ಅನುಷ್ಕಾ ಜೊತೆ ಅಲ್ಲ ಉದ್ಯಮಿ ಪುತ್ರಿ ಜೊತೆ ಪ್ರಭಾಸ್ ವಿವಾಹ?
ಬಾಹುಬಲಿ ಚಿತ್ರೀಕರಣದ ವೇಳೆಯೇ ಪ್ರಭಾಸ್ಗೆ 60000ಕ್ಕೂ ಹೆಚ್ಚು ಮದುವೆ ಪ್ರಸ್ತಾಪ ಬಂದಿತ್ತಂತೆ.
ಮುಂಬೈ(ಜೂ.1): ಬಾಹುಬಲಿ ಸರಣಿಯ ಎರಡೂ ಚಿತ್ರಗಳು ಸೂಪರ್ಹಿಟ್ ಆದ ಬಳಿಕ ಚಿತ್ರದ ನಾಯಕ- ನಾಯಕಿರಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿಇನ್ನೇನು ವಿವಾಹ ಆಗಿಯೇ ಬಿಟ್ಟರು ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಹೊಸ ಸುದ್ದಿಯೆಂದರೆ ಆಂಧ್ರದ ಖ್ಯಾತ ಉದ್ಯಮಿ, ರಾಸಿ ಸಿಮೆಂಟ್ ಕಂಪನಿಯ ಮಾಲೀಕ ಭೂಪತಿ ರಾಜು ಅವರು ತಮ್ಮ ಮೊಮ್ಮಗಳನ್ನು ಪ್ರಭಾಸ್ಗೆ ವಿವಾಹ ಮಾಡಿಕೊಡಲು ಯತ್ನಿಸು ತ್ತಿದ್ದು, ಈ ಕುರಿತು ಮಾತುಕತೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಹುಬಲಿ ಚಿತ್ರೀಕರಣದ ವೇಳೆಯೇ ಪ್ರಭಾಸ್ಗೆ 60000ಕ್ಕೂ ಹೆಚ್ಚು ಮದುವೆ ಪ್ರಸ್ತಾಪ ಬಂದಿತ್ತಂತೆ.