ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ. ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಅವಕಾಶವಿರುವುದಿಲ್ಲ.ಆದ್ರೆ ನೀವು ಇರುವಲ್ಲಿಂದಲೇ ಉಚಿತವಾಗಿ ಅಯೋಧ್ಯೆ ರಾಮಮಂದಿರದ ಪ್ರಸಾದವನ್ನು ಪಡೆಯಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? 

ಕೋಟ್ಯಾಂತರ ಹಿಂದೂಗಳ ಹೋರಾಟ ಸಾರ್ಥಕವಾಗಿದೆ. ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಗವಾನ್ ಬಾಲರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಿದ್ದಾರೆ. ಕೋಟ್ಯಾಂತರ ಭಕ್ತಾಧಿಗಳು ಇದನ್ನು ಕಣ್ತುಂಬಿ ಕೊಂಡಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿಯೂ ಜನರು ಶ್ರೀರಾಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಶ್ರೀರಾಮನ ಜಪದಲ್ಲಿ ತೊಡಗಿದ್ದಾರೆ. ಮತ್ತೆ ಹಲವರು ಆನ್‌ಲೈನ್‌, ಟಿವಿಯಲ್ಲಿ ಅಯೋಧ್ಯೆಯ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ. 

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದೇಶಾದ್ಯಂತ ಆಯ್ದ ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಅವಕಾಶವಿರುವುದಿಲ್ಲ. ಎಷ್ಟೋ ಮಂದಿ ಅಯೋಧ್ಯೆಗೆ ಹೋಗಲು ಸಾಧ್ಯವಾಗಿಲ್ಲ ಎಂಬ ಬೇಸರದಲ್ಲಿದ್ದಾರೆ. ಆದರೆ ನೀವು ಇರುವಲ್ಲಿಂದಲೇ ಉಚಿತವಾಗಿ ಅಯೋಧ್ಯೆ ರಾಮಮಂದಿರದ ಪ್ರಸಾದವನ್ನು ಪಡೆಯಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಹೌದು, ಅಯೋಧ್ಯೆ ರಾಮಮಂದಿರದ ಪ್ರಸಾದವನ್ನು ಫ್ರೀಯಾಗಿ ಪಡೆಯಬಹುದು. ಬುಕ್ಕಿಂಗ್ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಆರ್ಗ್ಯಾನಿಕ್ ಖಾದಿ ಇಂಡಿಯಾ ವೆಬ್‌ಸೈಟ್ ಮೂಲಕ ಬುಕ್ಕಿಂಗ್‌
ಪ್ರಸ್ತುತ, ರಾಮಮಂದಿರ ಪ್ರಸಾದವನ್ನು ಕಾಯ್ದಿರಿಸುವ ಏಕೈಕ ಅಧಿಕೃತ ಚಾನೆಲ್ ಖಾದಿ ಆರ್ಗ್ಯಾನಿಕ್ ಮೂಲಕ ಸರ್ಕಾರ-ಅನುಮೋದಿತ ಖಾದಿ ಇಂಡಿಯಾ ವೆಬ್‌ಸೈಟ್ ಆಗಿದೆ. ಪ್ರಕ್ರಿಯೆಯು ಸರಳ ಮತ್ತು ಉಚಿತವಾಗಿದೆ. ಪ್ರಸಾದ ಬುಕ್ಕಿಂಗ್ ಕನಿಷ್ಠ ವಿತರಣಾ ಶುಲ್ಕವನ್ನು ಮಾತ್ರ ಹೊಂದಿರುತ್ತದೆ. ನೀವು ಕುಳಿತಿರುವಲ್ಲಿಯೇ ರಾಮಮಂದಿರ ಪ್ರಾಣ ಪ್ರತಿಷ್ಠಾ ಪೂಜೆಯ ಪ್ರಸಾದವನ್ನು ಬುಕ್ ಮಾಡಬಹುದು.

ರಾಮಮಂದಿರ ಪ್ರಸಾದ್ ಬುಕ್ಕಿಂಗ್ ಮಾಡುವುದು ಹೇಗೆ?

-ಮೊದಲಿಗೆ ವೆಬ್‌ಸೈಟ್ khadiorganic.comಗೆ (https://www.khadiindia.gov.in/) ಭೇಟಿ ನೀಡಬೇಕು. ಈಗ ಇಲ್ಲಿ ನಿಮ್ಮ ಉಚಿತ ಪ್ರಸಾದ್ ಪಡೆಯಿರಿ ಎಂದು ಬರೆದಿರುವಲ್ಲಿ ಕ್ಲಿಕ್ ಮಾಡಿ.

-ವಿವರವಾದ ಮಾಹಿತಿ ಮತ್ತು ಸೂಚನೆಗಳೊಂದಿಗೆ ಮೀಸಲಾದ ಪುಟಕ್ಕೆ ಇದು ಕನೆಕ್ಟ್ ಆಗುತ್ತದೆ.

-ನೋಂದಣಿ ಫಾರ್ಮ್ ಅನ್ನು ಪ್ರವೇಶಿಸಲು ಈಗ ಬುಕ್ ಮಾಡಿ ಎಂಬ ಆಪ್ಶನ್‌ ಕ್ಲಿಕ್ ಮಾಡಿ.

-ಹೆಸರು, ಫೋನ್ ಸಂಖ್ಯೆ ಮತ್ತು ಸಂಪೂರ್ಣ ವಿತರಣಾ ವಿಳಾಸ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

-ಮಾಹಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ಬುಕಿಂಗ್ ಅನ್ನು ಖಚಿತಪಡಿಸಲು ಸಬ್ಮಿಟ್ ಅಥವಾ ಸಲ್ಲಿಸು ಕ್ಲಿಕ್ ಮಾಡಿ.

-ಇದು ಹಣ ಪಾವತಿಗೆ ಲಿಂಕ್ ಆಗುತ್ತದೆ. ಹಣ ಪಾವತಿಯಾದೊಡನೆ ನಿಮ್ಮ ಪ್ರಸಾದ ಬುಕ್ಕಿಂಗ್ ವಿಧಾನ ಪೂರ್ಣಗೊಳ್ಳುತ್ತದೆ.

ರಾಮ ಮಂದಿರದಿಂದ ತುಂಬಲಿದೆ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸ; 25 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಆದಾಯದ ನಿರೀಕ್ಷೆ

ರಾಮಮಂದಿರ ಪ್ರಸಾದ್ ಬುಕ್ಕಿಂಗ್ ತಡೆಹಿಡಿಯಲಾಗಿದೆ
ಸದ್ಯಕ್ಕೆ ಬುಕ್ಕಿಂಗ್ ಬಂದ್: ಭಾರಿ ಬೇಡಿಕೆಯಿಂದಾಗಿ ಖಾದಿ ಆರ್ಗ್ಯಾನಿಕ್ ಪ್ರಸಾದ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಬುಕಿಂಗ್ ವಿಂಡೋ ಶೀಘ್ರದಲ್ಲೇ ಮತ್ತೆ ತೆರೆಯುತ್ತದೆ ಎಂದು ವೆಬ್‌ಸೈಟ್ ತಿಳಿಸಿದೆ. ಉಚಿತ ಪ್ರಸಾದ, ಹಣದ ವಿತರಣೆ: ಪ್ರಸಾದವನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ವಿತರಣಾ ಶುಲ್ಕ 51 ರೂ. ನ್ನು ವಿಧಿಸಲಾಗುತ್ತದೆ.

ನಿರ್ದಿಷ್ಟ ವಿತರಣಾ ದಿನಾಂಕವಿಲ್ಲ: ಪ್ರಸಾದದ ನಿಖರವಾದ ವಿತರಣಾ ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಆದರೆ, ಜನವರಿ 22, 2024ರಂದು ಪವಿತ್ರೀಕರಣ ಸಮಾರಂಭದ ಪ್ರಸಾದ ವಿತರಣೆಯಾಗುವ ನಿರೀಕ್ಷೆಯಿದೆ.

ನಕಲಿ ವೆಬ್‌ಸೈಟ್ ಬಗ್ಗೆ ಎಚ್ಚರದಿಂದಿರಿ: ಯಾವುದೇ ವೆಬ್‌ಸೈಟ್ ಅಥವಾ ಅನಧಿಕೃತ ಖಾದಿ ಆರ್ಗ್ಯಾನಿಕ್ ಚಾನೆಲ್‌ ಪ್ರಸಾದ ವಿತರಿಸುವ ಬಗ್ಗೆ ಹೇಳಿಕೊಂಡರರ ಜಾಗರೂಕರಾಗಿರಿ. ಇದು ಹಣವನ್ನು ಗಳಿಸುವ ಕೆಟ್ಟ ದಾರಿಯಾಗಿರಬಹುದು. ಕೇವಲ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮಮಂದಿರ ನಿರ್ಮಾಣದ ಆಡಳಿತ ನಡೆಸುವ ಅಧಿಕೃತ ಸಂಸ್ಥೆ, ಖಾದಿ ಆರ್ಗ್ಯಾನಿಕ್, ಖಾದಿ ಇಂಡಿಯಾ ಆನ್‌ಲೈನ್ ಬುಕಿಂಗ್ ಮತ್ತು ಪ್ರಸಾದ ವಿತರಣೆಯನ್ನು ನಿರ್ವಹಿಸುತ್ತಿದೆ.