MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Manusmriti viral: ರಾಮ ಮಂದಿರದ ₹200 ಕೋಟಿ ದೇಣಿಗೆ ಕಳವು ಬಳಿಕ ವೈರಲ್ ಆಯ್ತು ಮನುಸ್ಮೃತಿ! ದೇಣಿಗೆ ಕಳ್ಳರಿಗೆ ಯಾವ ಶಿಕ್ಷೆ ಹೇಳಿದೆ?

Manusmriti viral: ರಾಮ ಮಂದಿರದ ₹200 ಕೋಟಿ ದೇಣಿಗೆ ಕಳವು ಬಳಿಕ ವೈರಲ್ ಆಯ್ತು ಮನುಸ್ಮೃತಿ! ದೇಣಿಗೆ ಕಳ್ಳರಿಗೆ ಯಾವ ಶಿಕ್ಷೆ ಹೇಳಿದೆ?

ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಗರಣದ ಬಳಿಕ ದೇವಾಲಯದ ಆಸ್ತಿ ಕಳವು ಕುರಿತು ಮನುಸ್ಮೃತಿ ಮತ್ತೆ ಚರ್ಚೆಗೆ ಬಂದಿದೆ. ವೈರಲ್ ಆಗಿರುವ 'ಕುದಿಯುವ ಎಣ್ಣೆಯಲ್ಲಿ ಹುರಿಯುವ ಶಿಕ್ಷೆ' ಎಂಬ ದಾವೆಗೆ ಯಾವುದೇ ಆಧಾರವಿಲ್ಲ. ಆದರೆ ದೇವಾಲಯದ ಆಸ್ತಿ ಕಳವು ಮಹಾಪಾಪ ಎಂದು ಮನುಸ್ಮೃತಿ ಹೇಳಿದೆ. 

2 Min read
Author : Ravi Janekal
Published : Jun 28 2026, 11:16 AM IST
Share this Photo Gallery
  • FB
  • TW
  • Linkdin
  • Whatsapp
14
Ayodhya: ಅಯೋಧ್ಯಾ ದೇಣಿಗೆ ಹಣ ಕಳ್ಳತನ ಪ್ರಕರಣ
Image Credit : ANI

Ayodhya: ಅಯೋಧ್ಯಾ ದೇಣಿಗೆ ಹಣ ಕಳ್ಳತನ ಪ್ರಕರಣ

ಅಯೋಧ್ಯೆ ರಾಮಮಂದಿರದಲ್ಲಿ ದೇಶಾದ್ಯಂತ ಭಕ್ತರು ನೀಡಿದ ನೂರಾರು ಕೋಟಿ ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ಕಳವು ಮಾಡಿದ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಣ ಎಣಿಕೆ ಉಸ್ತುವಾರಿ ಹೊಂದಿದ್ದ ಒಟ್ಟು ಆರು ಮಂದಿ ಸಿಬ್ಬಂದಿಯನ್ನ ಬಂದಿಸಿದ್ದು ಒಟ್ಟು ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಆಯೋಧ್ಯಾ ಕಳ್ಳತನ ಎಸ್‌ಐಟಿ ರಚನೆ
Image Credit : Asianet News

ಆಯೋಧ್ಯಾ ಕಳ್ಳತನ ಎಸ್‌ಐಟಿ ರಚನೆ

ಈ ಹಿಂದೆ ಅಖಿಲೇಶ್ ಯಾದವ್ ಈ ಬಗ್ಗೆ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿ ಎಸ್‌ಐಟಿ ರಚಿಸಿದ್ದರು. ತನಿಖೆ ವೇಳೆ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಸುಮಾರು ₹79.85 ಲಕ್ಷ ನಗದು ಹಣ, ವಶಪಡಿಸಿಕೊಳ್ಳಲಾಗಿದೆ.

ದೇಗುಲದಲ್ಲಿ ನಡೆದ ಅಕ್ರಮದ ಸಂಬಂಧ ನೈತಿಕ ಹೊಣೆ ಹೊತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

Related Articles

Related image1
Harihara: ಹಿಂದೂಗಳ ಆರಾಧ್ಯ ದೈವ ಅಯೋಧ್ಯಾ ರಾಮಮಂದಿರ ಸ್ಫೋಟಕ್ಕೆ ಸಂಚು! ಶಂಕಿತ ಉಗ್ರನ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ
Related image2
Fake Ayodhya Temple: ವಿಶಾಖಪಟ್ಟಣಂನಲ್ಲಿ ನಕಲಿ ಅಯೋಧ್ಯಾ ದೇಗುಲ ನಿರ್ಮಿಸಿ ಭಕ್ತರಿಂದ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್!
34
ದೇಣಿಗೆ ಕಳ್ಳರಿಗೆ ಮನಸ್ಮೃತಿಯಲ್ಲೇನು ಶಿಕ್ಷೆ?
Image Credit : Asianet News

ದೇಣಿಗೆ ಕಳ್ಳರಿಗೆ ಮನಸ್ಮೃತಿಯಲ್ಲೇನು ಶಿಕ್ಷೆ?

ಅಯೋಧ್ಯೆ ರಾಮ ಮಂದಿರದ ₹200 ಕೋಟಿ ದೇಣಿಗೆ ಹಗರಣ ದೇಶಾದ್ಯಂತ ಚರ್ಚೆಗೆ ಕಾರಣವಾದ ನಡುವೆಯೇ ಮನುಸ್ಮೃತಿಯಲ್ಲಿ 'ದೇಣಿಗೆ ಕಳ್ಳರಿಗೆ ನೀಡುವ ಶಿಕ್ಷೆ ಮುನ್ನಲೆಗೆ ಬಂದಿದೆ. ಮನುಸ್ಮೃತಿ ಪ್ರಕಾರ ದೇಣಿಗೆ ಕಳ್ಳರನ್ನು ಕುದಿಯುವ ಎಣ್ಣೆಯಲ್ಲಿ ಹುರಿಯುವ ಶಿಕ್ಷೆ ಕೊಡಲಾಗುತ್ತಿತ್ತಂತೆ. ಸಾಮಾಜಿಕ ಮಾಧ್ಯಮದಲ್ಲಿ ಹೀಗೊಂದು ಚರ್ಚೆ ಶುರುವಾಗಿಗದೆ.

ದೇವಾಲಯದ ದೇಣಿಗೆ ಅಥವಾ ಆಸ್ತಿ-ಪಾಸ್ತಿ ಕದಿಯುವ ವ್ಯಕ್ತಿಗಳನ್ನು ಕುದಿಯುವ ಎಣ್ಣೆಯಲ್ಲಿ ಹುರಿಯಬೇಕು ಎಂದು ಮನುಸ್ಮೃತಿಯಲ್ಲಿ ಯಾವುದೇ ನಿಬಂಧನೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಒಂದು ಸುಳ್ಳು ಸುದ್ದಿಯಷ್ಟೇ. ಮನುಸ್ಮೃತಿ ಪ್ರಕಾರ ದೇವಾಲಯದ ಆಸ್ತಿಯ ಕಳ್ಳತನವನ್ನು ಅತ್ಯಂತ ಗಂಭೀರ ಧಾರ್ಮಿಕ ಅಪರಾಧಗಳಲ್ಲೊಂದು ಎಂದು ಪರಿಗಣಿಸುತ್ತದೆ. ಇದಕ್ಕೆ ತೀವ್ರ ಆರ್ಥಿಕ, ಕಾನೂನು ಮತ್ತು ಆಧ್ಯಾತ್ಮಿಕ ಪರಿಣಾಮಗಳನ್ನು ಸೂಚಿಸುತ್ತದೆ.

44
ದೇವಸ್ಥಾನದಲ್ಲಿ ಕಳ್ತನ ಮಾಡೋದು ಪಾಪದ ಕೆಲಸ
Image Credit : Asianet News

ದೇವಸ್ಥಾನದಲ್ಲಿ ಕಳ್ತನ ಮಾಡೋದು ಪಾಪದ ಕೆಲಸ

ಮನುಸ್ಮೃತಿಯ ಅಧ್ಯಾಯ 11 ರ ಪ್ರಕಾರ, ದೇವಾಲಯದ ಆಸ್ತಿ, ಕಾಣಿಕೆಗಳು ಅಥವಾ ದೇವರಿಗೆ ಅರ್ಪಿಸಿದ ಬೆಲೆಬಾಳುವ ವಸ್ತುಗಳನ್ನು ಕದಿಯುವುದು ಮಹಾ ಪಾಪ. ಅಂತಹ ಕಳ್ಳತನ ಚಿನ್ನದ ಕಳ್ಳತನಕ್ಕೆ ಸಮಾನ ಎಂದಿದೆ. ದೇವಾಲಯದ ದೇಣಿಗೆಗಳನ್ನು ದೇವರಿಗೆ ಅರ್ಪಿಸಿದ ಪವಿತ್ರ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಹೀಗಾಗಿ ಇದು ಸಾಮಾನ್ಯ ಅಪರಾಧ ಅಲ್ಲ, ಕಳ್ಳತನಕ್ಕಿಂತ ದೊಡ್ಡ ಅಪರಾಧವಾಗಿದೆ.

ಮನುಸ್ಮೃತಿಯಲ್ಲಿ ಕಠಿಣ ಶಿಕ್ಷೆ

ಮನುಸ್ಮೃತಿಯಲ್ಲಿ ದೇಣಿಗೆ ಕಳ್ಳರಿಗೆ ಸಾಧ್ಯವಾದಷ್ಟು ಕಠಿಣ ಶಿಕ್ಷೆ ವಿಧಿಸುತ್ತದೆ. ಅದು ಸಾಮಾನ್ಯ ಜನರಿಗೆ ಕದ್ದ ಆಸ್ತಿಯ ಮೌಲ್ಯಕ್ಕಿಂತ ಹಲವಾರು ಪಟ್ಟು ದಂಡವಾದರೆ, ವ್ಯಾಪಾರಿಗಳಿಗೆ ಇನ್ನು ಕಠಿಣ ಶಿಕ್ಷೆಯೊಂದಿಗೆ ಭಾರೀ ದಂಡ ವಿಧಿಸಲಾಗುತ್ತದೆ. ಆಡಳಿತಗಾರರಿಗಂತೂ ಇನ್ನೂ ಹೆಚ್ಚು ಕಠಿಣವಾಗಿ ಶಿಕ್ಷೆ. ಅದರಲ್ಲೂ ದೇವಾಲಯದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡ ಪುರೋಹಿತರು ಅಥವಾ ಟ್ರಸ್ಟಿಗಳಂತಹ ವಿದ್ವಾಂಸರನ್ನು ಅತ್ಯಂತ ತಪ್ಪಿತಸ್ಥರೆಂದು ಪರಿಗಣಿಸಿ ಅಂತಹ ಸಂದರ್ಭಗಳಲ್ಲಿ, ವಿಧಿಸಲಾದ ದಂಡಗಳು ಕದ್ದ ಆಸ್ತಿಯ ಮೌಲ್ಯಕ್ಕಿಂತ 64 ರಿಂದ 128 ಪಟ್ಟು ಹೆಚ್ಚಾಗಬಹುದು ಎಂದು ತಿಳಿಸುತ್ತದೆ. ಏಕೆಂದರೆ ಅವರು ಇತರರಿಗಿಂತ ಧಾರ್ಮಿಕ ಕರ್ತವ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆಂದು ನಿರೀಕ್ಷಿಸಲಾಗಿತ್ತು.

ದಂಡ ಮತ್ತು ಆಸ್ತಿ ಮುಟ್ಟುಗೋಲು

ಯಾರೇ ಆಗಿರಲಿ ದೇಗುಲದ ಕಾಣಿಕೆ, ಆಸ್ತಿ ಕದ್ದವರಿಗೆ ಕಠಿಣ ಶಿಕ್ಷ ಕಟ್ಟಿಟ್ಟ ಬುತ್ತಿಯಾಗಿತ್ತು. ಇದರಲ್ಲಿ ಕದ್ದ ಆಸ್ತಿಯ ಮೌಲ್ಯಕ್ಕಿಂತ ಹಲವು ಪಟ್ಟು ದಂಡ ವಿಧಿಸುವುದು ಅಥವಾ ತೀವ್ರತರವಾದ ಪ್ರಕರಣಗಳಲ್ಲಿ ಅಪರಾಧಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಮನಸ್ಮೃತಿ ತಿಳಿಸಿದೆ.

ಪವಿತ್ರವಾದ ಧಾರ್ಮಿಕ ಆಸ್ತಿಯನ್ನು ಒಳಗೊಂಡ ಕಳ್ಳತನದ ಪ್ರಕರಣಗಳಲ್ಲಿ ಕಠಿಣ ದೈಹಿಕ ಶಿಕ್ಷೆಯನ್ನು ವಿಧಿಸಲು ಮನುಸ್ಮೃತಿಯು ರಾಜನಿಗೆ ಅಧಿಕಾರ ನೀಡಿತು. ಐತಿಹಾಸಿಕ ವ್ಯಾಖ್ಯಾನಗಳು ಶಿಕ್ಷೆಯು ದೇಹದ ಅಂಗ ಕತ್ತರಿಸುವಿಕೆ ಮತ್ತು ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಮರಣ ದಂಡನೆ ಒಳಪಡಿಸುವ ಬಗ್ಗೆಯೂ ಮನಸ್ಮೃತಿ ಸೂಚಿಸಿದೆ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಅಯೋಧ್ಯೆ
ರಾಮ ಮಂದಿರ
ಕಳ್ಳತನ ಪ್ರಕರಣ

Latest Videos
Recommended Stories
Recommended image1
Garud Puran: ಗರುಡ ಪುರಾಣದ ಪ್ರಕಾರ ಈ 5 ಜನರ ಶವಗಳನ್ನು ದಹನ ಮಾಡುವುದಿಲ್ಲ, ಬದಲಿಗೆ ನಡೆಯುತ್ತದೆ ಈ ವಿಶೇಷ ಆಚರಣೆ
Recommended image2
Tawa and Rahu Connection: ಚಪಾತಿ ಅಥವಾ ರೊಟ್ಟಿ ಮಾಡಿದ ನಂತ್ರ ತವಾವನ್ನು ಮರೆತೂ ಈ ರೀತಿ ಇಡಬಾರದಂತೆ
Recommended image3
Chanakya Niti: ಈ ನಾಲ್ವರು ಎಂದಿಗೂ ಶ್ರೀಮಂತರಾಗುವುದಿಲ್ಲ! ಅವರು ತಮ್ಮ ಜೀವನದುದ್ದಕ್ಕೂ ಹೋರಾಟ ಮತ್ತು ಬಡತನ
Related Stories
Recommended image1
Harihara: ಹಿಂದೂಗಳ ಆರಾಧ್ಯ ದೈವ ಅಯೋಧ್ಯಾ ರಾಮಮಂದಿರ ಸ್ಫೋಟಕ್ಕೆ ಸಂಚು! ಶಂಕಿತ ಉಗ್ರನ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ
Recommended image2
Fake Ayodhya Temple: ವಿಶಾಖಪಟ್ಟಣಂನಲ್ಲಿ ನಕಲಿ ಅಯೋಧ್ಯಾ ದೇಗುಲ ನಿರ್ಮಿಸಿ ಭಕ್ತರಿಂದ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved