Asianet Suvarna News Asianet Suvarna News

Thursday Astro: ಈ ದಿನ ಈ ವಸ್ತುಗಳ ದಾನದಿಂದ ದುಪ್ಪಟ್ಟು ಸಮೃದ್ಧಿ ನಿಮ್ಮದಾಗುತ್ತೆ!

ಗುರುವಾರದಂದು ದಾನ ಮಾಡುವುದರಿಂದ ವಿಷ್ಣುವಿನ ವಿಶೇಷ ಆಶೀರ್ವಾದ ಸಿಗುತ್ತದೆ. ಗುರುವಾರದ ದಿನ ಯಾವ ವಸ್ತುಗಳನ್ನು ದಾನ ಮಾಡಬೇಕು, ಅದರಿಂದ ಏನೆಲ್ಲ ಲಾಭಗಳಿವೆ ತಿಳಿಯೋಣ.

Guruwar Daan Donation of this thing on Thursday can change your luck skr
Author
First Published Jan 19, 2023, 9:28 AM IST

ಭಗವಾನ್ ವಿಷ್ಣುವು ಈ ಪ್ರಪಂಚದ ರಕ್ಷಕ. ಅವನೇ ಈ ಬ್ರಹ್ಮಾಂಡದ ಸೃಷ್ಟಿಕರ್ತ. ಗುರುವಾರ ಭಗವಾನ್ ಶ್ರೀ ಹರಿವಿಷ್ಣು ಮತ್ತು ದೇವಗುರು ಬೃಹಸ್ಪತಿಗೆ ಅತ್ಯಂತ ಪ್ರಿಯವಾದದ್ದು. ದೇವಗುರು ಎಂಬ ಬಿರುದು ಪಡೆದಿರುವ ಕಾರಣ ಗುರುಗ್ರಹವು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಶುಭಗ್ರಹವಾಗಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಗುರುವಾರ ಇವರಿಬ್ಬರನ್ನು ಪೂಜಿಸುವುದು, ಗುರು ಗ್ರಹ ದೋಷ ಕಳೆದುಕೊಂಡು ಬಲ ಹೆಚ್ಚಿಸುವ ಕಾರ್ಯ ಮಾಡುವುದರಿಂದ ವಿಶೇಷ ಲಾಭಗಳು ದಕ್ಕಲಿವೆ. ಗುರುವಾರದ ದಿನ ಮಾಡುವ ಕೆಲ ವಸ್ತುಗಳ ದಾನ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಗುರುವಾರ ದಾನ ಮಾಡುವುದರಿಂದ ಮನೆಗೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ.

ಗುರುವಾರದ ಪೂಜೆ
ಗುರುವಾರ ವಿಷ್ಣು ಪೂಜೆಗೆ ಮೀಸಲಾಗಿದೆ,  ಗುರುವಾರದಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ಗುರುವಾರದಂದು ಉಪವಾಸ ಆಚರಿಸುವವರು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ನಂಬಿಕೆಯ ಪ್ರಕಾರ, ಗುರುವಾರದಂದು ನೀವು ಭಗವಾನ್ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಕುಂಕುಮ ಮತ್ತು 1.25 ಕೆಜಿ ಗ್ರಾಂ ಇಟ್ಟು ವಿಷ್ಣು ಸಹಸ್ತ್ರನಾಮವನ್ನು ಜಪಿಸಿದರೆ, ನೀವು ಬಯಸಿದ ಫಲವನ್ನು ಪಡೆಯುತ್ತೀರಿ.

Shani Amavasya 2023: ಶನಿ ದೋಷ ಕಳೆದುಕೊಳ್ಳೋಕೆ ಇದೇ ಸುದಿನ, ಇಷ್ಟ್ ಮಾಡಿ ಸಾಕು..

ಗುರುವಾರ ಏನು ದಾನ ಮಾಡಬೇಕು? 

  • ಗುರುವಾರ ಹಳದಿ ಹಣ್ಣುಗಳು ಮತ್ತು ಹೂವುಗಳು, ಬೇಳೆ, ಹಳದಿ ಶ್ರೀಗಂಧ, ಹಳದಿ ಸಿಹಿತಿಂಡಿಗಳು, ಒಣದ್ರಾಕ್ಷಿ, ಜೋಳದ ಹಿಟ್ಟು, ಅಕ್ಕಿ ಮತ್ತು ಅರಿಶಿನವನ್ನು ದಾನ ಮಾಡಿ. ಬಾಳೆಹಣ್ಣು ದಾನ ಇದಕ್ಕಿಂತಲೂ ಶ್ರೇಷ್ಠ. ಈ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯು ಶ್ರೀಮಂತನಾಗುತ್ತಾನೆ ಮತ್ತು ಕುಟುಂಬದಲ್ಲಿ ಸಂತೋಷವನ್ನು ತರುತ್ತಾನೆ.
  • ನೀವು ಈ ದಿನ ಬೇಳೆ ಮತ್ತು ಕುಂಕುಮವನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಬೇಕು. ನೀವು ಇದನ್ನು ಪ್ರತಿ ಗುರುವಾರ ಮಾಡಿದರೆ, ವಿಷ್ಣು ಮತ್ತು ಗುರುದೇವ ಬೃಹಸ್ಪತಿಯ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ.
  • ಹಾಗೆಯೇ ಹಳದಿ ವಸ್ತುಗಳನ್ನು ದಾನ ಮಾಡಬೇಕು ಮತ್ತು ಹಳದಿ ಬಣ್ಣದ ಆಹಾರವನ್ನು ಮಾತ್ರ ಸೇವಿಸಬೇಕು. ಈ ದಿನ ಬೇಳೆಯನ್ನು ತಿನ್ನುವುದು ಮತ್ತು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಹಳದಿ ಬಣ್ಣದ ವಸ್ತುಗಳನ್ನು ತಿನ್ನುವುದರಿಂದ ಆರೋಗ್ಯದ ಲಾಭಗಳು ಸಿಗುತ್ತವೆ. 
  • ನೀವು ಹಣಕಾಸಿನ ಅಡಚಣೆಗಳಿಂದ ಪ್ರಭಾವಿತರಾಗಿದ್ದರೆ ಮತ್ತು ನಿಮ್ಮ ಮನೆಯಲ್ಲಿ ಅದೃಷ್ಟವಿಲ್ಲದಿದ್ದರೆ, ಬೇಳೆ ದಾನದ ಈ ಪರಿಹಾರವು ನಿಮಗೆ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಇದರಿಂದ ಹಣದ ಕೊರತೆಯಿರುವುದಿಲ್ಲ ಮತ್ತು ವೈಫಲ್ಯವು ದೂರ ಉಳಿಯುತ್ತದೆ. ಬುದ್ಧಿ ಚುರುಕಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಮದುವೆಗೆ ಸಂಗಾತಿಯನ್ನು ಹುಡುಕಲು ಸಾಧ್ಯವಾಗದ ಯುವಕರು ಹಳದಿ ಬಣ್ಣದ ಆಭರಣ ಮತ್ತು ಬಟ್ಟೆಗಳನ್ನು ಗುರುವಾರ ಧರಿಸಬೇಕು.

    ಈ ವಸ್ತುಗಳನ್ನು ಹಂಚಿಕೊಂಡ್ರೆ 2023ಕ್ಕೆ ದೌರ್ಭಾಗ್ಯ ಆಹ್ವಾನಿಸಿದಂತೇ ಸರಿ!
     
  • ನಿಮ್ಮ ಮನೆಯ ದಕ್ಷಿಣ ಅಥವಾ ಪಶ್ಚಿಮ ಮೂಲೆಯನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಮತ್ತು ಸಿಂಧೂರದಿಂದ ಸ್ವಸ್ತಿಕ್ ಮಾಡಿ. ಇದರೊಂದಿಗೆ, ಈ ಮೂಲೆಗೆ ಬೇಳೆ ಮತ್ತು ಬೆಲ್ಲವನ್ನು ಅರ್ಪಿಸಿ. ಕೆಲವು ದಿನಗಳ ನಂತರ, ಈ ಬೇಳೆ ಮತ್ತು ಬೆಲ್ಲವು ಕೆಟ್ಟಾಗ, ಅದನ್ನು ನೀರಿನಲ್ಲಿ ಸುರಿಯಿರಿ ಮತ್ತು ಇನ್ನೊಂದು ಬೇಳೆ ಮತ್ತು ಬೆಲ್ಲವನ್ನು ನೈವೇದ್ಯ ಮಾಡಿ ಅಲ್ಲಿ ಇರಿಸಿ. 5 ಗುರುವಾರ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ವಿಷ್ಣುವಿನ ಆಶೀರ್ವಾದ ತುಂಬುತ್ತದೆ ಮತ್ತು ಹಣದ ಸಮಸ್ಯೆ ದೂರವಾಗುತ್ತದೆ.
  • ಪುಖರಾಜವನ್ನು ಧರಿಸುವುದರಿಂದ ಗುರುಬಲ ಹೆಚ್ಚುತ್ತದೆ. ಅದನ್ನು ಧರಿಸುವ ಮೊದಲು ಅರ್ಹರನ್ನು ಸಂಪರ್ಕಿಸಲು ಮರೆಯದಿರಿ.
  • ಗುರುವಾರದಂದು ಚಿನ್ನ, ತಾಮ್ರ ಮತ್ತು ಕಂಚಿನ ಲೋಹಗಳ ದಾನ ಮತ್ತು ಖರೀದಿಯು ಜೀವನದಲ್ಲಿ ಅದೃಷ್ಟವನ್ನು ಕಾಪಾಡುತ್ತದೆ ಮತ್ತು ದುರದೃಷ್ಟವನ್ನು ದೂರವಿಡುತ್ತದೆ.
Follow Us:
Download App:
  • android
  • ios