Asianet Suvarna News Asianet Suvarna News

Fact Check: ಲಾಕ್‌ಡೌನ್ ಸಂಕಷ್ಟದಲ್ಲಿರುವ ಬಡವರಿಗೆ ಕೇಂದ್ರದಿಂದ 50 ಸಾವಿರ ರೂ?

ಕೊರೋನಾ ವೈರಸ್‌ ಉಂಟುಮಾಡಿರುವ ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಒಳಗಾಗಿರುವ ದೇಶದ ಬಡ ಜನರಿಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿ ಮಾಡಿ, 50,000 ರುಪಾಯಿ ಸಹಾಯಧನ ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಅಸಲಿಯತ್ತು? 

fact check of govt launched scheme for Rs 50000 for poor
Author
Bengaluru, First Published May 4, 2020, 9:33 AM IST

ಕೊರೋನಾ ವೈರಸ್‌ ಉಂಟುಮಾಡಿರುವ ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಒಳಗಾಗಿರುವ ದೇಶದ ಬಡ ಜನರಿಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿ ಮಾಡಿ, 50,000 ರುಪಾಯಿ ಸಹಾಯಧನ ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Fact Check : ನಿರಾಶ್ರಿತರ ಊಟಕ್ಕೆ ಉಗುಳಿದ್ದು ನಿಜನಾ?

ವೆಬ್‌ಸೈಟ್‌ವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅದರಲ್ಲಿ, ‘ ರಾಷ್ಟ್ರೀಯ ಶಿಕ್ಷಿತ್‌ ಬೇರೋಜ್‌ಗಾರ್‌ ಯೋಜನೆ’ ಅಡಿಯಲ್ಲಿ ಕೇಂದ್ರ ಸರ್ಕಾರ ಪಡಿತರ ಚೀಟಿ ಹೊಂದಿರುವ ಬಡ ಜನರಿಗೆ 50,000 ರು. ಸಹಾಯಧನ ನೀಡುತ್ತಿದೆ. ವಿಶ್ವ ಬ್ಯಾಂಕ್‌ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ಮೊದಲ 40,000 ಅರ್ಜಿದಾರರು ಮಾತ್ರ ಇದರ ಫಲಾನುಭವಿಗಳಾಗಬಹುದು. ಈ ಹಣವನ್ನು ಆನ್‌ಲೈನ್‌ ಮುಖಾಂತರ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ ಅರ್ಜಿದಾರರು ವೈಯಕ್ತಿಕ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಭರ್ತಿ ಮಾಡಿ, 250 ಶುಲ್ಕ ಪಾವತಿಸಬೇಕು’ ಎಂದಿದೆ.

fact check of govt launched scheme for Rs 50000 for poor

ಈ ಸಂದೇಶವೀಗ ವೈರಲ್‌ ಆಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ, ‘ಇಂತಹ ಯಾವುದೇ ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ ಹಣ ಹಾಗೂ ವೈಯಕ್ತಿಕ ಮಾಹಿತಿಯನ್ನು ಕೇಳುವ ಇಂಥ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ಹೇಳಿದೆ. ಪಿಐಬಿ ಸ್ಪಷ್ಟನೆ ಬಳಿಕ ನಕಲಿ ವೆಬ್‌ಸೈಟ್‌ ನಿಷ್ಕ್ರಿಯವಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಬಡವರಿಗೆ 50000 ರು. ನೀಡುತ್ತಿದೆ ಎಂಬ ಸುದ್ದಿ ಸುಳ್ಳು.

 

 

- ವೈರಲ್ ಚೆಕ್  

Follow Us:
Download App:
  • android
  • ios