Asianet Suvarna News Asianet Suvarna News

Astrology Tips : ಮನೆಯ ಅಂದ ಹೆಚ್ಚಿಸುವ ಗುಲಾಬಿಯಲ್ಲಿದೆ ಅದೃಷ್ಟ ಬದಲಿಸುವ ಶಕ್ತಿ

ಹೂಗಳಲ್ಲಿ ಅತ್ಯಂತ ಆಕರ್ಷಕ ಹಾಗೂ ಸುಂದರ ಹೂ ಗುಲಾಬಿ. ಒಂದೇ ಕ್ಷಣದಲ್ಲಿ ಎಲ್ಲರ ಗಮನ ಸೆಳೆಯಬಲ್ಲ ಈ ಗುಲಾಬಿ ಹೂವಿನಲ್ಲಿ ಅಪಾರ ಶಕ್ತಿ ಅಡಗಿದೆ. ಸುಖ, ಶಾಂತಿಯ ಜೊತೆಗೆ ರೋಗ ಗುಣಪಡಿಸುವ ಶಕ್ತಿ ಇದಕ್ಕಿದೆ.
 

Rose Flower Can Change Your Luck If You Use These Tricks
Author
Bangalore, First Published Feb 14, 2022, 12:11 PM IST

ಗುಲಾಬಿ (Rose) ಹೂ ಬಹುತೇಕ ಎಲ್ಲರಿಗೂ ಇಷ್ಟ. ಚಂದದ ಗುಲಾಬಿ ಹೂ ಮನಸ್ಸಿಗೆ ಮುದ ನೀಡುತ್ತದೆ. ಅದರ ಸುವಾಸನೆ ಎಲ್ಲರನ್ನು ಆಕರ್ಷಿಸುತ್ತದೆ. ಪ್ರೀತಿ (Love)ಯ ಸಂಕೇತವಾಗಿರುವ ಈ ಹೂಗಳಿಂದ ಮನೆ (Home)ಗಳನ್ನು ಅಲಂಕರಿಸಲು ಜನರು ಇಷ್ಟಪಡುತ್ತಾರೆ. ಇದು ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ವಿಶೇಷ ಸಮಾರಂಭಗಳಲ್ಲಿಯೂ ಗುಲಾಬಿ ಹೂವಿಗೆ ವಿಶೇಷ ಆದ್ಯತೆ. ಬಣ್ಣ ಬಣ್ಣದ ಗುಲಾಬಿ ಹೂಗಳನ್ನು ನಾವು ನೋಡಬಹುದು. ಆದ್ರೆ ಎಲ್ಲ ಬಣ್ಣಕ್ಕಿಂತ ಕೆಂಪು ಬಣ್ಣದ ಗುಲಾಬಿ ಹೂವಿಗೆ ಹೆಚ್ಚಿನ ಮಹತ್ವವಿದೆ ಎಂದ್ರೆ ತಪ್ಪಾಗಲಾರದು. ದೇವರ (God)ಪೂಜೆಗೂ ಗುಲಾಬಿ ಹೂಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.  ಮತ್ತೊಂದೆಡೆ, ವಾಸ್ತು ಶಾಸ್ತ್ರದಲ್ಲಿಯೂ ಗುಲಾಬಿಗಳಿಗೆ ಮಹತ್ವವಿದೆ. ಗುಲಾಬಿಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ನಾವಿಂದು ಗುಲಾಬಿ ಹೂವಿಗೂ ವಾಸ್ತುವಿಗೂ ಇರುವ ನಂಟನ್ನು ಹೇಳ್ತೇವೆ.

ಆಸೆ ಈಡೇರಿಕೆಗಾಗಿ : ನಿಮ್ಮ ಆಸೆ, ಕನಸುಗಳನ್ನು ಈಡೇರಿಸಿಕೊಳ್ಳಲು ಬಯಸಿದರೆ ಯಾವುದೇ ತಿಂಗಳ ಶುಕ್ಲ ಪಕ್ಷದ ಮೊದಲ ಮಂಗಳವಾರದಂದು, ಹನುಮಂತನಿಗೆ 11 ತಾಜಾ ಗುಲಾಬಿ ಹೂವುಗಳನ್ನು ಅರ್ಪಿಸಿ. ಸತತ 11 ಮಂಗಳವಾರಗಳ ಕಾಲ ಹನುಮಂತನಿಗೆ ಗುಲಾಬಿ ಹೂಗಳನ್ನು ಅರ್ಪಿಸುತ್ತ ಬಂದರೆ ನಿಮ್ಮ ಆಸೆ ಈಡೇರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ,  ಹನುಮಂತ ನೀವು ಮಾಡುವ ಈ ಕೆಲಸದಿಂದ ಸಂತಸಗೊಂಡು ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. 

PERSONALITY TRAITS: ಈ ರಾಶಿಯವರನ್ನು ಅರ್ಥ ಮಾಡ್ಕೊಳೋದು ಕಷ್ಟ ಕಷ್ಟ

ಮನೆಯ ಸಂತೋಷ,ಸಮೃದ್ಧಿ : ಮನೆಯಲ್ಲಿ ಸಂತೋಷ,ಸಮೃದ್ಧಿಯಿದ್ದರೆ ಜೀವನದಲ್ಲಿ ನೆಮ್ಮದಿ ಕಾಣಬಹುದು. ಸದಾ ಮನೆಯಲ್ಲಿ ಖುಷಿ ತುಂಬಿರಲಿ ಎಂದು ಎಲ್ಲರೂ ಬಯಸುತ್ತಾರೆ. ನೀವೂ ಆರ್ಥಿಕ ವೃದ್ಧಿ,ಸಂತೋಷ ಬಯಸುವವರಾಗಿದ್ದರೆ ಮಂಗಳವಾರ ಕೆಂಪು ಬಟ್ಟೆಯಲ್ಲಿ ಕೆಂಪು ಗುಲಾಬಿ, ಕೆಂಪು ಚಂದನವನ್ನು ಕಟ್ಟಿ ಹನುಮಂತ ದೇವಸ್ಥಾನಕ್ಕೆ ಒಂದು ವಾರ ಇಡಿ.  ನಂತರ ಅದನ್ನು ತೆಗೆದುಕೊಂಡು ಬಂದು ನಿಮ್ಮ ಮನೆ ಅಥವಾ ಕೆಲಸದ ಸ್ಥಳದ ಸುರಕ್ಷಿತವಾಗಿಡಿ. ಬೀರು ಅಥವಾ ಹಣ ಇಡುವು ಜಾಗದಲ್ಲಿ ಇರಿಸಿ. ಹೀಗೆ ಮಾಡಿದಲ್ಲಿ ಹಣದ ಸಮಸ್ಯೆ ದೂರವಾಗುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿಯನ್ನು ನೀವು ಕಾಣಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಲಾಭ ನೀಡುತ್ತೆ ಗುಲಾಬಿ ಹೂ : ಶುಕ್ರವಾರ ಸಂಜೆ ಗುಲಾಬಿ ಹೂವಿನಲ್ಲಿ ಕರ್ಪೂರವನ್ನು ಹಚ್ಚಬೇಕು. ನಂತರ  ಲಕ್ಷ್ಮಿ ದೇವಿಗೆ ಹೂವುಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದ್ರಿಂದಲೂ ಹಣಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ. ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಮಾಡಿದ ಕೆಲಸಕ್ಕೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ.

ರೋಗ ನಿವಾರಕ ಗುಲಾಬಿ : ಒಂದು ವೀಳ್ಯದೆಲೆ ಮೇಲೆ ಗುಲಾಬಿ ಹೂ ಹಾಗೂ ಸಕ್ಕರೆ ಅಚ್ಚನ್ನು ಇಡಬೇಕು. ನಂತರ ಕೈನಲ್ಲಿ ಇವುಗಳನ್ನು ಹಿಡಿದು ರೋಗಿಯ ಸುತ್ತ 11 ಸುತ್ತು ಸುಳಿಯಬೇಕು. ಆ ನಂತರ ಇದನ್ನು ಅಡ್ಡರಸ್ತೆಗೆ ಎಸೆಯಬೇಕು. ಇದು ಆರೋಗ್ಯದಲ್ಲಿ ಶೀಘ್ರ ಸುಧಾರಣೆ ತರುತ್ತದೆ ಎಂದು ನಂಬಲಾಗಿದೆ.ಆದ್ರೆ ಇದನ್ನು ಮಾಡಿ ಔಷಧಿ ನಿಲ್ಲಿಸುವುದು ಒಳ್ಳೆಯದಲ್ಲ. ವೈದ್ಯರ ಸಲಹೆಯಂತೆ ಔಷಧಿ ಸೇವನೆ ಮುಂದುವರಿಸಬೇಕು. 

Vastu Tips: ಬೆಳಗ್ಗೆ ಈ 3 ಕೆಲಸ ಮಾಡಿದರೆ ಬ್ಯಾಡ್ ಲಕ್ ಬೆನ್ಹತ್ತುವುದು!

ಸಾಲದ ಹೊರೆಯಿಂದ ಮುಕ್ತಿ : ಐದು ಕೆಂಪು ಗುಲಾಬಿ ಹೂವುಗಳನ್ನು ತೆಗೆದುಕೊಳ್ಳಿ. ಇವುಗಳಲ್ಲಿ 4 ಹೂವುಗಳನ್ನು ಬಿಳಿ ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಕಟ್ಟಿಕೊಳ್ಳಿ. ಇದರ ನಂತರ, ಐದನೇ ಹೂವನ್ನು ಬಟ್ಟೆಯ ಬಲ ಭಾಗದ ಮಧ್ಯದಲ್ಲಿ ಇರಿಸಿ ಹರಿಯುವ ನದಿಯಲ್ಲಿ ಎಸೆಯಿರಿ. ಹೀಗೆ ಮಾಡಿದಲ್ಲಿ ಸಾಲದಿಂದ ಬೇಗ ಮುಕ್ತಿ ಹೊಂದಬಹುದು. ಮನೆಯಲ್ಲಿ ಸಂತೋಷ, ಸಮೃದ್ಧಿ, ಶಾಂತಿ ನೆಲೆಸಿರುತ್ತದೆ. ಹಿರಿಯರ ಹಾಗೂ ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ.
 

Follow Us:
Download App:
  • android
  • ios