ಚಿತ್ರರಂಗದಲ್ಲಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಅದು ಮೋಹನ್ಲಾಲ್-ಜೀತು ಜೋಸೆಫ್ ಜೋಡಿಯ 'ದೃಶ್ಯಂ 3'. ಈ ಸಿನಿಮಾ ಮೇ 21 ರಂದು ಮೋಹನ್ಲಾಲ್ ಅವರ ಹುಟ್ಟುಹಬ್ಬದ ದಿನದಂದೇ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.
ಮೋಹನ್ಲಾಲ್ ಮತ್ತು ಜೀತು ಜೋಸೆಫ್ ಕಾಂಬಿನೇಷನ್ನ ಬಹುನಿರೀಕ್ಷಿತ ಸಿನಿಮಾ 'ದೃಶ್ಯಂ 3' ಮೇ 21 ರಂದು ಮೋಹನ್ಲಾಲ್ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆಯಾಗಲಿದೆ. ಹುಟ್ಟುಹಬ್ಬದಂದು ಸಿನಿಮಾ ರಿಲೀಸ್ ಮಾಡುವ ಐಡಿಯಾ ನಿರ್ಮಾಪಕ ಆಂಟನಿ ಪೆರುಂಬಾವೂರ್ ಅವರದ್ದು ಎಂದು ಮೋಹನ್ಲಾಲ್ ಹೇಳಿದ್ದಾರೆ.

ಚಿತ್ರರಂಗದಲ್ಲಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಅದು ಮೋಹನ್ಲಾಲ್-ಜೀತು ಜೋಸೆಫ್ ಜೋಡಿಯ 'ದೃಶ್ಯಂ 3'. ಈ ಸಿನಿಮಾ ಮೇ 21 ರಂದು ಮೋಹನ್ಲಾಲ್ ಅವರ ಹುಟ್ಟುಹಬ್ಬದ ದಿನದಂದೇ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಇಂದು ಸಂಜೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಈ ಬಗ್ಗೆ ಮಾತನಾಡಿರುವ ಮೋಹನ್ಲಾಲ್, "ನನ್ನ ಪ್ರತಿ ಹುಟ್ಟುಹಬ್ಬಕ್ಕೂ ಈ ರೀತಿ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ. ಹುಟ್ಟುಹಬ್ಬದಂದು ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕ ಆಂಟನಿ ಪೆರುಂಬಾವೂರ್ ಅವರ ಆಲೋಚನೆಯಾಗಿತ್ತು. ಈ ವಿಶೇಷ ದಿನದಂದು ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಖುಷಿ ಇದೆ ಎಂದು 'ದೃಶ್ಯಂ' ಪತ್ರಿಕಾಗೋಷ್ಠಿಯಲ್ಲಿ ಮೋಹನ್ಲಾಲ್ ತಿಳಿಸಿದರು.
"ನಾವು ಈ ಸಿನಿಮಾವನ್ನು ಮೊದಲೇ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೆವು. ಆದರೆ, ಪಶ್ಚಿಮ ಏಷ್ಯಾದ ಸಂಘರ್ಷದ ಕಾರಣದಿಂದ ರಿಲೀಸ್ ದಿನಾಂಕವನ್ನು ಮುಂದೂಡಬೇಕಾಯಿತು. ಸಾಮಾನ್ಯವಾಗಿ ಸಿನಿಮಾಗಳು ಗುರುವಾರ ಅಥವಾ ಶುಕ್ರವಾರ ಬಿಡುಗಡೆಯಾಗುತ್ತವೆ. ಮೇ 21 ಗುರುವಾರವೇ ಬಂದಿದೆ. ಇದನ್ನೊಂದು ಅದೃಷ್ಟ ಅಂತ ಭಾವಿಸುತ್ತೇನೆ. ಇಂತಹ ಅವಕಾಶ ಒಮ್ಮೆ ಮಾತ್ರ ಸಿಗುತ್ತದೆ. ಇಷ್ಟೊಂದು ಜನ ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾವನ್ನು ನನ್ನ ಹುಟ್ಟುಹಬ್ಬದಂದು ಕೊಡುವುದು ನನಗಿಂತ ಹೆಚ್ಚಾಗಿ ಆಂಟನಿಯ ಆಲೋಚನೆಯಾಗಿತ್ತು. ಇದು ಒಮ್ಮೆ ಮಾತ್ರ ಸಂಭವಿಸುವಂಥದ್ದು. ಪ್ರತಿ ಹುಟ್ಟುಹಬ್ಬಕ್ಕೂ ಒಂದೊಂದು ಸಿನಿಮಾ ರಿಲೀಸ್ ಮಾಡಲು ಆಗುವುದಿಲ್ಲ," ಎಂದು ಮೋಹನ್ಲಾಲ್ ಹೇಳಿದರು.
"ಅಷ್ಟೇ ಅಲ್ಲ, ಆ ದಿನಗಳು ಹಾಗೆ ಕೂಡಿಬರಬೇಕು. ನಮ್ಮೆಲ್ಲರ ಜೀವನದ ಪ್ರಮುಖ ಪಾತ್ರಗಳಲ್ಲಿ ಜಾರ್ಜ್ಕುಟ್ಟಿ ಮತ್ತು ದೃಶ್ಯಂ ಕೂಡ ಒಂದು. ಹಾಗಾಗಿ ಆ ದಿನ ಬಂದಿದ್ದನ್ನು ನಾವು ಬಹಳ ಪಾಸಿಟಿವ್ ಆಗಿ ನೋಡುತ್ತಿದ್ದೇವೆ. ಇದೊಂದು ಕೆಟ್ಟ ಸಿನಿಮಾ ಆಗಿರಲ್ಲ, ಇದರಲ್ಲಿ ಯಾವುದೇ ಮೋಸವಿಲ್ಲ. ಹಾಗಾಗಿ, ಹುಟ್ಟುಹಬ್ಬದ ಉಡುಗೊರೆಯಾಗಿ ಜನರಿಗೆ ಈ ಸಿನಿಮಾ ನೀಡುವ ಧೈರ್ಯ ನಮಗಿತ್ತು. ಜಾರ್ಜ್ಕುಟ್ಟಿ ಮತ್ತು ಅವನ ಕುಟುಂಬಕ್ಕೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಅದರಿಂದ ಅವನು ಹೇಗೆ ಪಾರಾಗುತ್ತಾನೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ನನ್ನ ಹುಟ್ಟುಹಬ್ಬದ ದಿನವೇ ಈ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ನನಗೆ ಸಂತೋಷವಿದೆ," ಎಂದು ಅವರು ಹೇಳಿದರು.
ಯುದ್ಧದ ಕಾರಣದಿಂದ ಮುಂದೂಡಿಕೆ
ಮೋಹನ್ಲಾಲ್ ಮತ್ತು ಜೀತು ಜೋಸೆಫ್ ಅವರ ಈ ಆತ್ಮವಿಶ್ವಾಸ ಅಭಿಮಾನಿಗಳಿಗೆ ದೊಡ್ಡ ಭರವಸೆ ನೀಡಿದೆ. ಮೊದಲ ದಿನವೇ ಪಾಸಿಟಿವ್ ವಿಮರ್ಶೆ ಬಂದರೆ, ಸಿನಿಮಾ ಬಾಕ್ಸಾಫೀಸ್ನಲ್ಲಿ ಇತಿಹಾಸ ಸೃಷ್ಟಿಸುವುದು ಖಚಿತ. ಚಿತ್ರಕ್ಕೆ U/A 13+ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದೆ. ಏಪ್ರಿಲ್ 2 ರಂದು ರಿಲೀಸ್ ಆಗಬೇಕಿದ್ದ ಈ ಚಿತ್ರವನ್ನು ಪಶ್ಚಿಮ ಏಷ್ಯಾದ ಯುದ್ಧದ ಕಾರಣದಿಂದ ಮೇ 21 ಕ್ಕೆ ಮುಂದೂಡಲಾಗಿತ್ತು. ಮೋಹನ್ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ದಿಖ್, ಕಲಾಭವನ್ ಶಾಜೋನ್, ಇರ್ಷಾದ್, ಗಣೇಶ್ ಕುಮಾರ್ ಸೇರಿದಂತೆ ಹಲವು ತಾರೆಯರು ನಟಿಸಿದ್ದಾರೆ. ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟನಿ ಪೆರುಂಬಾವೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೇ ವೇಳೆ, ಚಿತ್ರದ ಹಿಂದಿ ಅವತರಣಿಕೆಯು 2026ರ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ.


