Asianet Suvarna News Asianet Suvarna News

ಕೇವಲ ಕಡಲೆಯಲ್ಲ, ಈ ಆಹಾರಗಳನ್ನೂ ನೀರಲ್ಲ ನೆನೆಸಿ ತಿಂದ್ರೆ ಸಿಗುತ್ತೆ ಡಬಲ್ ಬೆನಿಫಿಟ್

ಕೆಲವು ವಸ್ತುಗಳನ್ನು ನೀರಿನಲ್ಲಿ ನೆನೆಸಿದ ನಂತರ ತಿನ್ನುವುದರಿಂದ ಹೆಚ್ಚಿನ ಪೋಷಕಾಂಶವನ್ನು ಪಡೆಯಬಹುದು. ಅಂಥ ಆಹಾರ ಪದಾರ್ಥಗಳು ಯಾವುವು ನೋಡೋಣ.

Double the benefit by soaking these foods in water skr
Author
First Published Jan 2, 2024, 5:03 PM IST

ಸಾಮಾನ್ಯವಾಗಿ ನಾವು ಕಿಡ್ನಿ ಬೀನ್ಸ್, ಕಡಲೆ ಇತ್ಯಾದಿಗಳನ್ನು ನೀರಿನಲ್ಲಿ ನೆನೆಸಿ ಬಳಸುತ್ತೇವೆ. ಕೆಲವರು ಒಣದ್ರಾಕ್ಷಿಯನ್ನು, ಬಾದಾಮಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದು ತಿನ್ನುತ್ತಾರೆ. ಇದರಿಂದ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದೆಂಬುದು ನಿಮಗೆ ಗೊತ್ತಿರಬಹುದು. ಆದರೆ, ಇವುಗಳ ಹೊರತಾಗಿ ಇನ್ನೂ ಹಲವು ಆಹಾರಗಳನ್ನು ನೀರಿನಲ್ಲಿ ನೆನೆಸಿದ ನಂತರ ತಿಂದರೆ ಹೆಚ್ಚಿನ ಪೋಷಕಾಂಶವನ್ನು ನೀಡುತ್ತವೆ. ಅಷ್ಟೇ ಅಲ್ಲ, ಈ ನೆನೆಸಿದ ಆಹಾರಗಳು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ನೀರಿನಲ್ಲಿ ನೆನೆಸಿಟ್ಟರೆ ದ್ವಿಗುಣ ಪ್ರಯೋಜನ ನೀಡುವ ಆಹಾರಗಳು ಯಾವೆಲ್ಲ ನೋಡೋಣ.

ಅಕ್ಕಿ
ಆರ್ಸೆನಿಕ್ ಎಂಬ ರಾಸಾಯನಿಕವು ಅಕ್ಕಿಯಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ನಾವು ಬೇಯಿಸಿದ ಅನ್ನವನ್ನು ನೇರವಾಗಿ ಸೇವಿಸಿದರೆ, ಆರ್ಸೆನಿಕ್ ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ಆದರೆ ಅಕ್ಕಿಯನ್ನು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟರೆ, ಆರ್ಸೆನಿಕ್ ಪ್ರಮಾಣವು ಕಡಿಮೆಯಾಗುತ್ತದೆ.ಅಲ್ಲದೆ, ನೆನೆಸುವುದರಿಂದ, ಅಕ್ಕಿಯಲ್ಲಿರುವ ವಿಟಮಿನ್ಗಳು ಮತ್ತು ಖನಿಜಗಳು ಸಹ ಹೆಚ್ಚು ಸಕ್ರಿಯವಾಗುತ್ತವೆ. ಇವು ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ನೆನೆಸಿದ ಅಕ್ಕಿಯನ್ನು ಬೇಯಿಸಿ ತಿನ್ನುವುದು ನಮ್ಮ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.

400 ಕೋಟಿ ಜನರ ಹೊಟ್ಟೆ ತುಂಬಿಸುತ್ತೆ 12 ಗಿಡ.. ಐದು ಪ್ರಾಣಿ

ಹಣ್ಣುಗಳು ಮತ್ತು ತರಕಾರಿಗಳು
ನಿಮಗೆ ಗೊತ್ತಾ, ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಮೊದಲು, ನಾವು ಅವುಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡಬೇಕು. ಇದು ಅವುಗಳಲ್ಲಿರುವ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುತ್ತದೆ. ಕೆಮಿಕಲ್ ಹಾಕಿ ಬೆಳೆಸಿದ್ದರೆ, ಅವುಗಳನ್ನು ಸಂಪೂರ್ಣ ತೆಗೆಯುತ್ತವೆ. ಇದಲ್ಲದೆ, ಹಣ್ಣುಗಳು ಮತ್ತು ತರಕಾರಿಗಳು ಕೆಲವು ವಿಷಕಾರಿ ವಸ್ತುಗಳು ಮತ್ತು ರಾಸಾಯನಿಕಗಳನ್ನು ಹೊಂದಿರುತ್ತವೆ, ಇದನ್ನು ಥರ್ಮೋಜೆನಿಕ್ ಗುಣಲಕ್ಷಣಗಳು ಎಂದು ಕರೆಯಲಾಗುತ್ತದೆ. ಇವು ನಮ್ಮ ಆರೋಗ್ಯಕ್ಕೆ ಹಾನಿಕರ. ಆದ್ದರಿಂದ ಅವುಗಳನ್ನು ನೆನೆಸಿದ ನಂತರ ತಿನ್ನಬೇಕು. ಇದು ನಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿಡುತ್ತದೆ ಮತ್ತು ನಮ್ಮ ಚರ್ಮವನ್ನು ಸಹ ಆರೋಗ್ಯಕರವಾಗಿಡುತ್ತದೆ.

ಬೇಳೆಕಾಳುಗಳು
ಬೇಳೆಕಾಳುಗಳು ನಮ್ಮ ಆಹಾರದಲ್ಲಿ ಪ್ರೋಟೀನ್‌ನ ಮುಖ್ಯ ಮೂಲವಾಗಿವೆ. ಆದರೆ ಬೇಳೆಕಾಳುಗಳನ್ನು ನೇರವಾಗಿ ಬೇಯಿಸಿದ ನಂತರ ತಿನ್ನುವ ಬದಲು, ಅವುಗಳನ್ನು ನೆನೆಸಿದ ನಂತರ ಬೇಯಿಸಿ ತಿನ್ನುವುದು ಹೆಚ್ಚು ಪೌಷ್ಟಿಕ ಮತ್ತು ಪ್ರಯೋಜನಕಾರಿ. ವಾಸ್ತವವಾಗಿ, ಆಂಟಿನ್ಯೂಟ್ರಿಯೆಂಟ್ಸ್ ಎಂದು ಕರೆಯಲ್ಪಡುವ ಕೆಲವು ಅಂಶಗಳು ಬೇಳೆಕಾಳುಗಳಲ್ಲಿ ಕಂಡುಬರುತ್ತವೆ, ಇದು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಆದರೆ ನಾವು ಬೇಳೆಕಾಳುಗಳನ್ನು ಕನಿಷ್ಠ 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದರೆ, ಈ ಆಂಟಿನ್ಯೂಟ್ರಿಯೆಂಟ್‌ಗಳು ನಾಶವಾಗುತ್ತವೆ.

Follow Us:
Download App:
  • android
  • ios