳ್ಳಿ. ಇಲ್ಲವೇ ಓಂ ಎಂದು ಜಪಿಸಿಕೊಳ್ಳಿ.
ಕೃತಜ್ಞತೆ ವ್ಯಕ್ತಪಡಿಸಿ
ನಿಮ್ಮ ಜೀವನದಲ್ಲಿ ನೀವು ಹೊಂದಿರುವ ಎಲ್ಲದಕ್ಕೂ ನೀವು ದೇವರಿಗೆ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ. ನಿಮ್ಮ ಜೀವನದಲ್ಲಿ ಏನೇನು ಆಗಿಲ್ಲವೋ ಅದರ ಬಗ್ಗೆ ಯೋಚಿಸದೇ, ಏನೇನು ನಿಮಗೆ ಸಿಕ್ಕಿದೆಯೋ ಅದನ್ನು ಕಲ್ಪಿಸಿಕೊಂಡು ದೇವರಿಗೆ ಕೃತಜ್ಞ ಸಲ್ಲಿಸಿ. ಆ ಕ್ಷಣದಲ್ಲಿ ನಿಮ್ಮ ಕಣ್ಣುಗಳಲ್ಲಿ ಧಾರಾಕಾರ ನೀರು ಬರಬಹುದು. ಅದನ್ನು ಲೆಕ್ಕಿಸಬೇಡಿ. ಅದರ ಪಾಡಿಗೆ ಅದನ್ನು ಹರಿಯಲು ಬಿಡಿ.
ಕಾಗದದ ಮೇಲೆ ಬರವಣಿಗೆ
ಒಂದು ಕಾಗದದ ಮೇಲೆ ನಿಮ್ಮ ಎಲ್ಲಾ ಭಯಗಳು, ಭಾವನೆಗಳು, ಚಿಂತೆಗಳನ್ನು ಬರೆಯಿರಿ. ಸೂರ್ಯನ ಬೆಳಕಿನಲ್ಲಿ ಕುಳಿತು, ಆ ಕಾಗದಗಳನ್ನು ಸುಟ್ಟು ಗಾಳಿಗೆ ಹಾರಲು ಬಿಡಿ. ಇಲ್ಲವೇ ಸುಟ್ಟ ಕಾಗದಗಳನ್ನು ಎಲ್ಲಿಯಾದರೂ ಹುಗಿದುಬಿಡಿ.
ಮಂತ್ರಗಳನ್ನು ಪಠಿಸಿ
ನೀವು ಈಗ ಎದುರಿಸುತ್ತಿರುವ ನಿಮ್ಮ ಗುಪ್ತ ಭಯಗಳು, ಆತಂಕ ಮತ್ತು ಹೃದಯ ನೋವುಗಳನ್ನು ಬಿಡುಗಡೆ ಮಾಡಲು ಮಂತ್ರ ಪಠಣವು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನೀವು ಸುಖಾಸನದಲ್ಲಿ ಕುಳಿತು "AUM" ಎಂದು ಜಪಿಸುತ್ತಾ ಭ್ರಮರಿ ಪ್ರಾಣಾಯಾಮವನ್ನು ಮಾಡಬಹುದಾದ ಶಾಂತ ಸ್ಥಳವನ್ನು ಕಂಡುಹಿಡಿಯಬೇಕು. ಇದು ನಿಮ್ಮ ಎಲ್ಲಾ ಗುಪ್ತ ಭಯಗಳು, ಆತಂಕ, ಭಾವನಾತ್ಮಕ ಹೊರೆ ಮತ್ತು ಆಘಾತಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
ಪ್ರಕೃತಿ ನಡಿಗೆ
ಹುಣ್ಣಿಮೆಯ ರಾತ್ರಿ ಅತ್ಯಂತ ಶಕ್ತಿಶಾಲಿಯಾಗಿದೆ ಆದ್ದರಿಂದ ನೀವು ನಡೆಯಬಹುದು ಮತ್ತು ಚಂದ್ರನೊಂದಿಗಿನ ನಿಮ್ಮ ಸಂಪರ್ಕವನ್ನು ಬಲಪಡಿಸಬಹುದು. ನೀವು ನಿಮ್ಮ ಭಾವನೆಗಳನ್ನು ಬಿಡುಗಡೆ ಮಾಡಬಹುದು.

