- Home
- Astrology
- Manusmriti viral: ರಾಮ ಮಂದಿರದ ₹200 ಕೋಟಿ ದೇಣಿಗೆ ಕಳವು ಬಳಿಕ ವೈರಲ್ ಆಯ್ತು ಮನುಸ್ಮೃತಿ! ದೇಣಿಗೆ ಕಳ್ಳರಿಗೆ ಯಾವ ಶಿಕ್ಷೆ ಹೇಳಿದೆ?
Manusmriti viral: ರಾಮ ಮಂದಿರದ ₹200 ಕೋಟಿ ದೇಣಿಗೆ ಕಳವು ಬಳಿಕ ವೈರಲ್ ಆಯ್ತು ಮನುಸ್ಮೃತಿ! ದೇಣಿಗೆ ಕಳ್ಳರಿಗೆ ಯಾವ ಶಿಕ್ಷೆ ಹೇಳಿದೆ?
ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಗರಣದ ಬಳಿಕ ದೇವಾಲಯದ ಆಸ್ತಿ ಕಳವು ಕುರಿತು ಮನುಸ್ಮೃತಿ ಮತ್ತೆ ಚರ್ಚೆಗೆ ಬಂದಿದೆ. ವೈರಲ್ ಆಗಿರುವ 'ಕುದಿಯುವ ಎಣ್ಣೆಯಲ್ಲಿ ಹುರಿಯುವ ಶಿಕ್ಷೆ' ಎಂಬ ದಾವೆಗೆ ಯಾವುದೇ ಆಧಾರವಿಲ್ಲ. ಆದರೆ ದೇವಾಲಯದ ಆಸ್ತಿ ಕಳವು ಮಹಾಪಾಪ ಎಂದು ಮನುಸ್ಮೃತಿ ಹೇಳಿದೆ.

Ayodhya: ಅಯೋಧ್ಯಾ ದೇಣಿಗೆ ಹಣ ಕಳ್ಳತನ ಪ್ರಕರಣ
ಅಯೋಧ್ಯೆ ರಾಮಮಂದಿರದಲ್ಲಿ ದೇಶಾದ್ಯಂತ ಭಕ್ತರು ನೀಡಿದ ನೂರಾರು ಕೋಟಿ ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ಕಳವು ಮಾಡಿದ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಹಣ ಎಣಿಕೆ ಉಸ್ತುವಾರಿ ಹೊಂದಿದ್ದ ಒಟ್ಟು ಆರು ಮಂದಿ ಸಿಬ್ಬಂದಿಯನ್ನ ಬಂದಿಸಿದ್ದು ಒಟ್ಟು ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಆಯೋಧ್ಯಾ ಕಳ್ಳತನ ಎಸ್ಐಟಿ ರಚನೆ
ಈ ಹಿಂದೆ ಅಖಿಲೇಶ್ ಯಾದವ್ ಈ ಬಗ್ಗೆ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿ ಎಸ್ಐಟಿ ರಚಿಸಿದ್ದರು. ತನಿಖೆ ವೇಳೆ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಸುಮಾರು ₹79.85 ಲಕ್ಷ ನಗದು ಹಣ, ವಶಪಡಿಸಿಕೊಳ್ಳಲಾಗಿದೆ.
ದೇಗುಲದಲ್ಲಿ ನಡೆದ ಅಕ್ರಮದ ಸಂಬಂಧ ನೈತಿಕ ಹೊಣೆ ಹೊತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಟ್ರಸ್ಟ್ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ದೇಣಿಗೆ ಕಳ್ಳರಿಗೆ ಮನಸ್ಮೃತಿಯಲ್ಲೇನು ಶಿಕ್ಷೆ?
ಅಯೋಧ್ಯೆ ರಾಮ ಮಂದಿರದ ₹200 ಕೋಟಿ ದೇಣಿಗೆ ಹಗರಣ ದೇಶಾದ್ಯಂತ ಚರ್ಚೆಗೆ ಕಾರಣವಾದ ನಡುವೆಯೇ ಮನುಸ್ಮೃತಿಯಲ್ಲಿ 'ದೇಣಿಗೆ ಕಳ್ಳರಿಗೆ ನೀಡುವ ಶಿಕ್ಷೆ ಮುನ್ನಲೆಗೆ ಬಂದಿದೆ. ಮನುಸ್ಮೃತಿ ಪ್ರಕಾರ ದೇಣಿಗೆ ಕಳ್ಳರನ್ನು ಕುದಿಯುವ ಎಣ್ಣೆಯಲ್ಲಿ ಹುರಿಯುವ ಶಿಕ್ಷೆ ಕೊಡಲಾಗುತ್ತಿತ್ತಂತೆ. ಸಾಮಾಜಿಕ ಮಾಧ್ಯಮದಲ್ಲಿ ಹೀಗೊಂದು ಚರ್ಚೆ ಶುರುವಾಗಿಗದೆ.
ದೇವಾಲಯದ ದೇಣಿಗೆ ಅಥವಾ ಆಸ್ತಿ-ಪಾಸ್ತಿ ಕದಿಯುವ ವ್ಯಕ್ತಿಗಳನ್ನು ಕುದಿಯುವ ಎಣ್ಣೆಯಲ್ಲಿ ಹುರಿಯಬೇಕು ಎಂದು ಮನುಸ್ಮೃತಿಯಲ್ಲಿ ಯಾವುದೇ ನಿಬಂಧನೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಒಂದು ಸುಳ್ಳು ಸುದ್ದಿಯಷ್ಟೇ. ಮನುಸ್ಮೃತಿ ಪ್ರಕಾರ ದೇವಾಲಯದ ಆಸ್ತಿಯ ಕಳ್ಳತನವನ್ನು ಅತ್ಯಂತ ಗಂಭೀರ ಧಾರ್ಮಿಕ ಅಪರಾಧಗಳಲ್ಲೊಂದು ಎಂದು ಪರಿಗಣಿಸುತ್ತದೆ. ಇದಕ್ಕೆ ತೀವ್ರ ಆರ್ಥಿಕ, ಕಾನೂನು ಮತ್ತು ಆಧ್ಯಾತ್ಮಿಕ ಪರಿಣಾಮಗಳನ್ನು ಸೂಚಿಸುತ್ತದೆ.
ದೇವಸ್ಥಾನದಲ್ಲಿ ಕಳ್ತನ ಮಾಡೋದು ಪಾಪದ ಕೆಲಸ
ಮನುಸ್ಮೃತಿಯ ಅಧ್ಯಾಯ 11 ರ ಪ್ರಕಾರ, ದೇವಾಲಯದ ಆಸ್ತಿ, ಕಾಣಿಕೆಗಳು ಅಥವಾ ದೇವರಿಗೆ ಅರ್ಪಿಸಿದ ಬೆಲೆಬಾಳುವ ವಸ್ತುಗಳನ್ನು ಕದಿಯುವುದು ಮಹಾ ಪಾಪ. ಅಂತಹ ಕಳ್ಳತನ ಚಿನ್ನದ ಕಳ್ಳತನಕ್ಕೆ ಸಮಾನ ಎಂದಿದೆ. ದೇವಾಲಯದ ದೇಣಿಗೆಗಳನ್ನು ದೇವರಿಗೆ ಅರ್ಪಿಸಿದ ಪವಿತ್ರ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಹೀಗಾಗಿ ಇದು ಸಾಮಾನ್ಯ ಅಪರಾಧ ಅಲ್ಲ, ಕಳ್ಳತನಕ್ಕಿಂತ ದೊಡ್ಡ ಅಪರಾಧವಾಗಿದೆ.
ಮನುಸ್ಮೃತಿಯಲ್ಲಿ ಕಠಿಣ ಶಿಕ್ಷೆ
ಮನುಸ್ಮೃತಿಯಲ್ಲಿ ದೇಣಿಗೆ ಕಳ್ಳರಿಗೆ ಸಾಧ್ಯವಾದಷ್ಟು ಕಠಿಣ ಶಿಕ್ಷೆ ವಿಧಿಸುತ್ತದೆ. ಅದು ಸಾಮಾನ್ಯ ಜನರಿಗೆ ಕದ್ದ ಆಸ್ತಿಯ ಮೌಲ್ಯಕ್ಕಿಂತ ಹಲವಾರು ಪಟ್ಟು ದಂಡವಾದರೆ, ವ್ಯಾಪಾರಿಗಳಿಗೆ ಇನ್ನು ಕಠಿಣ ಶಿಕ್ಷೆಯೊಂದಿಗೆ ಭಾರೀ ದಂಡ ವಿಧಿಸಲಾಗುತ್ತದೆ. ಆಡಳಿತಗಾರರಿಗಂತೂ ಇನ್ನೂ ಹೆಚ್ಚು ಕಠಿಣವಾಗಿ ಶಿಕ್ಷೆ. ಅದರಲ್ಲೂ ದೇವಾಲಯದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡ ಪುರೋಹಿತರು ಅಥವಾ ಟ್ರಸ್ಟಿಗಳಂತಹ ವಿದ್ವಾಂಸರನ್ನು ಅತ್ಯಂತ ತಪ್ಪಿತಸ್ಥರೆಂದು ಪರಿಗಣಿಸಿ ಅಂತಹ ಸಂದರ್ಭಗಳಲ್ಲಿ, ವಿಧಿಸಲಾದ ದಂಡಗಳು ಕದ್ದ ಆಸ್ತಿಯ ಮೌಲ್ಯಕ್ಕಿಂತ 64 ರಿಂದ 128 ಪಟ್ಟು ಹೆಚ್ಚಾಗಬಹುದು ಎಂದು ತಿಳಿಸುತ್ತದೆ. ಏಕೆಂದರೆ ಅವರು ಇತರರಿಗಿಂತ ಧಾರ್ಮಿಕ ಕರ್ತವ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆಂದು ನಿರೀಕ್ಷಿಸಲಾಗಿತ್ತು.
ದಂಡ ಮತ್ತು ಆಸ್ತಿ ಮುಟ್ಟುಗೋಲು
ಯಾರೇ ಆಗಿರಲಿ ದೇಗುಲದ ಕಾಣಿಕೆ, ಆಸ್ತಿ ಕದ್ದವರಿಗೆ ಕಠಿಣ ಶಿಕ್ಷ ಕಟ್ಟಿಟ್ಟ ಬುತ್ತಿಯಾಗಿತ್ತು. ಇದರಲ್ಲಿ ಕದ್ದ ಆಸ್ತಿಯ ಮೌಲ್ಯಕ್ಕಿಂತ ಹಲವು ಪಟ್ಟು ದಂಡ ವಿಧಿಸುವುದು ಅಥವಾ ತೀವ್ರತರವಾದ ಪ್ರಕರಣಗಳಲ್ಲಿ ಅಪರಾಧಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಮನಸ್ಮೃತಿ ತಿಳಿಸಿದೆ.
ಪವಿತ್ರವಾದ ಧಾರ್ಮಿಕ ಆಸ್ತಿಯನ್ನು ಒಳಗೊಂಡ ಕಳ್ಳತನದ ಪ್ರಕರಣಗಳಲ್ಲಿ ಕಠಿಣ ದೈಹಿಕ ಶಿಕ್ಷೆಯನ್ನು ವಿಧಿಸಲು ಮನುಸ್ಮೃತಿಯು ರಾಜನಿಗೆ ಅಧಿಕಾರ ನೀಡಿತು. ಐತಿಹಾಸಿಕ ವ್ಯಾಖ್ಯಾನಗಳು ಶಿಕ್ಷೆಯು ದೇಹದ ಅಂಗ ಕತ್ತರಿಸುವಿಕೆ ಮತ್ತು ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಮರಣ ದಂಡನೆ ಒಳಪಡಿಸುವ ಬಗ್ಗೆಯೂ ಮನಸ್ಮೃತಿ ಸೂಚಿಸಿದೆ

