'ಮಮ್ಮಿ' ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ 'ಗೊಂಬೆಗಳ ಲವ್' ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ.. ಇದನ್ನ ತಿಳಿಸಿದ ಕ್ರಿಯೇಟಿವ್ ಹೆಡ್ ರಾಜವರ್ಧನ್ ,ಎರಡು ವರ್ಷದ ಹಿಂದೆ ಯೋಜನೆಗೊಂಡ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣವನ್ನ ಉಳಿಸಿಕೊಂಡಿದ್ದು, ಬೇರೆ ಎಲ್ಲಾ..

ಎನ್ ಚೆಲುವರಾಯ ಸ್ವಾಮಿ ಅರ್ಪಿಸುವ, ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಾಣದ, ರಾಜವರ್ಧನ್ (Barnswallow Company) ಸಹ ನಿರ್ಮಾಣದ ಸಚಿನ್ ಚೆಲುವರಾಯ ಸ್ವಾಮಿ (Sachin Cheluvarayaswamy) ಅಭಿನಯದ ಚಿತ್ರವೇ ಈ ಕಮಲ್ ಶ್ರೀದೇವಿ. ಸಚಿನ್ ಚಲುವರಾಯಸ್ವಾಮಿ ನಟನೆಯ ಈ (Kamal Sridevi) ಚಿತ್ರದಲ್ಲಿ ನಟ ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವೇ ಇದೆ. ಈ ಚಿತ್ರವನ್ನ ವಿಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.

'ಕಮಲ್ ಶ್ರೀದೇವಿ' ಅನ್ನೋ ಲೆಂಜಡರಿ ಜೋಡಿಯ ಹೆಸರಿಟ್ಟು , ಸಾಂಕೇತಿಕವಾಗಿ ಹಲವು ಆಯಾಮಗನ್ನ ಸೂಚಿಸೋ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹಲವು ಪ್ರಶ್ನೆಗಳ‌ ಜೊತೆಗೆ ಬಹಳಷ್ಟು ಕಾತುಕ ಹುಟ್ಟಿಸಿದೆ‌. ಅಲ್ಲದೆ ಟೈಟಲ್ ಕೆಳಗೆ ಅಡಿ ಬರಹವಾಗಿ ಬರೆದಿರೋ ಕೇಸ್ ನಂಬರ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾನಾ..? ಒಂದು ಹೆಣ್ಣಿನ ತಲೆಯನ್ನ ಪಾರಿವಾಳಗಳಿಂದ ಡಿಸೈನ್ ನಾಡಿ ಮೈಗೆ ಹಾವು, ಗೂಬೆ, ಕಾಗೆ, ಊಸರವಳ್ಳಿ, ನರಿ ಹೀಗೆ ಪ್ರಾಣಿಗಳು ಸುತ್ತಿಕೊಂಡಿರುವುದು

ಚರ್ಚೆಗೆ ಗ್ರಾಸವಾಗಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ಪ್ರಸ್ತುತ ನಟ ಕಮಲ್ ಹಾಸನ್ ಹೆಸರು ಕನ್ನಡಿಗರಿಗೆ ಕೆಂಡವಾಗಿರುವ ಹೊತ್ತಲ್ಲಿ, ಈ ಟೈಟಲ್ ಯಾಕೆ ಅನ್ನೋ ಪ್ರಶ್ನೆ ಉದ್ಭವಿಸಿದೆ. ಆದರೆ, ಈ ಚಿತ್ರವು ಸೆಟ್ಟೇರಿದ್ದು ಎರಡು ವರ್ಷಗಳ ಹಿಂದೆಯೇ ಆಗಿದೆ. ಜೊತೆಗೆ, ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ದಿಲ್ಲದೇ ಸೆಟ್ಟೇರಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗ್ತಿರೋ ಕಮಲ್ ಶ್ರೀದೇವಿ ಪೋಸ್ಟರ್ ಕಾನ್ಸೆಪ್ಟ್ ಮತ್ತು ಕ್ವಾಲಿಟಿ ನೋಡಿ ಕನ್ನಡ ಉದ್ಯಮದ ಹಲವರು ಹುಬ್ಬೇರಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕವಾಗಿ ಈ ಚಿತ್ರತಂಡ ದೊಡ್ಡ ಭರವಸೆಯನ್ನ ಮೂಡಿಸಿದ್ದು, ಪೋಸ್ಟರ್ ನಷ್ಟೇ ಸಿನಿಮಾನೂ‌ ಗುಣಮಟ್ಟದಲ್ಲಿ ಅಕ್ಕ‌ಪಕ್ಕದವರು ತಿರುಗಿ ನೋಡುವಂತಿದೆಯಂತೆ. ಕನ್ನಡ, ತೆಲುಗು,ತಮಿಳಿನಲ್ಲಿ ಬಿಡುಗಡೆ ಸಜ್ಜಾಗ್ತಿರೋ ಕಮಲ್ ಶ್ರೀದೇವಿ ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿಂದ ಚಿತ್ರದ ಪ್ರಚಾರ ಕಾರ್ಯವನ್ನ ಅಧಿಕೃತವಾಗಿ ಆರಂಭಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ನಾಯಕ ಸಚಿನ್ ಚಲುವರಾಯ ಸ್ವಾಮಿ , ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ಮಾಪಕ ರಾಜವರ್ಧನ್ ,ಹಿರಿಯ ನಟ ಉಮೇಶ್,ಮಿತ್ರ, ರಾಘು ಶಿವಮೊಗ್ಗ,ಅಕ್ಷಿತಾ ಬೋಪಯ್ಯ ನಿರ್ದೇಶಕ ಸುನೀಲ್ , ಛಾಯಾಗ್ರಹಕ ನಾಗೇಶ್ ಆಚಾರ್ಯ ,ಸಂಗೀತ ನಿರ್ದೇಶಕ ಕೀರ್ತನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.

ಈ ಸಿನಿಮಾ ಪ್ರಚಾರ ಶುರುಮಾಡುವ ಹೊತ್ತಿಗೆ ಸರಿಯಾಗಿ ನಟ ಕಮಲ್ ಹಾಸನ್ ಅವರು ಕನ್ನಡಿಗರ ಕೆಂಗಣ್ಣಿಗೆ ಕಾರಣರಾಗಿದ್ದಾರೆ. ಕನ್ನಡ ಭಾಷೆಯನ್ನು ಅವಹೇಳನ ಮಾಡಿ, ಕನ್ನಡಿಗರ ಕ್ಷಮೆ ಕೇಳದೇ ಇರುವ ನಟ ಕಮಲ್ ಹಾಸನ್ ಹೆಸರಿಟ್ಟಿರುವುದು ಈಗ ಈ ಚಿತ್ರತಂಡವು ಕ್ಲಾರಿಟಿ ಕೊಡಬೇಕಾದ ಅಗತ್ಯವನ್ನು ಸೃಷ್ಟಿಮಾಡಿದೆ.

ಆದ್ದರಿಂದ, ಈ ಟೀಮ್ 'ಕಮಲ್-ಶ್ರೀದೇವಿ' ಚಿತ್ರಕ್ಕೂ 'ಇತ್ತೀಚಿನ ವಿವಾದ'ಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ. ಇದೀಗ 'ಕಾನ್ಸೆಪ್ಟ್ ಪೋಸ್ಟರ್' ರಿಲೀಸ್ ಮಾಡಿ, ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡ ಚಿತ್ರತಂಡದ ಸದಸ್ಯರು ಪರಸ್ಪರ ಕೆಲಸಗಳನ್ನ ಗೌರವಿಸೋದರ ಜೊತೆಗೆ ಪ್ರಶಂಸೆಯನ್ನ ಸಹ ವ್ಯಕ್ತಪಡಿಸಿದ್ದಾರೆ.

'ಮಮ್ಮಿ' ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ 'ಗೊಂಬೆಗಳ ಲವ್' ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ.. ಇದನ್ನ ತಿಳಿಸಿದ ಕ್ರಿಯೇಟಿವ್ ಹೆಡ್ ರಾಜವರ್ಧನ್ ,ಎರಡು ವರ್ಷದ ಹಿಂದೆ ಯೋಜನೆಗೊಂಡ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣವನ್ನ ಉಳಿಸಿಕೊಂಡಿದ್ದು, ಬೇರೆ ಎಲ್ಲಾ ಕೆಲಸಗಳನ್ನ ಮುಗಿಸಿಕೊಂಡಿದೆ. ಇದೇ ವರ್ಷ ತೆರೆಗೆ ಬರೋದಾಗಿ ಖಚಿತ ಪಡಿಸಿದ್ದಾರೆ. ಯಾವಾಗ ರಿಲೀಸ್ ಎಂಬುದೂ ಸೇರಿದಂತೆ ಮಿಕ್ಕ ಮಾಹಿತಿಗಳನ್ನು ಚಿತ್ರತಂಡ ಆದಷ್ಟು ಬೇಗ ಅನೌನ್ಸ್ ಮಾಡಲಿದೆಯಂತೆ.