ತುಳಸಿಯನ್ನು ಪೂಜಿಸಲು ಏಕಾದಶಿಯ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ, ಯಾವುದೇ ಏಕಾದಶಿಯಂದು ತುಳಸಿಯನ್ನು ಪೂಜಿಸುವುದರಿಂದ ತೊಂದರೆಗಳು ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. 

ತುಳಸಿಯನ್ನು ಪೂಜಿಸಲು ಏಕಾದಶಿಯ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ, ಯಾವುದೇ ಏಕಾದಶಿಯಂದು ತುಳಸಿಯನ್ನು ಪೂಜಿಸುವುದರಿಂದ ತೊಂದರೆಗಳು ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ದೇವಶಯನಿ ಏಕಾದಶಿಯನ್ನು ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಇದನ್ನು ಹರಿಶಯನಿ ಏಕಾದಶಿ, ಪದ್ಮ ಏಕಾದಶಿ ಮತ್ತು ಆಷಾಧಿ ಏಕಾದಶಿ ಎಂದೂ ಕರೆಯುತ್ತಾರೆ. ದೇವಶಯನಿ ಏಕಾದಶಿಯ ದಿನದಂದು ತುಳಸಿ ಪೂಜೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಕೆಲಸಗಳನ್ನು ಮಾಡಿದರೆ ಭಕ್ತರಿಗೆ ವಿಶೇಷ ಫಲ ದೊರೆಯುತ್ತದೆ. 

Add Asianetnews Kannada as a Preferred SourcegooglePreferred

ದೇವಶಯನಿ ಏಕಾದಶಿ ದಿನಾಂಕ
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ದಿನ ವಿಷ್ಣುವು ಯೋಗನಿದ್ರೆಗೆ ಜಾರುವ ದಿನ. ಪ್ರಾಪಂಚಿಕ ಕೆಲಸಗಳಿಂದ 4 ತಿಂಗಳ ಕಾಲ ರಜೆ ತೆಗೆದುಕೊಂಡು ಯೋಗನಿದ್ರೆಯಲ್ಲಿ ಸಮಯ ಕಳೆಯಲು ತೊಡಗುವ ದಿನ. ಈ ವರ್ಷದ ಏಕಾದಶಿ ತಿಥಿ ಗುರುವಾರ, ಜೂನ್ 29 ರಂದು 03:18ಕ್ಕೆ ಪ್ರಾರಂಭವಾಗುತ್ತದೆ ಮತ್ತು ಶುಕ್ರವಾರ, ಜೂನ್ 30 ರಂದು 02:42ಕ್ಕೆ ಕೊನೆಗೊಳ್ಳುತ್ತದೆ. ದೇವಶಯನಿ ಏಕಾದಶಿಯ ಉಪವಾಸವನ್ನು ಜೂನ್ 29 ರ ಗುರುವಾರ ಆಚರಿಸಲಾಗುತ್ತದೆ. ಈ ದಿನದ ಉಪವಾಸವು ಅತ್ಯಂತ ಫಲಪ್ರದವಾಗಿದ್ದು, ತುಳಸಿಯನ್ನು ಪೂಜಿಸುವುದರಿಂದ ಎಲ್ಲರೂ ಐಶ್ವರ್ಯದ ಅನುಗ್ರಹವನ್ನು ಪಡೆಯುತ್ತಾರೆ.

ಇವರು ಬೆಕ್ಕು-ನಾಯಿಯಂತೆ ಕಚ್ಚಾಡೋ ಗಂಡ-ಹೆಂಡತಿ; ಇದು ಯಾವ ರಾಶಿಯವರ ದೋಷ ಗೊತ್ತಾ?

ಏಕಾದಶಿಯಂದು ಈ ಕೆಲಸ ಮಾಡಿ..
ಏಕಾದಶಿಯ ದಿನ ಶುದ್ಧ ಮನಸ್ಸಿನಿಂದ ಪೂಜೆ ಮಾಡಬೇಕು, ಈ ದಿನ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪ್ರತಿದಿನವೂ ಸ್ವಚ್ಛತೆ ಅವಶ್ಯವಾದರೂ ಏಕಾದಶಿಯ ದಿನದಂದು ತುಳಸಿಯ ಸುತ್ತ ಯಾವುದೇ ಕೊಳಕು ಇರಬಾರದು. ಇದಲ್ಲದೆ, ತುಳಸಿ ಬಳಿ ಚಪ್ಪಲಿ ಮತ್ತು ಬೂಟುಗಳನ್ನು ಇಡುವುದನ್ನು ತಪ್ಪಿಸಬೇಕು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ತುಳಸಿಯನ್ನು ಅಲಂಕಾರದ ವಸ್ತುಗಳಿಂದ ಅಲಂಕರಿಸಬೇಕು ಮತ್ತು ಅವಳ ಮೇಲೆ ಧೂಪದ್ರವ್ಯ, ಸುಗಂಧ ಇತ್ಯಾದಿಗಳನ್ನು ಅರ್ಪಿಸಬೇಕು. ಬೆಳಿಗ್ಗೆ ಸ್ನಾನದ ನಂತರ ತುಳಸಿಗೆ ನೀರನ್ನು ಅರ್ಪಿಸಬೇಕು ಮತ್ತು ತುಳಸಿಗೆ ಪ್ರದಕ್ಷಿಣೆ ಮಾಡಬೇಕು. ದೇವಶಯನಿ ಏಕಾದಶಿಯ ದಿನದಂದು, ತುಳಸಿಯನ್ನು ಭಗವಾನ್ ಶ್ರೀ ಹರಿ ನಾರಾಯಣನಿಗೆ ಪ್ರಸಾದ ಮತ್ತು ಭೋಗ್ ಜೊತೆಗೆ ಅರ್ಪಿಸಬೇಕು.

ಲಕ್ಷ್ಮಿಯ ನಿರ್ಜಲ ಉಪವಾಸ
ಹಿಂದೂ ಧರ್ಮದಲ್ಲಿ, ಪ್ರತಿ ಮನೆಯಲ್ಲೂ ತುಳಸಿಯ ಉಪಸ್ಥಿತಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಇದರೊಂದಿಗೆ ತಾಯಿ ಲಕ್ಷ್ಮಿ ಕೂಡ ಈ ದಿನ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ. ಈ ಕಾರಣಕ್ಕಾಗಿ, ದೇವಶಯನಿ ಏಕಾದಶಿಯ ದಿನದಂದು ತುಳಸಿಯ ಮೇಲೆ ದೀಪವನ್ನು ಬೆಳಗಿಸಬೇಕು. ಈ ದಿನದಂದು ತುಳಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ಶುಭವು ನೆಲೆಸುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ಕೊನೆಗೊಳ್ಳುತ್ತವೆ. ಸಂತೋಷ ಮತ್ತು ಸಮೃದ್ಧಿ ಮನೆಗೆ ಬರುತ್ತವೆ.

Sawan 2023: ಶ್ರಾವಣದಲ್ಲಿ ಹುಟ್ಟಿದವರ ಮೇಲೆ ಸದಾ ಇರಲಿದೆ ಶಿವಕೃಪೆ

ತುಳಸಿಯನ್ನು ವಿಷ್ಣುವಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ತಾಯಿ ಲಕ್ಷ್ಮಿಯೂ ತುಳಸಿಯನ್ನು ಪೂಜಿಸುತ್ತಾರೆ. ಏಕಾದಶಿಯ ದಿನ ತುಳಸಿ ಎಲೆಗಳನ್ನು ಕೀಳಬಾರದು ಎಂದು ಹೇಳಲಾಗುತ್ತದೆ. ತುಳಸಿ ಎಲೆಗಳನ್ನು ಬಳಸಬೇಕಾದರೆ, ಅದರ ಎಲೆಗಳನ್ನು ಮೊದಲೇ ಕಿತ್ತುಕೊಳ್ಳಬೇಕು. ಈ ದಿನದಂದು ತುಳಸಿಯನ್ನು ಪೂಜಿಸುವುದು ಅತ್ಯಂತ ಮಂಗಳಕರ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.