ಪಡ್ಡೆಹುಲಿ ಚಿತ್ರದಲ್ಲಿ ಸಾಹಸಸಿಂಹನಿಗೆ ಸಲಾಂ!
ಮಗ ನಟಿಸಿದ ಚಿತ್ರದಲ್ಲಿ ತಮ್ಮ ಗುರುಗಳಾದ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಸ್ಯಾಂಡಲ್ವುಡ್ ನಿರ್ಮಾಪಕ ಕೆ.ಮಂಜು ಸ್ಮರಿಸಿದ್ದಾರೆ.
ಕೆ.ಮಂಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಪಡ್ಡೆಹುಲಿ' ಮೂಲಕ ಮಗ ಶ್ರೇಯಸ್ರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹೀರೂನನ್ನು ಪರಚಯಿಸುವ ಹಾಡಿನಲ್ಲಿ ವಿಷ್ಣು ದಾದ ಮಿಂಚಲಿದ್ದಾರೆ.
ಈ ಹಾಡನ್ನು ಫೆಬ್ರವರಿ 2ರಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ವಿಷ್ಣು ಅಭಿಮಾನಿಗಳು ಮಧ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದು.
ಸಾಹಸ ಸಿಂಹನ ಜರ್ನಿಗೊಂದು ರ್ಯಾಪ್ ಸಲಾಂ ಮಾಡಿದ ‘ಪಡ್ಡೆಹುಳಿ’
ಕೆಲವು ದಿನಗಳ ಹಿಂದೆ 'ಪಡ್ಡೆಹುಲಿ' ಚಿತ್ರದಲ್ಲಿರುವ ರ್ಯಾಂಪ್ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಥೇಟ್ 'ನಾಗರಹಾವು' ಚಿತ್ರದ ವಿಷ್ಣು ಗೆಟಪ್ಪಿನಂತೆಯೇ ಶ್ರೇಯಸ್ ನಟಿಸಿದ್ದಾರೆ. ಈ ಹಾಡೂ ಹಿಟ್ ಆಗುತ್ತದೆ. ಚಿತ್ರವೂ 100 ದಿನ ಪೂರೈಸುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ಕನ್ನಡ ಚಿತ್ರಾಭಿಮಾನಿಗಳ ಅಭಿಮತ.