Asianet Suvarna News Asianet Suvarna News

ಏಪ್ರಿಲ್ 15ರಿಂದ 'ಬಯಸದೆ ಬಳಿ ಬಂದೆ'!

ಶ್ರೀ ಮಹತಿ ಕಂಬೈನ್ಸ್ ನಿರ್ಮಿಸುತ್ತಿರುವ ಬಯಸದೆ ಬಳಿ ಬಂದೆ ಧಾರಾವಾಹಿಯ ನಿರ್ದೇಶಕ ದೇವಾನಂದ್. ಶೀರ್ಷಿಕೆ ಗೀತೆಗೆ ವಾಸುಕಿ ವೈಭವ್ ಅವರ ಸಂಗೀತವಿದೆ. ಹರ ಹರ ಮಾಹಾದೇವ ಧಾರಾವಾಹಿ ಖ್ಯಾತಿಯ ವಿನಯ್ ಗೌಡ, ಹಲವು ವರ್ಷಗಳ ಬಳಿಕ, ಪೌರಾಣಿಕವಲ್ಲದ ಇಂದಿನ ದಿನದ ಸ್ಟೈಲಿಷ್ ಯುವಕನ ಪಾತ್ರ ಮಾಡುತ್ತಿದ್ದಾರೆ, ಚಲನಚಿತ್ರ ನಿರ್ಮಾಪಕ ಜೀವ ಪಾತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ, ಇವರಿಗೆ ಜೊತೆಯಾಗಿ ನಟಿ ರಕ್ಷಾ ಹೊಳ್ಳ ‘ಮಿಲನ’ ಧಾರಾವಾಹಿಯ ಬಳಿಕ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬಯಸದೆ ಬಳಿ ಬಂದೆ ಇವರಿಬ್ಬರ ಜೀವನ -ಕಾವ್ಯದ ಕತೆ.

star suvarna Bayasade bali bande serial starts from april 15th
Author
Bengaluru, First Published Apr 15, 2019, 9:08 AM IST

ಅದೊಂದು ಸುಂದರ ಕಲಾಕ್ಷೇತ್ರ, ಅದರ ಒಡತಿ ನಾಟ್ಯ ವಿಶಾರದೆ ಮೀನಾಕ್ಷಿ, ಅವರಿಗೆ ಮೂವರು ಹೆಣ್ಣು ಮಕ್ಕಳು. ಮೊದಲನೇ ಮಗಳು ಕಾವ್ಯ, ತನ್ನ ಸಮಾಜ ಮತ್ತು ಕುಟುಂಬದ ನ್ಯಾಯಕ್ಕಾಗಿ ಹೋರಾಡುವ ವಕೀಲೆ. ಜೀವ, ಕನ್ನಡ ಚಲನಚಿತ್ರಗಳ ಯಶಸ್ವಿ ನಿರ್ಮಾಪಕ. ತನ್ನ ‘ಜೀವ ನಿರ್ಮಾಣ ಸಂಸ್ಥೆ’ ಮುಖಾಂತರ ಸದಭಿರುಚಿಯ ಕನ್ನಡ ಚಿತ್ರಗಳನ್ನು ನೀಡಬೇಕು ಎನ್ನುವುದೊಂದೇ ಇವನ ಧ್ಯೇಯ. ಇವರಿಬ್ಬರು ಸಂದರ್ಭಗಳ ಕೈಸೆರೆಯಾಗಿ ಬಯಸದೆ ಬಳಿ ಬಂದಾಗ, ಜೀವನದಲ್ಲಿ ಉಂಟಾಗುವ ತಿರುವುಗಳೇ ಧಾರಾವಾಹಿಯ ಕಥೆ.

ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲಿ ನನ್ನದು ಜವಬ್ದಾರಿಯುತ ವಕೀಲೆ, ಕಾವ್ಯ ಪಾತ್ರ. ನಾನು ಇದುವರೆಗೆ ಮಾಡಿರುವ ಎಲ್ಲ ಪಾತ್ರಗಳಿಗಿಂತ ವಿಭಿನ್ನವಾಗಿರುವುದರಿಂದ ಇದು ಮನಸ್ಸಿಗೆ ತುಂಬ ಇಷ್ಟವಾಗಿರುವ ರೋಲ್. ನನ್ನ ವೃತ್ತಿ ಜೀವನ ಪ್ರಾರಂಭಿಸಿದ್ದೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗ ಕಂಬ್ಯಾಕ್ ಮಾಡಿರುವುದು ನನಗೆ ಸಂತೋಷ ಮತ್ತು ಹೆಮ್ಮೆ ತಂದಿದೆ.- ರಕ್ಷಾ ಹೊಳ್ಳ ನಾಯಕ ನಟಿ

ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲಿ ಶ್ವೇತಾ ರಾವ್, ಮೈಸೂರು ಮಾಲತಿ, ಭಾಗ್ಯ, ಅನಿರುದ್ಧ, ಸುನೀಲ್ ಸಾಗರ್, ವಿಕಾಸ್ ಮತ್ತು ಶೋಭಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋಗಳು ಸಾಮಾಜಿಕ ತಾಣಗಳಲ್ಲಿ ಜನರ ಮೆಚ್ಚುಗೆ ಗಳಿಸಿವೆ. ರೋಲ್ಸ್ ರಾಯ್ಸ್ ಕಾರಿನಲ್ಲಿ ಬರುವ ನಾಯಕನಿಗೆ ಕಾಲ್ನಡಿಗೆಯಲ್ಲಿ ಓಡಾಡುವ ನಾಯಕಿ ಜೊತೆಯಾದಾಗ ಇವರಿಬ್ಬರ ಜೀವನ ಒಂದಾಗಲು ಹೇಗೆ ಸಾಧ್ಯ ಎನ್ನುವುದನ್ನು ಏಪ್ರಿಲ್ ೧೫ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ನೋಡಿ.

ನಾನು ಜೀವ ಎಂಬ ಸಿನಿಮಾ ನಿರ್ಮಾಪಕನ ಪಾತ್ರ ಮಾಡುತ್ತಿದ್ದೇನೆ. ಘನತೆ ಮತ್ತುಗತ್ತು ಇರುವ ಕ್ಯಾರೆಕ್ಟರ್ ಅವನದು. ಈ ಹಿಂದೆ ನಾನು ಹರ ಹರ ಮಹದೇವನ ಪಾತ್ರ ಮಾಡುವಾಗ ಶಿಸ್ತು, ಸಂಯಮ ಮತ್ತು ಶ್ರಮ ಬಹಳ ಮುಖ್ಯವಾಗಿತ್ತು, ಆ ರೀತಿ ಕಲಿಕೆಗೆ ಅವಕಾಶ ಕೊಟ್ಟ ಸ್ಟಾರ್ ಸುವರ್ಣ ವಾಹಿನಿಗೆ ಥ್ಯಾಂಕ್ಸ್. ಅಂತಹ ಪಾತ್ರ ಮಾಡಿದಮೇಲೆ, ಉಳಿದ ಎಲ್ಲಾ ಪಾತ್ರಗಳು ಸುಲಭ ಅನಿಸುತ್ತೆ. ಸ್ಟಾರ್ ಸುವರ್ಣ ವಾಹಿನಿ ನನ್ನ ಮನೆಯಿದ್ದಂತೆ. ಎಲ್ಲೆಡೆ ಸುತ್ತಾಡಿ, ಸಾಹಸ ಮತ್ತು ಸಾಧನೆ ಮಾಡಿ ನನ್ನವರ ಬಳಿಗೆ ಮರಳಿದ್ದೇನೆ ಅಷ್ಟೇ - ವಿನಯ್ ಗೌಡ ನಾಯಕ ನಟ

 

Follow Us:
Download App:
  • android
  • ios