ಯಾವ ಗ್ರಹದಿಂದ ಯಾವ ಕಾಯಿಲೆ, ಯಾವ ಗ್ರಹಕ್ಕೆ ಯಾವ ಶಾಂತಿಮಂತ್ರ?
ಕೆಲವೊಮ್ಮೆ ಗ್ರಹಗಳು ನಮ್ಮ ಮೇಲೆ ಮುನಿಸಿಕೊಂಡಾಗ ನಮಗೆ ಕಾಯಿಲೆ ಕಸಾಲೆ ಅನಾರೋಗ್ಯಗಳು ಕಾಡುತ್ತವೆ. ಅದು ಯಾವ ಗ್ರಹದ ದುಷ್ಪ್ರಭಾವ ಅಂತ ತಿಳಿದುಕೊಂಡು, ಆ ಗ್ರಹವನ್ನು ಶಾಂತಿಮಂತ್ರದ ಮೂಲಕ ಒಲಿಸಿಕೊಂಡರೆ ನೀವು ಸುಖಿಯಾಗಿ, ಯಾವುದೇ ಅನಾರೋಗ್ಯ ಇಲ್ಲದೆ ಇರಬಹುದು.
ಗ್ರಹಗಳು ನಮ್ಮ ಆರೋಗ್ಯದ ಉನ್ನತಿಗೂ ಕೆಡುಕಿಗೂ ಮೂಲ. ಗ್ರಹಗಳಿಂದಲೇ ನಮಗೆ ಹಲವು ಅನಾರೋಗ್ಯ ಬಾಧೆಗಳು ಕಾಡುತ್ತವೆ. ಯಾವ ಗ್ರಹ ಯಾವ ಕಾಯಿಲೆ ಉಂಟುಮಾಡುತ್ತದೆ ಹಾಗೂ ಆ ಗ್ರಹಕ್ಕೆ ಶಾಂತಿಮಂತ್ರ ಯಾವುದು ಅಂತ ತಿಳಿದುಕೊಳ್ಳಿ. ನಿಮಗೆ ಬರುವ ಕಾಯಿಲೆಯನ್ನನುಸರಿಸಿ ಈ ಶಾಂತಿಮಂತ್ರಗಳನ್ನು ಪಠಿಸಿದರೆ ಆರೋಗ್ಯ ಉಂಟಾಗುತ್ತದೆ. ಅದಲ್ಲದೆಯೂ ದಿನನಿತ್ಯ ನವಗ್ರಹ ಮಂತ್ರವನ್ನು ಪಠಿಸುವುದು ಒಳ್ಳೆಯದು.
ಸೂರ್ಯ
ಪಿತ್ತದಿಂದ ತೊಂದರೆ, ಜ್ವರ, ಫಿಟ್ಸ್, ಮೂಳೆಗೆ ಸಂಬಂಧಿಸಿದ ತೊಂದರೆಗಳು. ಹೃದಯ ಹಾಗೂ ಹೊಟ್ಟೆಗೆ ಸಂಬಂಧಿಸಿದ ತೊಂದರೆ, ಕಾಮಾಲೆ, ಚರ್ಮದ ತೊಂದರೆ.
ಮಂತ್ರ:
ಗ್ರಹಾಣಾಮರಾದಿತ್ಯೋ ಲೋಕರಕ್ಷಣಕಾರಕಃ |
ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ ||
ಚಂದ್ರ
ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ, ವಾಂತಿ, ಭೇದಿ, ಮನೋರೋಗ, ಅಜೀರ್ಣ, ವಾಂತಿ, ಉದರಕ್ಕೆ ಸಂಬಂಧಿಸಿದ ತೊಂದರೆ, ಪಿತ್ತಕ್ಕೆ ಸಂಬಂಧಿಸಿದ ತೊಂದರೆ, ತಲೆಸುತ್ತು, ದೃಷ್ಟಿಯ ತೊಂದರೆ.
ಮಂತ್ರ:
ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ |
ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ ||
ಈ ನಾಲ್ಕು ರಾಶಿಯವರಿಗಿರುತ್ತೆ ಮಹಾಲಕ್ಷ್ಮಿಯ ಕೃಪೆ: ನಿಮ್ಮ ರಾಶಿನೂ ಇದೆಯಾ..? ...
ಕುಜ
ರಕ್ತದ ಒತ್ತಡ, ರಕ್ತಕ್ಕೆ ಸಂಬಂಧಿಸಿದ ತೊಂದರೆ, ದಣಿವು, ಬಾಯಿ ಒಣಗುವುದು, ಕುಷ್ಠ, ನರಗಳ ತೊಂದರೆ, ಅಪಸ್ಮಾರ, ಚರ್ಮ ತೊಂದರೆ, ಪಿತ್ತ.
ಮಂತ್ರ:
ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ |
ವೃಷ್ಟಿಕೃತ್-ದೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ ||
ಬುಧ
ಕಣ್ಣು, ಮೂಗು, ಗಂಟಲು, ವಾತ, ಕಜ್ಜಿ, ತೊನ್ನು, ಪಾರ್ಶ್ವವಾಯು, ಚರ್ಮರೋಗ, ಬುದ್ಧಿವಿಕಲ್ಪ, ತುರಿಕೆ, ಮೂಳೆಗೆ ಸಂಬಂಧಿಸಿದ ತೊಂದರೆ.
ಮಂತ್ರ:
ಉತ್ಪಾತರೂಪೋ ಜಗತಶ್ಚಂದ್ರಪುತ್ರೋ ಮಹಾದ್ಯುತಿಃ |
ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ ||
ಗುರು
ಚರ್ಮರೋಗ, ಹೊಟ್ಟೆಯ ತೊಂದರೆ, ಸಕ್ಕರೆ ಕಾಯಿಲೆ, ನೆನಪಿನ ಶಕ್ತಿ ಕಡಿಮೆ, ಜ್ವರ, ಕಿವಿಯ ತೊಂದರೆ, ಮೂಲವ್ಯಾಧಿ, ಕೀವಿನಿಂದ ಹುಣ್ಣು, ಕುರು, ಶ್ವಾಸಕೋಶದ ತೊಂದರೆ.
ಮಂತ್ರ:
ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ |
ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ ||
ಶುಕ್ರ
ಗುಹ್ಯೇಂದ್ರಿಯ ಕಾಯಿಲೆಗಳು, ಸಕ್ಕರೆ ಕಾಯಿಲೆ, ಕಣ್ಣಿನ ತೊಂದರೆ, ಮೂತ್ರದ ಕಾಯಿಲೆ, ನಿಶಕ್ತಿ, ಹಲ್ಲುನೋವು.
ಮಂತ್ರ:
ದೈತ್ಯಮಂತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ |
ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ ||
ಶನಿ
ಉದರ ಕೈಕಾಲು, ಪಾದ, ನರಗಳಿಂದ ತೊಂದರೆ, ಅಸ್ತಮ, ಪಾರ್ಶ್ವವಾಯು, ಮೂರ್ಛೆರೋಗ, ಕೆಮ್ಮು.
ಮಂತ್ರ:
ಸೂರ್ಯಪುತ್ರೋ ದೀರ್ಘ ದೇಹೋ ವಿಶಾಲಾಕ್ಷಃ ಶಿವಪ್ರಿಯಃ |
ಮಂದಚಾರಃ (ದೀರ್ಘಚಾರಃ) ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ ||
ಗೋವಿನಲ್ಲೇಕೆ ಮೂವತ್ತಮೂರು ಕೋಟಿ ದೇವತೆಗಳು? ...
ರಾಹು
ತೊನ್ನು, ಚರ್ಮದ ಕಾಯಿಲೆ, ಕ್ಯಾನ್ಸರ್, ಕುಷ್ಠ, ಸಿಡುಬು, ಜ್ವರ, ಕೈಕಾಲು ನೋವು.
ಮಂತ್ರ:
ಮಹಾಶಿರಾ (ಮಹಾಶೀರ್ಷೋ) ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ |
ಅತನುಶ್ಚೋರ್ಧ್ವ-ಕೇಶಶ್ಚ ಪೀಡಾಂ ಹರತು ಮೇ ತಮಃ ||
ಕೇತು
ಮಾನಸಿಕ ತೊಂದರೆ, ಉದರ ತೊಂದರೆ, ವೃಣ, ಸುಟ್ಟಗಾಯಗಳಿಂದ ತೊಂದರೆ, ಉರಿಮೂತ್ರ, ವಾತ, ತೊಂದರೆ, ಬೆನ್ನಿಗೆ ಸಂಬಂಧಿಸಿದ ತೊಂದರೆ.
ಮಂತ್ರ: ಅನೇಕರೂಪವರ್ಣೈಶ್ಚ ಶತಶೋಥ ಸಹಸ್ರಶಃ |
ಉತ್ಪಾತರೂಪೋ ಜಗತಃ ಪೀಡಾಂ ಹರತು ಮೇ ಶಿಖೀ
ನಿಮ್ಮ ರಾಶಿಗೆ ಗುರು ಬಲ ಇದೆಯಾ? ಇಲ್ಲದಿದ್ದರೆ ಗುರು ಬಲ ಸಂಪಾದನೆ ಹೇಗೆ? ...