Asianet Suvarna News Asianet Suvarna News

ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ, ಆಮೆ ಸೇರಿ 2 ಕೆಜಿ ಬಂಗಾರ ದಾನ ಮಾಡಿದ ನಾರಾಯಣ ಮೂರ್ತಿ - ಸುಧಾ ಮೂರ್ತಿ

ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಹಾಗೂ ಮಾಜಿ ಟಿಟಿಡಿ ಟ್ರಸ್ಟ್ ಬೋರ್ಡ್ ಸದಸ್ಯೆ ಸುಧಾ ಮೂರ್ತಿ ಅವರು ಭಾನುವಾರ, ಜುಲೈ 16 ರಂದು ತಿರುಮಲ ದೇವಸ್ಥಾನಕ್ಕೆ ಚಿನ್ನದ ಅಭಿಷೇಕ ಶಂಕು ಮತ್ತು ಚಿನ್ನದ ಆಮೆ ವಿಗ್ರಹವನ್ನು ಕೊಡುಗೆಯಾಗಿ ನೀಡಿದರು.

narayana murthy sudha murty donate gold conch tortoise idol to tirupati temple see pics ash
Author
First Published Jul 19, 2023, 1:08 PM IST | Last Updated Jul 19, 2023, 1:08 PM IST

ತಿರುಪತಿ (ಜುಲೈ 19, 2023): ಹೆಚ್ಚಾಗಿ ದಾನ ಮತ್ತು ತಮ್ಮ ಸರಳತೆ ಮೂಲಕವೇ ಜನಪ್ರಿಯತೆ ಗಳಿಸಿರುವ ಇನ್ಪೋಸಿಸ್‌ ನಾರಾಯಣ ಮೂರ್ತಿ - ಸುಧಾಮೂರ್ತಿ ದಂಪತಿ ಆಂಧ್ರಪ್ರದೇಶದ ಜಗದ್ವಿಖ್ಯಾತ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಚಿನ್ನದ ಶಂಖ ಮತ್ತು ಆಮೆಗಳನ್ನು ದಾನವಾಗಿ ಸಮರ್ಪಿಸಿದ್ದಾರೆ. ಮೂರ್ತಿ ದಂಪತಿ ಕೋವಿಡ್‌ ಅವಧಿಯಲ್ಲೂ ಸಂತ್ರಸ್ತರಿಗಾಗಿ 100 ಕೋಟಿ ರೂ. ನೀಡಿದ್ದರು. ದೇವಾಲಯ ಅಡಳಿತ ಮಂಡಳಿಯವರಿಗೆ ದಂಪತಿ ಚಿನ್ನದ ಆಮೆ ಮತ್ತು ಶಂಖವನ್ನು ನೀಡುತ್ತಿರುವ ಫೋಟೋಗಳು ವೈರಲ್‌ ಆಗಿವೆ.

ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಹಾಗೂ ಮಾಜಿ ಟಿಟಿಡಿ ಟ್ರಸ್ಟ್ ಬೋರ್ಡ್ ಸದಸ್ಯೆ ಸುಧಾ ಮೂರ್ತಿ ಅವರು ಭಾನುವಾರ, ಜುಲೈ 16 ರಂದು ತಿರುಮಲ ದೇವಸ್ಥಾನಕ್ಕೆ ಚಿನ್ನದ ಅಭಿಷೇಕ ಶಂಕು ಮತ್ತು ಚಿನ್ನದ ಆಮೆ ವಿಗ್ರಹವನ್ನು ಕೊಡುಗೆಯಾಗಿ ನೀಡಿದರು. ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಅವರಿಗೆ ರಂಗನಾಯಕುಲ ಮಂಟಪದಲ್ಲಿ ಈ ಉಡುಗೊರೆ ನೀಡಿದ್ದಾರೆ. ಸುಮಾರು ಎರಡು ಕಿಲೋಗ್ರಾಂಗಳಷ್ಟು ಚಿನ್ನದ ದೇಣಿಗೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದ್ದು,  ಆಂಧ್ರಪ್ರದೇಶದ ದೇವಸ್ಥಾನದಲ್ಲಿ ವಿಗ್ರಹಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ.

ಇದನ್ನು ಓದಿ: ತಿರುಪತಿಯಲ್ಲಿ ಭೀಕರ ಅಪಘಾತ; ಐವರ ಸಾವು, 8 ಮಂದಿಗೆ ಗಾಯ: ದೇವರ ಸನ್ನಿಧಿಗೆ ಹೊರಟವರು ಮಸಣದ ಪಾಲಾದ್ರು!

ಆಂಧ್ರಪ್ರದೇಶ ಸರ್ಕಾರದ ಸಲಹೆಗಾರರಾದ ಎಸ್. ರಾಜೀವ್ ಕೃಷ್ಣ ಅವರು ಟ್ವಿಟ್ಟರ್‌ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ''ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಗಾರು ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರು (ಟಿಟಿಡಿ ಮಾಜಿ ಸದಸ್ಯೆ) ತಿರುಮಲದಲ್ಲಿರುವ ಶ್ರೀ ವರು ದೇವಸ್ಥಾನಕ್ಕೆ ಚಿನ್ನದ ಅಭಿಷೇಕ ಶಂಕುವನ್ನು ದಾನ ಮಾಡಿದ್ದಾರೆ. ಅವರು ಟಿಟಿಡಿ ಇಒ ಧರ್ಮಾರೆಡ್ಡಿ ಅವರಿಗೆ ಹಸ್ತಾಂತರಿಸಿದರು.

ಈ ಫೋಟೋಗಳಿಗೆ ಪ್ರತಿಕ್ರಿಯಿಸಿದ ಟ್ವಿಟ್ಟರ್ ಬಳಕೆದಾರರು ದಂಪತಿಯನ್ನು ಹೊಗಳಿದರು ಮತ್ತು ''ಸುಂದರ ಜೋಡಿಯ ಇನ್ನೊಂದು ಗೌರವಾನ್ವಿತ ಭಾಗ. ಅವರು ದಾನದ ಮೂಲಕ ಲಕ್ಷಾಂತರ ಜನರಿಗೆ ಸಹಾಯ ಮಾಡುವುದನ್ನು ಮುಂದುವರೆಸುತ್ತಿರುವಾಗ, ದೇವರು ಅವರಿಗೆ ದಯೆಯಿಂದ ಆಶೀರ್ವಾದಕ್ಕಾಗಿ ಧನ್ಯವಾದ ಹೇಳಲು ಅವರು ಮರೆಯಲಿಲ್ಲ’’ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: ತಿರುಪತಿ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾದ ಕರ್ನಾಟಕದ ವ್ಯಕ್ತಿ: ಜತೆಗಿದ್ದ ಮಹಿಳೆಗಾಗಿ ಪೊಲೀಸರ ಹುಡುಕಾಟ

ತಿರುಮಲವು ಭಕ್ತರಿಂದ ಇಂತಹ ಸೂಪರ್ ಕಾಸ್ಟ್ಲಿ ಗಿಫ್‌ಗಳನ್ನು ವಾಡಿಕೆಯಂತೆ ಪಡೆಯುತ್ತದೆ. ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಉಪಕ್ರಮವಾದ ಶ್ರೀ ವೆಂಕಟೇಶ್ವರ ಅಲಯಾಲ ನಿರ್ಮಾಣಂ ಟ್ರಸ್ಟ್ (ಶ್ರೀವಾಣಿ ಟ್ರಸ್ಟ್), ಕಳೆದ ಐದು ವರ್ಷಗಳಲ್ಲಿ ಕನಿಷ್ಠ ₹ 10,000 ದೇಣಿಗೆ ನೀಡಿದ ಭಕ್ತರಿಂದ ₹ 880 ಕೋಟಿ ಗಳಿಸಿದೆ ಎಂದು ಪಿಟಿಐ ವರದಿ ಭಾನುವಾರ ತಿಳಿಸಿದೆ.
ಪ್ರತಿ 10,000 ರೂ. ದೇಣಿಗೆಗೆ, ಟಿಟಿಡಿ 'ವಿಐಪಿ ಬ್ರೇಕ್ ದರ್ಶನ'ವನ್ನು ನೀಡುತ್ತದೆ. ಇದು ದಾನಿಗಳು ಬೆಳಗ್ಗೆ ದೇವರನ್ನು ಭೇಟಿ ಮಾಡಲು ಅನುವು ಮಾಡಿಕೊಡುತ್ತದೆ. ಇದರಿಂದ ಸರ್ವದರ್ಶನಂ ಸರದಿಯಲ್ಲಿ ನಿಂತುಕೊಂಡು ಹೆಚ್ಚು ಕಾಯುವ ಸಮಯ ತಪ್ಪುತ್ತದೆ.

ಇದನ್ನೂ ಓದಿ: ತಿರುಪತಿ ಹುಂಡಿ ಸಂಗ್ರಹದಲ್ಲಿ ತೀವ್ರ ಕುಸಿತ: ತಿಮ್ಮಪ್ಪ ದೇಗುಲಕ್ಕೆ ಹೋಗೋ ಭಕ್ತರ ಸಂಖ್ಯೆಯೇ ಕಡಿಮೆಯಾಯ್ತಾ?

Latest Videos
Follow Us:
Download App:
  • android
  • ios