Asianet Suvarna News Asianet Suvarna News

Jagannath Rath Yatra 2023: ಮೂಳೆಗಳಿಂದ ಮಾಡಲ್ಪಟ್ಟಿವೆಯೇ ಜಗನ್ನಾಥ ದೇವಾಲಯದ ವಿಗ್ರಹಗಳು?

ಈ ವರ್ಷ ಜಗನ್ನಾಥ ಯಾತ್ರೆಯನ್ನು ಜೂನ್ 20ರಂದು ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಜಗನ್ನಾಥ ದೇವಾಲಯದ ರಹಸ್ಯವೊಂದನ್ನು ತಿಳಿಸಲಿದ್ದೇವೆ. ನಿಮಗೆ ಗೊತ್ತಾ ಜಗನ್ನಾಥ ದೇವಾಲಯದ ಎಲ್ಲಾ ವಿಗ್ರಹಗಳು ಮೂಳೆಗಳಿಂದ ಮಾಡಲ್ಪಟ್ಟಿವೆ!

Whose bones are the idols of Jagannath temple made of skr
Author
First Published Jun 11, 2023, 11:56 AM IST

ಈ ವರ್ಷ ಜಗನ್ನಾಥ ರಥಯಾತ್ರೆಯು ಜೂನ್ 20, ಮಂಗಳವಾರದಂದು ಪೂರ್ಣ ಆಚರಣೆಗಳು ಮತ್ತು ವಿಜೃಂಭಣೆಯಿಂದ ಪುರಿಯಲ್ಲಿ ನಡೆಯಲಿದೆ. ನಿಮಗೆ ಗೊತ್ತಾ ಭಗವಾನ್ ಜಗನ್ನಾಥನ ವಿಗ್ರಹ ಹಲವು ವೈಶಿಷ್ಠ್ಯಗಳ ಗೂಡಾಗಿದೆ. ಅದರ ರೂಪ, ಬಣ್ಣ, ಯಾವುದರಿಂದ ಮಾಡಿದೆ ಎಂಬುದೆಲ್ಲವುಗಳಲ್ಲಿಯೂ ವಿಭಿನ್ನತೆ ಇದೆ. 

ಋಗ್ವೇದದಲ್ಲಿ (ಸುಮಾರು 2500 BC) ಸಮುದ್ರ ತೀರದ ಬಳಿ 'ಮರದ ದೇವತೆ'ಯ ಆರಾಧನೆಯ ಬಗ್ಗೆ ಉಲ್ಲೇಖಿಸಲಾಗಿದೆ: "ಅದೋ ಯತ್ ದರು ಪ್ಲಾವತೇ ಸಿಂಧೋಃಪರೇ ಅಪುರುಷಮ್" ಅಂದರೆ 'ಸಮುದ್ರದಿಂದ ತೊಳೆಯಲ್ಪಟ್ಟ ಮರದ ದಿಮ್ಮಿ ಚಯಾಪಚಯ ಕ್ರಿಯೆಯ ವ್ಯಾಪ್ತಿಯನ್ನು ಮೀರಿದೆ'. ಆರಂಭದಲ್ಲಿ ಪರಮೇಶ್ವರನನ್ನು ಬಳಸಲಾಯಿತು. ನಂತರ ಅದನ್ನು ಪುರುಷೋತ್ತಮ ಮತ್ತು ಜಗನ್ನಾಥ ಎಂದು ಬದಲಾಯಿಸಲಾಯಿತು. ಹೀಗಾಗಿ ಪುರಿಯ ಜಗನ್ನಾಥನನ್ನು ವೇದಗಳಿಗಿಂತಲೂ ಪುರಾತನವಾದ ದೇವತೆ ಎಂದು ಕೆಲವರು ಹೇಳುತ್ತಾರೆ.

ಬೇವಿನ ಮರದ ವಿಗ್ರಹಗಳು
ಸಾಮಾನ್ಯವಾಗಿ ದೇವತೆಗಳ ವಿಗ್ರಹವನ್ನು ಶಿಲೆ, ಹಿತ್ತಾಳೆ, ಬಂಗಾರ, ಬೆಳ್ಳಿಯಿಂದ ಮಾಡಲಾಗುತ್ತದೆ. ಇವುಗಳ ಬಾಳಿಕೆಯೂ ಅಧಿಕ. ಆದರೆ, ಪುರಿಯಲ್ಲಿರುವ ಜಗನ್ನಾಥ ದೇವಾಲಯದ ಮುಖ್ಯ ದೇವತೆಗಳೆಲ್ಲವೂ 'ಬೇವಿನ ಮರ'ದಿಂದ ಮಾಡಲ್ಪಟ್ಟಿವೆ. ದೇವತೆಗಳ ಎತ್ತರವು 2.5 ರಿಂದ 3 ಮೀಟರ್‌ಗಳ ನಡುವೆ ಇರುತ್ತದೆ. ದೇವತೆಗಳನ್ನು ಸ್ಪರ್ಶಿಸಿದಾಗ ಮರದ ಗಡಸುತನದ ಬದಲಿಗೆ ಮೃದುವಾದ ಭಾವನೆಯನ್ನು ನೀಡುತ್ತದೆ. ಇದು ಮರದ ದೇಹದ ಮೇಲೆ ಸುತ್ತುವ ಶುದ್ಧ ರೇಷ್ಮೆಯ ಪದರಗಳ ಕಾರಣದಿಂದಾಗಿರುತ್ತದೆ.

Weekly Horoscope: ಈ ರಾಶಿಗೆ ವೃತ್ತಿ, ವೈವಾಹಿಕ ಜೀವನದಲ್ಲಿ ವಿಪರೀತ ಒತ್ತಡ

ಮರದೊಳಗೆ ಮೂಳೆಗಳಿವೆಯೇ?
ಧಾರ್ಮಿಕ ಗ್ರಂಥಗಳ ಪ್ರಕಾರ, ಒಮ್ಮೆ ಭಾರತದ ಪೂರ್ವ ಭಾಗದಲ್ಲಿ ಆಳುತ್ತಿದ್ದ ರಾಜ ಇಂದ್ರದ್ವಿಮುನನಿಗೆ ಶ್ರೀಕೃಷ್ಣನ ಕನಸು ಬಿತ್ತು. ಕನಸಿನಲ್ಲಿ ಶ್ರೀ ಕೃಷ್ಣನು ತನ್ನ ದೇಹವನ್ನು ತೊರೆದು ತನ್ನ ನಿವಾಸವಾದ ಗೋಲೋಕಕ್ಕೆ ಹಿಂದಿರುಗಿದುದನ್ನು ಅವನು ನೋಡಿದನು. ಶ್ರೀ ಕೃಷ್ಣನ ದೇಹವು ದ್ವಾರಕಾ ಸಮುದ್ರದಲ್ಲಿ ತೇಲುತ್ತಿತ್ತು. ರಾಜನು ತನ್ನ ಕನಸಿನಲ್ಲಿ ಬಲರಾಮ ಮತ್ತು ಸುಭದ್ರರನ್ನು ಕಂಡನು. ಅವರಿಬ್ಬರೂ ಕೃಷ್ಣನಿಂದ ಬೇರ್ಪಟ್ಟು ತಮ್ಮ ಪ್ರಾಣವನ್ನು ತ್ಯಜಿಸಿರುವುದನ್ನು ರಾಜನು ನೋಡಿದನು. ಅವರ ಮೃತ ದೇಹಗಳೂ ಸಮುದ್ರದ ಆಳ ಸೇರಿದ್ದವು. ಅದೇ ಸಮಯದಲ್ಲಿ, ಶ್ರೀ ಕೃಷ್ಣನು ವಿಗ್ರಹಗಳನ್ನು ತಯಾರಿಸಿ ಪ್ರತಿಷ್ಠಾಪಿಸಲು ರಾಜನಿಗೆ ಆದೇಶ ನೀಡಿದ್ದನ್ನೂ ರಾಜನು ನೋಡಿದನು. ಎದ್ದ ನಂತರ ರಾಜನು ಸಮುದ್ರ ತೀರದ ಬಳಿಗೆ ಬರುವಷ್ಟರಲ್ಲಿ ಮೂರೂ ದೇಹಗಳು ಮೂಳೆಗಳಾಗಿ ಮಾರ್ಪಟ್ಟಿದ್ದವು. ನಂತರ ರಾಜನು ಆ ಮೂಳೆಗಳ ಮೂಲಕ ಜಗನ್ನಾಥ ದೇವಾಲಯದ ಎಲ್ಲಾ ಮೂರು ವಿಗ್ರಹಗಳನ್ನು ನಿರ್ಮಿಸಿದನು. ಸದ್ಯ ದೇವಾಲಯದ ವಿಗ್ರಹಗಳನ್ನು ಬೇವಿನ ಮರದಂದ ನಿರ್ಮಿಸಲಾಗುತ್ತದೆ ಎಂದರೂ ಅದರೊಳಗೆ ಶ್ರೀ ಕೃಷ್ಣ, ಬಲರಾಮ ಮತ್ತು ಸುಭದ್ರೆಯ ಮೂಳೆಗಳಿವೆ ಎಂಬ ನಂಬಿಕೆ ಇದೆ. ಅಷ್ಟೇ ಏಕೆ, ಜಗನ್ನಾಥನ ಹೃದಯ ಮಿಡಿಯುತ್ತಲೇ ಇರುತ್ತದೆ ಎಂದೂ ನಂಬಲಾಗಿದೆ. 

ದೇವತೆಗಳ ಬಣ್ಣ, ದೇಹದ ವೈಶಿಷ್ಟ್ಯ
ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯ ಬಣ್ಣಗಳು ಕ್ರಮವಾಗಿ ಕಪ್ಪು, ಕೆನೆ ಮತ್ತು ಹಳದಿ. ಸಾಮಾಜಿಕ ಮಾನವಶಾಸ್ತ್ರಜ್ಞರು ಈ ಬಣ್ಣಗಳನ್ನು ಮಾನವಕುಲದ ಮೂರು ಜನಾಂಗಗಳನ್ನು ಪ್ರತಿನಿಧಿಸಲು ವ್ಯಾಖ್ಯಾನಿಸುತ್ತಾರೆ. ನೀಗ್ರೋಯಿಡ್ಸ್, ಯುರೋಪಿಯನ್ನರು ಮತ್ತು ಮಂಗೋಲಾಯ್ಡ್ಸ್. ಭೌತಶಾಸ್ತ್ರದ ಪ್ರಾಯೋಗಿಕ ಭಾಷೆಯಲ್ಲಿ ಕಪ್ಪು ಬಣ್ಣವು ವಿಕಿರಣವನ್ನು ಹೀರಿಕೊಳ್ಳುವ ಅತ್ಯುತ್ತಮ ವಸ್ತುವಾಗಿದೆ, ಬಿಳಿ ಉತ್ತಮ ಪ್ರತಿಫಲಕವಾಗಿದೆ ಮತ್ತು ಹಳದಿ ಬಣ್ಣವು ಕಲಬೆರಕೆಯಿಲ್ಲದ ಪ್ರಾಥಮಿಕ ಬಣ್ಣವಾಗಿದೆ. ಆದಾಗ್ಯೂ, ಈ ವಿಗ್ರಹಗಳ ರೂಪ ಕಿವಿಯಿಲ್ಲದ, ಕಾಲಿಲ್ಲದ, ಬುಡಕಟ್ಟು ರೂಪದ ದೊಡ್ಡ ತಲೆಗಳಂತಿರುತ್ತದೆ.  ಇದು ಏಕೆಂದು ಯಾರಿಗೂ ತಿಳಿದಿಲ್ಲ! ಜಗನ್ನಾಥನ ಕಣ್ಣುಗಳು ವೃತ್ತಗಳಾಗಿದ್ದರೆ, ಸುಭದ್ರ ಮತ್ತು ಬಲಭದ್ರರ ಕಣ್ಣುಗಳು ಅಂಡಾಕಾರವಾಗಿರುತ್ತವೆ. ಬಲಭದ್ರನ ತಲೆಯು ಅರ್ಧವೃತ್ತಾಕಾರದಿಂದ ಕೂಡಿದೆ.

ಜೀವನದಲ್ಲೊಮ್ಮೆ ಸವಿಯಲೇಬೇಕು ಪುರಿ ಜಗನ್ನಾಥನ 56 ಬಗೆಯ ಮಹಾಪ್ರಸಾದ

ಉಡುಪುಗಳ ಕಟ್ಟುಪಾಡು
ಮೂರು ದೇವತೆಗಳು ವಸ್ತ್ರ ಶೃಂಗಾರ್ (ಉಡುಪು ಕಟ್ಟುಪಾಡು) ಅನ್ನು ಸಹ ಹೊಂದಿದ್ದಾರೆ. ಜಗನ್ನಾಥನು ನಿಗದಿತ ಬಣ್ಣಗಳ ಬಟ್ಟೆಗಳನ್ನು ಧರಿಸಿದ್ದಾನೆ. ಭಾನುವಾರ (ಕೆಂಪು), ಸೋಮವಾರ (ಕಪ್ಪು ಗಡಿಯೊಂದಿಗೆ ಬಿಳಿ), ಮಂಗಳವಾರ (ಐದು ಬಗೆಯ ಬಣ್ಣಗಳು), ಬುಧವಾರ (ನೀಲಿ), ಗುರುವಾರ (ಹಳದಿ), ಶುಕ್ರವಾರ (ಬಿಳಿ), ಶನಿವಾರ (ಕಪ್ಪು) ಚಂದ್ರನ ಚಕ್ರದ ಪ್ರಕಾರ ದೇವತೆಗಳನ್ನು ವಿಭಿನ್ನವಾಗಿ ಅಲಂಕರಿಸಲಾಗುತ್ತದೆ. 
ವಿವಿಧ ಪಂಥಗಳು ಮತ್ತು ಚಿಂತನೆಯ ಶಾಲೆಗಳಿಂದ ದೇವತೆಗಳಿಗೆ ವಿಭಿನ್ನ ಅರ್ಥಗಳನ್ನು ಆರೋಪಿಸಲಾಗಿದೆ, ಇವುಗಳನ್ನು ಸಮಗ್ರವಲ್ಲದ ರೀತಿಯಲ್ಲಿ ಮಾತ್ರ ವರ್ಗೀಕರಿಸಬಹುದು:
 

Follow Us:
Download App:
  • android
  • ios