Budh Pradosh Vratದಂದು ಈ ಕೆಲಸ ಮಾಡುವುದರಿಂದ ಜಾತಕದಲ್ಲಿ ಬಲವಾಗುತ್ತಾನೆ ಬುಧ
ಮೇ ತಿಂಗಳ ಎರಡನೇ ಪ್ರದೋಷ ವ್ರತ ಬುಧ ಪ್ರದೋಷ ವ್ರತವಾಗಿದ್ದು, ಈ ದಿನದ ಪೂಜೆಯು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಜ್ಯೇಷ್ಠ ಮಾಸದ ಮೊದಲ ಪ್ರದೋಷ ಉಪವಾಸ ಅಂದರೆ ಕೃಷ್ಣ ಪಕ್ಷದ ತ್ರಯೋದಶಿ ಮೇ 17, ಬುಧವಾರದಂದು ಬರುತ್ತದೆ. ಪ್ರದೋಷ ಕಾಲದಲ್ಲಿ ಬುಧವಾರದಂದು ಈ ಉಪವಾಸವನ್ನು ಮಾಡುವುದರಿಂದ ಈ ಉಪವಾಸವನ್ನು ಬುಧ ಪ್ರದೋಷ ಎಂದು ಕರೆಯುತ್ತಾರೆ. ಈ ದಿನದಂದು ಶಿವ, ತಾಯಿ ಪಾರ್ವತಿ, ಕಾರ್ತಿಕೇಯ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ತ್ರಯೋದಶಿಯ ದಿನ, ಪ್ರದೋಷ ಕಾಲದಲ್ಲಿ ಶಿವನ ಕುಟುಂಬದ ಆರಾಧನೆಯಿಂದ ಎಲ್ಲ ರೀತಿಯ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಪ್ರದೋಷ ವ್ರತ ಯಾವಾಗ?
ಪಂಚಾಂಗದ ಪ್ರಕಾರ, ಮೇ ತಿಂಗಳ ಎರಡನೇ ಪ್ರದೋಷ ವ್ರತವನ್ನು ಮೇ 17ರಂದು ಆಚರಿಸಲಾಗುತ್ತದೆ. ಈ ತಿಥಿಯು ಮೇ 16 ರಂದು ರಾತ್ರಿ 11.36 ರಿಂದ ಪ್ರಾರಂಭವಾಗುತ್ತದೆ ಮತ್ತು ಈ ದಿನಾಂಕವು ಮೇ 17 ರಂದು ರಾತ್ರಿ 10.28 ಕ್ಕೆ ಕೊನೆಗೊಳ್ಳುತ್ತದೆ. ಈ ದಿನ ಪ್ರದೋಷ ಕಾಲದಲ್ಲಿ ಪೂಜೆ ಇರುವುದರಿಂದ ಮತ್ತು ಮೇ 16ರ ಬುಧವಾರದಂದು ಪ್ರದೋಷ ಕಾಲದ ನಂತರ (45 ನಿಮಿಷಗಳ ಮೊದಲು ಮತ್ತು 45 ನಿಮಿಷ ಸೂರ್ಯೋದಯದ ನಂತರ) ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಆದ್ದರಿಂದ ಮೇ 17ರಂದು ಉಪವಾಸವನ್ನು ಆಚರಿಸಲಾಗುತ್ತದೆ.
Shani Jayanti 2023ರಂದು 3 ಯೋಗಗಳ ಸಂಯೋಗ, 3 ರಾಶಿಗಳಿಗೆ ಸುಯೋಗ!
ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಾನ್ ಶಿವ, ತಾಯಿ ಪಾರ್ವತಿ, ಅವರ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರನ್ನು ಪ್ರದೋಷ ವ್ರತದ ದಿನದಂದು ಪೂಜಿಸಲಾಗುತ್ತದೆ. ಈ ಪೂಜೆಯಿಂದ ಅನೇಕ ಶುಭ ಫಲಗಳು ಲಭಿಸುತ್ತವೆ, ಮನೆಯಲ್ಲಿ ಸುಖ, ಸಮೃದ್ಧಿ ಬರುತ್ತದೆ. ಈ ವ್ರತವನ್ನು ಆಚರಿಸುವ ಸ್ತ್ರೀಯರ ಮದುವೆಯು ಮುರಿಯದೆ ಉಳಿಯುತ್ತದೆ.
ಪ್ರದೋಷ ವ್ರತ ಪೂಜಾ ವಿಧಿ
1. ಪ್ರದೋಷ ವ್ರತದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ದೇವರ ಕೋಣೆ ಸ್ವಚ್ಛಗೊಳಿಸಿ.
2. ಇದರ ನಂತರ, ಮನೆಯ ದೇವಸ್ಥಾನದಲ್ಲಿ ದೀಪವನ್ನು ಬೆಳಗಿಸಿ, ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿ.
3. ಶಿವನಿಗೆ ಹೂವು, ಬೇಲ್ಪತ್ರ ಧಾತುರವನ್ನು ಅರ್ಪಿಸಿ, ಮತ್ತು ಅವನನ್ನು ಪೂಜಿಸಿ.
4. ಗಣೇಶ ಮತ್ತು ತಾಯಿ ಪಾರ್ವತಿ, ಕಾರ್ತಿಕೇಯರನ್ನೂ ಆರಾಧಿಸಿ.
5. ಭಗವಾನ್ ಶಿವನಿಗೆ ನೈವೇದ್ಯ ಅರ್ಪಿಸಿ.
3. ನಂತರ ದಿನವಿಡೀ ಉಪವಾಸವನ್ನು ಆಚರಿಸಿ ಮತ್ತು ಪ್ರದೋಷ ಕಾಲದಲ್ಲಿ ಶಿವ ಮತ್ತು ತಾಯಿ ಪಾರ್ವತಿಯನ್ನು ಸಂಜೆ ಪೂಜಿಸಬೇಕು.
ಯಾರಾಗ್ತಾರೆ ಸಿಎಂ? ನಿಜವಾಗುತ್ತಾ ಮೈಲಾರಲಿಂಗೇಶ್ವರನ ಭವಿಷ್ಯವಾಣಿ?
ಬುಧನನ್ನು ಬಲಪಡಿಸಿ
1. ಬುಧ ಪ್ರದೋಷದ ದಿನದಂದು ಕೆಲವು ಸರಳ ಕ್ರಮಗಳಿಂದ ಜಾತಕದಲ್ಲಿ ಬುಧವನ್ನು ಸಹ ಬಲಪಡಿಸಬಹುದು. ಈ ದಿನ ಓಂ ಬ್ರಾಂ ಬ್ರಿಂ ಬ್ರಾಂ ಸಃ ಬುಧಾಯ ನಮಃ ಮಂತ್ರವನ್ನು ಪಠಿಸುವುದರಿಂದ ಜಾತಕದಲ್ಲಿ ಬುಧ ಗ್ರಹವು ಬಲಶಾಲಿಯಾಗುತ್ತದೆ.
2. ಈ ದಿನ ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದರಿಂದಲೂ ಬುಧ ಗ್ರಹ ಬಲಶಾಲಿಯಾಗುತ್ತಾನೆ. ಈ ದಿನ ಸಿಪ್ಪೆಯಿಲ್ಲದ ಬೇಳೆಯನ್ನು ದಾನ ಮಾಡುವುದರಿಂದ ಶಿವನ ಆಶೀರ್ವಾದವೂ ದೊರೆಯುತ್ತದೆ.
ಈ ಕೆಲಸ ಮಾಡಬೇಡಿ
1. ಪ್ರದೋಷ ವ್ರತದ ದಿನದಂದು ತಪ್ಪಾಗಿಯೂ ಯಾರೊಂದಿಗೂ ಜಗಳವಾಡಬೇಡಿ ಅಥವಾ ವಿವಾದ ಮಾಡಿಕೊಳ್ಳಬೇಡಿ.
2. ಉಪವಾಸವನ್ನು ಆಚರಿಸುವ ಜನರು ಇತರರ ಬಗ್ಗೆ ಕೆಟ್ಟ ಭಾವನೆಗಳನ್ನು ಹೊಂದಿರಬಾರದು.
3. ಬೆಳ್ಳುಳ್ಳಿ, ಈರುಳ್ಳಿ, ಮಾಂಸ ಮತ್ತು ಮದ್ಯದಂತಹ ತಾಮಸಿಕ ವಸ್ತುಗಳನ್ನು ಸೇವಿಸಬಾರದು.
4. ಪ್ರದೋಷ ವ್ರತದ ದಿನದಂದು ಹಗಲಿನಲ್ಲಿ ಮಲಗಬೇಡಿ ಮತ್ತು ಗರಿಷ್ಠ ಸಮಯವನ್ನು ಶಿವನ ಧ್ಯಾನದಲ್ಲಿ ಕಳೆಯಿರಿ.
5. ಪ್ರದೋಷ ವ್ರತವನ್ನು ಆಚರಿಸುವ ಜನರು ಕಳ್ಳತನ, ಸುಳ್ಳು ಮತ್ತು ಹಿಂಸೆಯಿಂದ ದೂರವಿರಬೇಕು.
6. ಪ್ರದೋಷ ವ್ರತದ ದಿನದಂದು ಮಹಿಳೆಯರು ಶಿವಲಿಂಗವನ್ನು ಮುಟ್ಟಬಾರದು. ಈ ರೀತಿ ಮಾಡುವುದರಿಂದ ತಾಯಿ ಪಾರ್ವತಿ ಕೋಪಗೊಳ್ಳಬಹುದು.
7. ತುಳಸಿ ಎಲೆಗಳು, ಕೇತಕಿ ಹೂವುಗಳು, ಕುಂಕುಮ, ತೆಂಗಿನ ನೀರು ಶಿವನಿಗೆ ಅರ್ಪಿಸಬಾರದು.
8. ಪ್ರದೋಷ ವ್ರತದ ದಿನ ಕಪ್ಪು ಬಟ್ಟೆಯ ಬದಲು ಹಳದಿ ಬಟ್ಟೆಯನ್ನು ಧರಿಸಬೇಕು.