Asianet Suvarna News Asianet Suvarna News

ಅಣ್ಣಾವ್ರ ಕುಟುಂಬದ ಆಸ್ತಿ ಹಂಚಿಕೆಯಾಯ್ತಾ..?

ತಾಳವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದು ನಿಜ, ಆಸ್ತಿ ಪಾಲು ಮಾಡಿಕೊಳ್ಳಲು ಅಲ್ಲ. ನಮ್ಮ ಮಧ್ಯೆ ಯಾವುದೇ ತೊಂದರೆ ಇಲ್ಲ. ಒಗ್ಗಟ್ಟಿನಿಂದಲೇ ಇದ್ದೇವೆ. ಅಷ್ಟೇ ಚೆನ್ನಾಗಿಯೂ ಇದ್ದೇವೆ. ಆಂತಾ ಸುವರ್ಣ ನ್ಯೂಸ್`ಗೆ ಪೋನ್ ಮೂಲಕ ಹೇಳಿಕೆ ಕೊಟ್ಟಿದ್ದಾರೆ ರಾಘವೇಂದ್ರ ರಾಜ್​ ಕುಮಾರ್.

rajkumar property divided in chamarajanagara

ಬೆಂಗಳೂರು(ಅ.17): ಡಾ. ರಾಜ್​ ಕುಮಾರ್ ಮಕ್ಕಳು. ಆಸ್ತಿಯನ್ನ ಹಂಚಿಕೊಂಡಿದ್ದಾರೆ. ಸಮ ಪಾಲು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜ್ ಫ್ಯಾಮಿಲಿ ಡಿವೈಡ್ ಆಗಿದೆ. ಇಂತಹ ಸುದ್ದಿಗಳೂ ಹರಿದಾಡುತ್ತಿವೆ.

ಈ ಒಂದು ಬೆಳವಣಿಗೆಗೆ ಕಾರಣವೂ ಇದೆ. ಗಾಂಧಿನಗರದ ವಜ್ರೇಶ್ವರಿ ಆಫೀಸ್ ರಿನೋವೇಷನ್ ನಡೆಯುತ್ತಿದೆ. ಅದಕ್ಕೆ ಈ ಮಾತು ಕೇಳಿಬರುತ್ತಾ ಇದೆ. ಇಂದು ತಾಳವಾಡಿಯ ಸಬ್ ರಿಜಿಸ್ಟ್ರಾರ್ ಆಫೀಸ್` ಗೂ ಶಿವರಾಜ್​ ಕುಮಾರ್, ರಾಘವೇಂದ್ರ ರಾಜ್​ ಕುಮಾರ್ ಹಾಗೂ ಪುನೀತ್ ರಾಜ್​ ಕುಮಾರ್ ತೆರೆಳಿದ್ದರು. ಇದರಿಂದ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

ಆದರೆ, ರಾಘವೇಂದ್ರ ರಾಜ್ ಕುಮಾರ್ ಹೇಳೊದೇ ಬೇರೆ. ತಾಳವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದು ನಿಜ, ಆಸ್ತಿ ಪಾಲು ಮಾಡಿಕೊಳ್ಳಲು ಅಲ್ಲ. ನಮ್ಮ ಮಧ್ಯೆ ಯಾವುದೇ ತೊಂದರೆ ಇಲ್ಲ. ಒಗ್ಗಟ್ಟಿನಿಂದಲೇ ಇದ್ದೇವೆ. ಅಷ್ಟೇ ಚೆನ್ನಾಗಿಯೂ ಇದ್ದೇವೆ ಆಂತಾ ಸುವರ್ಣ ನ್ಯೂಸ್`ಗೆ ಪೋನ್ ಮೂಲಕ ಹೇಳಿಕೆ ಕೊಟ್ಟಿದ್ದಾರೆ ರಾಘವೇಂದ್ರ ರಾಜ್​ ಕುಮಾರ್.