ದರ್ಶನ್ ಅಭಿನಯದ ಗಜ ಸಿನಿಮಾದ ನಟಿ ನವ್ಯಾ ನಾಯರ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್. ಅವರು ಹಂಚಿಕೊಳ್ಳುವ ಪೋಸ್ಟ್ಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ಅವರ ಹೊಸ ಪೋಸ್ಟ್ ಒಂದು ವೈರಲ್ ಆಗಿದೆ.
ದರ್ಶನ್ ಅಭಿನಯದ ಗಜ ಸಿನಿಮಾದ ನಟಿ ನವ್ಯಾ ನಾಯರ್ ಸೀರೆಯುಟ್ಟ ತಮ್ಮ ಹೊಸ ರಾಯಲ್ ಲುಕ್ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ನೋವನ್ನು ಮೆಟ್ಟಿ ನಿಲ್ಲುವ ಬಗ್ಗೆ ಅವರು ಬರೆದುಕೊಂಡಿರುವ ಸಾಲುಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ. ಚಿತ್ರರಂಗದ ಜನಪ್ರಿಯ ನಟಿ ನವ್ಯಾ ನಾಯರ್. 'ನಂದನಂ' ಸಿನಿಮಾದ 'ಬಾಲಾಮಣಿ' ಪಾತ್ರದ ಮೂಲಕ ಮಲಯಾಳಿಗರ ಮನಗೆದ್ದಿದ್ದಾರೆ.
ಅಲ್ಲಿನ ಜನರಿಗೆ ಈಗಲೂ ಪಕ್ಕದ ಮನೆ ಹುಡುಗಿಯಂತೆಯೇ ನವ್ಯಾ ಚಿರಪರಿಚಿತರು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ನವ್ಯಾ, ಹಂಚಿಕೊಳ್ಳುವ ಪೋಸ್ಟ್ಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ಅವರ ಹೊಸ ಪೋಸ್ಟ್ ಒಂದು ವೈರಲ್ ಆಗಿದೆ. ನವ್ಯಾ ನಾಯರ್ ತಮ್ಮ ಇತ್ತೀಚಿನ ಫೋಟೋದಲ್ಲಿ ಸಿಂಪಲ್ ರಾಯಲ್ ಲುಕ್ನಲ್ಲಿ ಕಂಗೊಳಿಸಿದ್ದಾರೆ.
ಸೀರೆ ಹಾಗೂ ಮಿನಿಮಲ್ ಆಭರಣಗಳನ್ನು ಧರಿಸಿ, ಸಿಂಪಲ್ ಮೇಕಪ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಫೋಟೋದ ಜೊತೆಗೆ, "ದೇವರು ನೋವನ್ನು ಶಾಂತಿಯಾಗಿ ಪರಿವರ್ತಿಸಿದಾಗ, ಆ ಹೊಳಪೇ ಬೇರೆಯಾಗಿರುತ್ತದೆ. ಹೃದಯದಲ್ಲಿ ಕೃಪೆ, ಹೆಜ್ಜೆಗಳಲ್ಲಿ ಬೆಂಕಿಯೊಂದಿಗೆ... ನಾನು ಹೀಗೆಯೇ ಪುಟಿದೇಳುತ್ತೇನೆ" ಎಂದು ನವ್ಯಾ ಬರೆದುಕೊಂಡಿದ್ದಾರೆ. ನಟಿ ಎದುರಿಸಿದ ಕಷ್ಟದ ದಿನಗಳ ಬಗ್ಗೆ ಈ ಸಾಲುಗಳು ಹೇಳುತ್ತಿರಬಹುದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಪ್ರಮುಖ ಪಾತ್ರದಲ್ಲಿ ಸೌಬಿನ್ ಶಾಹಿರ್
ಇನ್ನು ನವ್ಯಾ ನಟನೆಯ 'ಪತ್ತಿರಾತ್ರಿ' ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ಸೌಬಿನ್ ಶಾಹಿರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರವನ್ನು ರತೀನಾ ನಿರ್ದೇಶಿಸಿದ್ದರು. ಒಂದು ಮಧ್ಯರಾತ್ರಿಯಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ನವ್ಯಾ ನಾಯರ್ ಮತ್ತು ಸೌಬಿನ್ ಶಾಹಿರ್ ಜೊತೆಗೆ ಸನ್ನಿ ವೇಯ್ನ್ ಮತ್ತು ಆನ್ ಅಗಸ್ಟಿನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮಮ್ಮುಟ್ಟಿ ನಟನೆಯ 'ಪುಳು' ಚಿತ್ರದ ನಂತರ ರತೀನಾ ನಿರ್ದೇಶಿಸಿದ ಎರಡನೇ ಸಿನಿಮಾ ಇದಾಗಿದೆ. ಆತ್ಮೀಯ ರಾಜನ್, ಶಬರೀಶ್ ವರ್ಮಾ, ಹರಿಶ್ರೀ ಅಶೋಕನ್, ಅಚ್ಯುತ್ ಕುಮಾರ್, ಇಂದ್ರನ್ಸ್, ಮತ್ತು ತೇಜಸ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಶಾಜಿ ಮಾರಾಡ್ ಚಿತ್ರಕಥೆ ಬರೆದಿದ್ದಾರೆ.


