Asianet Suvarna News Asianet Suvarna News

ತುಳಸಿ ಒಣಗುತ್ತಿದೆಯೇ? ಶ್ರೇಯಸ್ಸಲ್ಲ, ಅದನ್ನು ಹೀಗೆ ಕಾಳಜಿ ಮಾಡಿ..

ತುಳಸಿಯನ್ನು ಪ್ರತಿ ಹಿಂದೂ ಮನೆಯಲ್ಲೂ ಬೆಳೆಸಿ ಪೂಜಿಸಲಾಗುತ್ತದೆ. ತುಳಸಿ ಗಿಡ ಒಣಗುತ್ತಿದ್ದರೆ, ಮನೆಯ ಸಮೃದ್ಧಿಯೂ ಕರಗುತ್ತದೆ, ಸಮಸ್ಯೆ ಹೆಚ್ಚುತ್ತದೆ ಎಂದರ್ಥ. ಹಾಗಾಗಿ, ತುಳಸಿಯನ್ನು ಉತ್ತಮವಾಗಿ ಹಬ್ಬಿಸಲು ಕೆಲ ವಿಷಯಗಳ ಕಾಳಜಿ ವಹಿಸಬೇಕು.

Natural Remedies to save your Tulsi Plant from Dying skr
Author
First Published Mar 2, 2023, 2:54 PM IST

ತುಳಸಿ ಗಿಡವನ್ನು ಸನಾತನ ಧರ್ಮದಲ್ಲಿ ಅತ್ಯಂತ ಮಂಗಳಕರವಾದ ಸಸ್ಯವೆಂದು ಪರಿಗಣಿಸಲಾಗಿದೆ. ಪ್ರತಿ ಹಿಂದೂ ಮನೆಯಲ್ಲಿ ಕನಿಷ್ಠ ಒಂದು ತುಳಸಿ ಗಿಡವನ್ನು ನೀವು ಕಾಣಬಹುದು. ಭಗವಾನ್ ಶ್ರೀ ವಿಷ್ಣುವಿನ ಭೋಗದಲ್ಲಿ ತುಳಸಿ ವಿಶೇಷ ಉಪಸ್ಥಿತಿಯನ್ನು ಹೊಂದಿದೆ. ಸಾಮಾನ್ಯವಾಗಿ ಗಿಡಮೂಲಿಕೆಗಳ ರಾಣಿ ಎಂದು ಕರೆಯಲ್ಪಡುವ ತುಳಸಿ ಸಸ್ಯವು ಹಲವಾರು ವೈದ್ಯಕೀಯ ಪ್ರಯೋಜನಗಳನ್ನು ಹೊಂದಿದೆ. ತುಳಸಿ ಎಂದು ಕರೆಯಲ್ಪಡುವ ಈ ಸಸ್ಯವನ್ನು ಸಾಮಾನ್ಯ ಶೀತ, ಜ್ವರ ಮತ್ತು ಕೆಮ್ಮು ಸೇರಿದಂತೆ ವಿವಿಧ ಕಾಲೋಚಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಕುಟುಂಬದಲ್ಲಿ ಸಾಮರಸ್ಯ ಮತ್ತು ಸಂತೋಷವನ್ನು ತರುತ್ತದೆ ಮತ್ತು ಆರ್ಥಿಕ ಸಂಬಂಧಿತ ಸಮಸ್ಯೆಗಳನ್ನು ದೂರವಿಡುತ್ತದೆ. 

ಆದಾಗ್ಯೂ, ವಿವಿಧ ಕಾರಣಗಳಿಂದಾಗಿ, ಈ ಸಸ್ಯವು ಒಣಗುತ್ತದೆ ಅಥವಾ ಕೀಟಗಳು ಸಸ್ಯವನ್ನು ನಾಶ ಮಾಡುತ್ತವೆ. ಅಂತಹ ಸಂದರ್ಭಗಳಲ್ಲಿ, ಈ ಪವಿತ್ರ ಸಸ್ಯದ ರಕ್ಷಣೆ ಬಹಳ ಮುಖ್ಯವಾಗಿದೆ. ತುಳಸಿ ಒಣಗಿದರೆ ಮನೆಯಲ್ಲಿ ಬಡತನ ಆವರಿಸುವ ಸೂಚನೆ ಎನ್ನಲಾಗುತ್ತದೆ. ತುಳಸಿ ಸಸ್ಯವನ್ನು ಉಳಿಸಲು ಕೆಲವು ನೈಸರ್ಗಿಕ ಪರಿಹಾರಗಳು ಇಲ್ಲಿವೆ.

ನೀರಿನ ಸರಿಯಾದ ಪ್ರಮಾಣ: ಹೆಚ್ಚುವರಿ ತೇವಾಂಶವು ತುಳಸಿ ಗಿಡಕ್ಕೆ ಒಳ್ಳೆಯದಲ್ಲ. ಸಸ್ಯದಲ್ಲಿ ನೀರಿನ ಅತಿಯಾದ ಶೇಖರಣೆಯಿಂದಾಗಿ, ಅದರ ಎಲೆಗಳು ಬೀಳಲು ಪ್ರಾರಂಭಿಸುತ್ತವೆ ಮತ್ತು ಸಸ್ಯವು ಒಣಗಲು ಪ್ರಾರಂಭಿಸುತ್ತದೆ. ತುಳಸಿ ಗಿಡದಿಂದ 15 ಸೆಂ.ಮೀ ದೂರದಲ್ಲಿ 20 ಸೆಂ.ಮೀ ಆಳದಲ್ಲಿ ಮಣ್ಣನ್ನು ಅಗೆಯಿರಿ. ನೀವು ಬೇರುಗಳಲ್ಲಿ ಹೆಚ್ಚಿನ ತೇವಾಂಶವನ್ನು ಕಂಡುಕೊಂಡಾಗ, ಅದರಲ್ಲಿ ಒಣ ಮಣ್ಣು ಮತ್ತು ಮರಳನ್ನು ತುಂಬಿಸಿ. ಇದು ಸಸ್ಯದ ಬೇರುಗಳಿಗೆ ಗಾಳಿಯನ್ನು ನೀಡುತ್ತದೆ ಮತ್ತು ಸಸ್ಯವು ಉಸಿರಾಡಲು ಸಾಧ್ಯವಾಗುತ್ತದೆ.

ಬಲವಾದ ಸೂರ್ಯನ ಬೆಳಕಿನಿಂದ ದೂರವಿಡಿ: ಸೂರ್ಯನ ಬೆಳಕು ಸಸ್ಯಗಳಿಗೆ ಬಹಳ ಮುಖ್ಯವಾಗಿದೆ. ಆದರೆ ಅದು ಅಧಿಕವಾದರೆ ಸಸ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ, ವಿಶೇಷವಾಗಿ ಬೇಸಿಗೆಯಲ್ಲಿ. ಆದ್ದರಿಂದ ನಿಮ್ಮ ತುಳಸಿ ಗಿಡವನ್ನು ಸೂರ್ಯನ ಬೆಳಕಿನಿಂದ ದೂರವಿಡಿ. ಕೊಂಚವೇ ಬೆಳಗಿನ ಬಿಸಿಲು ತಾಕಿದರೂ ಸಾಕು..

ಇವರು ಇಂದಿನ ಶಹಜಹಾನ್; ಪತ್ನಿಗಾಗಿ 7 ಕೋಟಿ ರೂ. ವೆಚ್ಚದ ದೇವಾಲಯ ನಿರ್ಮಿಸಿದ ಪತಿ!

ಬೇವಿನ ಪುಡಿ: ತೇವಾಂಶದ ಕಾರಣದಿಂದಾಗಿ ಸಸ್ಯದಲ್ಲಿ ಶಿಲೀಂಧ್ರಗಳ ಸೋಂಕು ಸಂಭವಿಸಬಹುದು. ಈ ಸೋಂಕುಗಳನ್ನು ತೊಡೆದುಹಾಕಲು ಇದಕ್ಕೆ ಬೇವಿನ ಪುಡಿ ಬಳಸಿ. ಇದರಿಂದ ಫಂಗಲ್ ಸೋಂಕಿನ ಸಮಸ್ಯೆ ದೂರವಾಗುತ್ತದೆ. ತುಳಸಿ ಗಿಡಕ್ಕೆ ಹೆಚ್ಚು ನೀರು ಅಥವಾ ಆರೈಕೆಯ ಅಗತ್ಯವಿಲ್ಲ, ಕಡಿಮೆ ನೀರು, ಕಡಿಮೆ ಸೂರ್ಯನ ಬೆಳಕು ಮತ್ತು ಕಡಿಮೆ ಗಾಳಿಯಲ್ಲಿಯೂ ಬೆಳೆಯುತ್ತದೆ, ಆದರೆ ಸಸ್ಯವು ಒಣಗಲು ಪ್ರಾರಂಭಿಸಿದರೆ ಮತ್ತು ಅದರ ಕಾರಣ ನಿಮಗೆ ಅರ್ಥವಾಗದಿದ್ದರೆ, ತಕ್ಷಣ ಅದನ್ನು ಬೇವಿನ ಪುಡಿ ಬಳಸಿ ನೆಡಬೇಕು. ಇದಕ್ಕಾಗಿ ಒಣ ಬೇವಿನ ಎಲೆಗಳನ್ನು ತೆಗೆದುಕೊಂಡು ಕೇವಲ ಎರಡು ಚಮಚ ಪುಡಿಯನ್ನು ಗಿಡಕ್ಕೆ ಹಾಕಿದರೆ ಅದು ಒಣಗದಂತೆ ಕಾಪಾಡುತ್ತದೆ.

ಹೊಗೆ ಮತ್ತು ಎಣ್ಣೆಯಿಂದ ದೂರವಿಡಿ: ತುಳಸಿ ಗಿಡವನ್ನು ಹೊಗೆ ಮತ್ತು ಎಣ್ಣೆಯಿಂದ ದೂರವಿಡಿ. ಪ್ರತಿದಿನ ಅದರ ಎಲೆಗಳನ್ನು ಕೀಳಬೇಡಿ. ಪೂಜೆ ಮಾಡುವಾಗ ಗಿಡದ ಬಳಿ ದೀಪ, ಅಗರಬತ್ತಿಗಳನ್ನು ಇಟ್ಟರೆ ಗಿಡ ಹಾಳಾಗುತ್ತದೆ. ಸಸ್ಯದಿಂದ ಸ್ವಲ್ಪ ದೂರದಲ್ಲಿ ಇರಿಸಿ.

Attractive girls: ಈ ರಾಶಿಯ ಹುಡುಗಿಯರು ಮೊದಲ ಭೇಟಿಯಲ್ಲೇ ಹುಡುಗರನ್ನು ಹುಚ್ಚರಾಗಿಸುತ್ತಾರೆ!

ಸರಿಯಾದ ಕಾಳಜಿ: ಇದನ್ನು ಹೊರತುಪಡಿಸಿ, ತುಳಸಿ ಕುಂಡದ ಮೇಲಿನಿಂದ ಹೋಗುವ ತಂತಿಯಲ್ಲಿ ಒಣಗಲು ಯಾವುದೇ ರೀತಿಯ ಬಟ್ಟೆಯನ್ನು ಹರಡಬೇಡಿ. ಯಾವುದೇ ಅಶುದ್ಧ ವಸ್ತು ಅಥವಾ ಬಟ್ಟೆಯನ್ನು ಸುತ್ತಲೂ ಇಡಬೇಡಿ. ಸಂಪ್ರದಾಯದಂತೆ ಮಂಗಳವಾರ ಮತ್ತು ಭಾನುವಾರದಂದು ಅದರ ಎಲೆಗಳನ್ನು ಕೀಳಬೇಡಿ.

Follow Us:
Download App:
  • android
  • ios