Asianet Suvarna News Asianet Suvarna News

ಶ್ರಾವಣದಲ್ಲಿ ಶಿವನ ಪೂಜಿಸಿದರೆ ಕೂಡಿ ಬರಲಿದೆ ಕಲ್ಯಾಣ ಭಾಗ್ಯ..!

ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ದೂರಾಗಲಿವೆ. ಮುಖ್ಯವಾಗಿ ಪ್ರೇಮ ವಿವಾಹದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ, ಅಂತವರು ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವ ಜೊತೆಗೆ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಅವರಿಗೆ ಮದುವೆಗೆ ಇದ್ದ ಅಡೆತಡೆಗಳೂ ದೂರವಾಗುವುದಲ್ಲದೇ ಮದುವೆಯ ಸಾಧ್ಯತೆಯೂ ಬೇಗನೇ ಉಂಟಾಗುತ್ತದೆ.

sawan 2023 love marriage remedies suh
Author
First Published Jul 26, 2023, 12:49 PM IST | Last Updated Jul 26, 2023, 12:49 PM IST

ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ದೂರಾಗಲಿವೆ. ಮುಖ್ಯವಾಗಿ ಪ್ರೇಮ ವಿವಾಹದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ, ಅಂತವರು ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವ ಜೊತೆಗೆ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಅವರಿಗೆ ಮದುವೆಗೆ ಇದ್ದ ಅಡೆತಡೆಗಳೂ ದೂರವಾಗುವುದಲ್ಲದೇ ಮದುವೆಯ ಸಾಧ್ಯತೆಯೂ ಬೇಗನೇ ಉಂಟಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ಶ್ರಾವಣ ಮಾಸವು ಮಹಾದೇವನಿಗೆ ಸಮರ್ಪಿತವಾಗಿದೆ. ಶ್ರಾವಣದಲ್ಲಿ ಮಹಾದೇವನನ್ನು ಪೂಜಿಸುವುದರಿಂದ ಆತನ ವಿಶೇಷ ಅನುಗ್ರಹ ಮತ್ತು ಆಶೀರ್ವಾದ ದೊರೆಯುತ್ತದೆ. ಶ್ರಾವಣ ಮಾಸದ ಸೋಮವಾರದಂದು ಭಗವಾನ್ ಶಂಕರನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನದಂದು ಭಗವಾನ್ ಶಂಕರನನ್ನು ಪೂಜಿಸುವ ವಿಶೇಷ ಪ್ರಾಮುಖ್ಯತೆಯನ್ನು ಸಹ ಉಲ್ಲೇಖಿಸಲಾಗಿದೆ. ಶಿವನನ್ನು ಆರಾಧಿಸುವುದರಿಂದ ಪ್ರತಿಯೊಂದು ಆಸೆಯೂ ಶೀಘ್ರವಾಗಿ ಈಡೇರುತ್ತದೆ. ಒಬ್ಬ ಭಕ್ತನು ಭಗವಾನ್ ಶಂಕರನ ವಿಶೇಷ ಅನುಗ್ರಹವನ್ನು ಬಯಸಿದರೆ, ಅವನನ್ನು ಸರಿಯಾಗಿ ಪೂಜಿಸಬೇಕು. ಶ್ರಾವಣ ಮಾಸದ ಸೋಮವಾರ ಅಥವಾ ಇನ್ನಾವುದೇ ದಿನದಂದು ಭಗವಾನ್ ಶಂಕರನನ್ನು ಪೂಜಿಸುವುದರಿಂದ ವಿಶೇಷ ಫಲ ದೊರೆಯುತ್ತದೆ. 

ಸೂಕ್ತ ಪತಿಗಾಗಿ ಶಂಕರನ ಪೂಜೆ

ಅವಿವಾಹಿತ ಹುಡುಗಿಯರು ಸೂಕ್ತ ಪತಿಯನ್ನು ಪಡೆಯಲು ಶಂಕರನನ್ನು ಪೂಜಿಸುತ್ತಾರೆ ಆದರೆ ವಿವಾಹಿತ ಮಹಿಳೆಯರು ವೈವಾಹಿಕ ಸಂತೋಷ ಮತ್ತು ಸಂತಾನಕ್ಕಾಗಿ ಶಂಕರನನ್ನು ಪೂಜಿಸುತ್ತಾರೆ. ಅನೇಕ ಹೆಣ್ಣುಮಕ್ಕಳು ಶ್ರಾವಣ ಸೋಮವಾರದಿಂದ ಹದಿನಾರು ಸೋಮವಾರಗಳವರೆಗೆ ಉಪವಾಸವಿದ್ದು, ಸೂಕ್ತ ಗಂಡನನ್ನು ಹುಡುಕುತ್ತಾರೆ. ಹದಿನಾರು ಸೋಮವಾರಗಳ ಉಪವಾಸವು ಹೆಣ್ಣುಮಕ್ಕಳಿಗೆ ಉತ್ತಮ ವರನನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಶಿವನ ಆರಾಧನೆಯು ಜೀವನದಲ್ಲಿ ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ.
 
ಶ್ರಾವಣ ಸೋಮವಾರದಂದು ಪೂರ್ಣ ಭಕ್ತಿಯಿಂದ ಶಿವನನ್ನು ಪೂಜಿಸಿದರೆ, ಶಿವನು ಆ ಭಕ್ತನಿಗೆ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಪ್ರೇಮ ವಿವಾಹದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ ಅವರು ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವ ಜೊತೆಗೆ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು, ಶಿವನು ಬಯಸಿದ ವರನನ್ನು ಪಡೆಯಲು ಆಶೀರ್ವದಿಸುತ್ತಾನೆ.

ಮಂಗಳ ಸಂಕ್ರಮಣ; ಈ ಐದು ರಾಶಿಯವರಿಗೆ ಜೇಬು ತುಂಬ ಹಣ..!

 

ಶ್ರಾವಣ ಸೋಮವಾರದಂದು ಈ ಪರಿಹಾರವನ್ನು ಮಾಡಿ

ಮದುವೆ ತಡವಾದರೆ ಮಣ್ಣಿನಿಂದ 108 ಭೂ ಶಿವಲಿಂಗಗಳನ್ನು ಮಾಡಿಸಿ. ಲವಂಗ ಮತ್ತು ಏಲಕ್ಕಿಯನ್ನು ವೀಳ್ಯದೆಲೆಯ ಮೇಲೆ ಇಟ್ಟು ಶಂಕರನಿಗೆ ಅರ್ಪಿಸಬೇಕು. ಈ ಪಠಣದ ನಂತರ ಓಂ ಗೌರೀ ಶಂಕರಾಯ ನಮಃ, ಓಂ ಪಾರ್ವತೀಪತ್ಯೇ ನಮಃ. ಈ ಪೂಜೆಯ ನಂತರ, ಶಿವಲಿಂಗವನ್ನು ಮರುದಿನ ನದಿಯಲ್ಲಿ ಮುಳುಗಿಸಬೇಕು. ಈ ಪರಿಹಾರವು ಬಯಸಿದ ಜೀವನ ಸಂಗಾತಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಪ್ರೇಮ ವಿವಾಹಕ್ಕೆ ಪರಿಹಾರ

ಯಾವುದೇ ಯುವಕ ಅಥವಾ ಯುವತಿಯರು ಪ್ರೇಮ ವಿವಾಹದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ, ಶಿವ ಮತ್ತು ತಾಯಿ ಪಾರ್ವತಿಯ ಪೂಜೆಯನ್ನು ಪ್ರದೋಷ ಕಾಲದಲ್ಲಿ ಮಾಡಬೇಕು. ಈ ಪೂಜೆಯಲ್ಲಿ ಎಲ್ಲಾ 16 ಆಭರಣಗಳನ್ನು ಪಾರ್ವತಿ ದೇವಿಗೆ ಅರ್ಪಿಸಬೇಕು. ಶಿವ-ಪಾರ್ವತಿಯ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತುಕೊಂಡು 'ಓಂ ಶ್ರೀ ವರ ಪ್ರದಾಯ ಶ್ರೀ ನಮಃ' ಎಂಬ ಮಂತ್ರವನ್ನು ಪಠಿಸಿ. ಇದರ ನಂತರ ವೀಳ್ಯದೆಲೆಯೊಂದಿಗೆ ಸಿಂಧೂರವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಪ್ರೇಮ ವಿವಾಹದಲ್ಲಿನ ಸಮಸ್ಯೆಗಳು ದೂರವಾಗುತ್ತವೆ.

ಅಕ್ಟೋಬರ್‌ವರೆಗೆ 6 ರಾಶಿಯವರಿಗೆ ರಾಹುವಿನ ವಕ್ರ ದೃಷ್ಟಿ; ಪ್ರತಿ ಹೆಜ್ಜೆಯಲ್ಲೂ ಸವಾಲು..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios