Asianet Suvarna News Asianet Suvarna News

ಚಾರ್‌ಧಾಮ್ ಯಾತ್ರೆ; ಫೆ.21ರಿಂದ ಆನ್ಲೈನ್‌ ಬುಕಿಂಗ್ ಆರಂಭ; ಬುಕ್ ಮಾಡೋದು ಹೀಗೆ..

ಕೇದಾರನಾಥ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗಿದ್ದು, ಚಾರ್ ಧಾಮ್ ಯಾತ್ರೆಗೆ ಆನ್‌ಲೈನ್ ಬುಕಿಂಗ್ ದಿನಾಂಕವನ್ನು ಸಹ ನೀಡಲಾಗಿದೆ. ಮನೆಯಲ್ಲಿ ಕುಳಿತು ಒಂದೇ ಕ್ಲಿಕ್‌ನಲ್ಲಿ ಕೇದಾರನಾಥ ಯಾತ್ರೆ ಬುಕ್ ಮಾಡಿಕೊಳ್ಳಿ.

Kedarnath Temple Opening Date know how online booking will be done for Babas darshan skr
Author
First Published Feb 20, 2023, 10:26 AM IST | Last Updated Feb 20, 2023, 12:24 PM IST

ಚಾರ್ ಧಾಮ್ ಯಾತ್ರೆಯ ನೋಂದಣಿಯಿಂದ ಹಿಡಿದು ಕೇದಾರನಾಥ ದೇವಾಲಯಯಾವಾಗ ತೆರೆಯುತ್ತದೆ, ಬುಕ್ ಮಾಡುವುದು ಹೇಗೆ ಎಂಬವರೆಗೆ, ನೀವು ಮನೆಯಲ್ಲಿ ಕುಳಿತು ಒಂದೇ ಕ್ಲಿಕ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

ಈ ವರ್ಷ, ಏಪ್ರಿಲ್ 25ರಂದು ಬೆಳಿಗ್ಗೆ 6.20ಕ್ಕೆ ಕೇದಾರನಾಥದ ಬಾಗಿಲು ತೆರೆಯುವುದಾಗಿ ಘೋಷಿಸಲಾಗಿದೆ. ಫೆಬ್ರವರಿ 21ರಿಂದ ನೋಂದಣಿಗಳು ಪ್ರಾರಂಭವಾಗಲಿವೆ. 2022ರಲ್ಲಿ, ಚಾರ್ ಧಾಮ್ ಯಾತ್ರೆಯು ನವೆಂಬರ್ 19ರಂದು ಬದ್ರಿನಾಥದ ಬಾಗಿಲು ಮುಚ್ಚುವುದರೊಂದಿಗೆ ಕೊನೆಗೊಂಡಿತ್ತು. ಇದೀಗ ಚಳಿಯ ದಿನಗಳು ಕಳೆದು ಬೇಸಿಗೆ ಬರುತ್ತಿರುವುದರಿಂದ ಮತ್ತೆ ಕೇದಾರನಾಥ ದೇವಾಲಯ ತೆರೆಯುವ ದಿನಾಂಕ ಪ್ರಕಟಿಸಲಾಗಿದೆ. 

ಗಂಗೋತ್ರಿ, ಯಮುನೋತ್ರಿ..
ಕೇದಾರನಾಥದ ಬಾಗಿಲು ತೆರೆಯುವ ಮೊದಲು, ಭೈರವನಾಥ ಜಿಯನ್ನು ಏಪ್ರಿಲ್ 20ರಂದು ಪೂಜಿಸಲಾಗುತ್ತದೆ. ಏಪ್ರಿಲ್ 21ರಂದು (ಶುಕ್ರವಾರ), ಭಗವಾನ್ ಕೇದಾರನಾಥನು ಪಂಚಮುಖಿ ಡೋಲಿಯಲ್ಲಿ  ಕೇದಾರನಾಥ ಧಾಮಕ್ಕೆ ಹೊರಡಲಿದ್ದಾನೆ. ಉತ್ತರಾಖಂಡದಲ್ಲಿರುವ ನಾಲ್ಕು ಧಾಮಗಳಲ್ಲಿ, ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲನ್ನು ಏಪ್ರಿಲ್ 22ರಂದು ಮೊದಲು ತೆರೆಯಲಾಗುವುದು, ಕೇದಾರನಾಥದ ನಂತರ, ಬದರಿನಾಥದಲ್ಲಿ ದೇವಾಲಯ ಬಾಗಿಲನ್ನು ಏಪ್ರಿಲ್ 27, 2023ರಂದು ಬೆಳಿಗ್ಗೆ 7.10ಕ್ಕೆ ತೆರೆಯಲಾಗುತ್ತದೆ.

ಈ ರಾಶಿಯವರು ತಂತ್ರಜ್ಞಾನ ವ್ಯಸನಿಗಳು, ಸದಾ ಗ್ಯಾಜೆಟ್‌ಗೆ ಅಂಟಿಕೊಂಡಿರುತ್ತಾರೆ!

ಯಾತ್ರೆಗೆ ನೋಂದಣಿ ಮಾಡಿಕೊಳ್ಳುವುದು ಹೀಗೆ..
ಚಾರ್‌ಧಾಮ್ ಯಾತ್ರೆಯಲ್ಲಿ ಭಾಗವಹಿಸಲು, ಭಕ್ತರು ಉತ್ತರಾಖಂಡ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ಗೆ(https://badrinath-kedarnath.gov.in/) ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಈ ನೋಂದಣಿ ಫೆಬ್ರವರಿ 21ರಿಂದ ಪ್ರಾರಂಭವಾಗಲಿದೆ. ನೋಂದಣಿ ಸಂಪೂರ್ಣವಾಗಿ ಉಚಿತವಾಗಿದೆ. ನೀವು ವೆಬ್‌ಸೈಟ್‌ಗೆ ಹೋಗಿ ರಿಜಿಸ್ಟರ್/ಲಾಗಿನ್ ಬಟನ್ ಕ್ಲಿಕ್ ಮಾಡಬೇಕು. ಇದರ ನಂತರ, ಹೊಸ ಫಾರ್ಮ್ ತೆರೆಯುತ್ತದೆ, ಅದರಲ್ಲಿ ನಿಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀವು ನೀಡಬೇಕಾಗುತ್ತದೆ.

ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ನಿಮ್ಮ ನೋಂದಣಿ ಪೂರ್ಣಗೊಳ್ಳುತ್ತದೆ ಮತ್ತು SMS ಮೂಲಕ ಅನನ್ಯ ನೋಂದಣಿ ಸಂಖ್ಯೆಯನ್ನು ಸ್ವೀಕರಿಸಲಾಗುತ್ತದೆ. ಇದರೊಂದಿಗೆ, ನೀವು ವೆಬ್‌ಸೈಟ್‌ನಿಂದ ನಿಮ್ಮ ನೋಂದಣಿ ಫಾರ್ಮ್ ಅನ್ನು ಸಹ ಡೌನ್‌ಲೋಡ್ ಮಾಡಬಹುದು. ಸಂಪೂರ್ಣ ಪ್ರಯಾಣದ ಸಮಯದಲ್ಲಿ ನೀವು ಈ ನೋಂದಣಿ ಫಾರ್ಮ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ಇದರೊಂದಿಗೆ, ನಿಮ್ಮ ಗುರುತಿನ ಚೀಟಿಗಳಲ್ಲಿ ಒಂದನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು.

Rajyog In Kundli: 617 ವರ್ಷಗಳ ಬಳಿಕ 3 ರಾಜಯೋಗಗಳ ಸಂಯೋಗ, 4 ರಾಶಿಗಳಿಗೆ ಸುಯೋಗ

ಚಾರ್‌ಧಾಮ್ ಯಾತ್ರೆ ಎಲ್ಲಿಂದ ಪ್ರಾರಂಭವಾಗುತ್ತದೆ?
ಚಾರ್‌ಧಾಮ ಯಾತ್ರೆಯು ಪವಿತ್ರ ಪ್ರದಕ್ಷಿಣೆ ಎಂಬುದು ಒಂದು ನಂಬಿಕೆ. ಈ ಯಾತ್ರೆಯ ಮೂಲಕ ನಾಲ್ಕು ಪವಿತ್ರ ಸ್ಥಳಗಳನ್ನು ಪ್ರದಕ್ಷಿಣೆ ಮಾಡಲಾಗುತ್ತದೆ. ಈ ಪ್ರಯಾಣವು ಉತ್ತರಾಖಂಡದ ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ ಮತ್ತು ನಂತರ ಗಂಗೋತ್ರಿಯ ಕಡೆಗೆ ಚಲಿಸುತ್ತದೆ. ಇದರ ನಂತರ ಅದು ಕೇದಾರನಾಥ ಮತ್ತು ಅಂತಿಮವಾಗಿ ಬದರಿನಾಥ ದೇವಸ್ಥಾನಕ್ಕೆ ಹೋಗುತ್ತದೆ. ಬದ್ರಿನಾಥ್, ಕೇದಾರ್‌ನಾಥ್, ಗಂಗೋತ್ರಿ ಹಾಗೂ ಯಮುನೋತ್ರಿ. ಇವೆಲ್ಲವೂ ಉತ್ತರಾಖಂಡದಲ್ಲಿದೆ. ಈ ಛೋಟಾ ಚಾರ್‌ಧಾಮ್‌ ವೈಷ್ಣವ ದೇವಾಲಯ, ಶಿವ ದೇವಾಲಯ ಹಾಗೂ ಎರಡು ಶಕ್ತ ದೇವಾಲಯಗಳನ್ನು ಒಳಗೊಂಡಿದೆ. ಯಮುನೋತ್ರಿ ಯಮುನಾ ನದಿಯ ಉಗಮ ಸ್ಥಳವಾದರೆ, ಗಂಗೋತ್ರಿಯು ಗಂಗೆಯ ಮೂಲ. ಕೇದಾರನಾಥವು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದರೆ, ಬದ್ರಿನಾಥವು ವಿಷ್ಣುವು ಮನುಷ್ಯನ ರೂಪದಲ್ಲಿ ತಪಸ್ಸು ಮಾಡಿದ ತಾಣ. ಚಾರ್‌ಧಾಮ್ ಯಾತ್ರೆ ಕೈಗೊಳ್ಳುವುದರಿಂದ ಈ ಜೀವನದ್ದಷ್ಟೇ ಅಲ್ಲ, ಹಿಂದಿನ ಜನ್ಮದ ಪಾಪವನ್ನೂ ಕಳೆದುಕೊಳ್ಳಬಹುದಾಗಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios