Asianet Suvarna News Asianet Suvarna News

ಹೆಣ್ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ಹಾಫ್ ಮರ್ಡರ್...ವೆಂಕಟ್ ಬದಕಿದ್ದಾನೆ!

ಸದ್ಯಕ್ಕೆ ಮೀ ಟೂ ಭೂತ ಸ್ಯಾಂಡಲ್ ವುಡ್‌ ನ್ನು ಬಿಡುವಂತೆ ಕಾಣುತ್ತಿಲ್ಲ. ಆದರೆ ಈಗ ಆರೋಪ ಮತ್ತು ಪ್ರತ್ಯಾರೋಪಗಳು ಬೇರೆಯದೇ ದಿಕ್ಕನ್ನು ಪಡೆದುಕೊಳ್ಳುತ್ತಿವೆ. ನಟಿಯರ ವಿರುದ್ಧ ಮಾತನಾಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ಅಲ್ಲದೇ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವೂ ಕಿಡಿ ಕಾರಿದ್ದಾರೆ.

Me Too Row Huccha Venkat Warns Karnataka Film Chamber Not To Ban Heroine
Author
Bengaluru, First Published Oct 31, 2018, 8:19 PM IST

ಬೆಂಗಳೂರು[ಅ.31]  ತಾವು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸಲು ನಟಿಯರು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ವಿವಾದ ಹೊತ್ತಿಸಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಹುಚ್ಚ ವೆಂಕಟ್ ಗುಡುಗಿದ್ದಾರೆ.

ಮೀ ಟೂ ವಿಚಾರದಲ್ಲಿ ಯಾರು ಸಭ್ಯರು?

ಶ್ರುತಿ ರಿಹರನ್, ಸಂಗೀತಾ ಭಟ್ ಹಾಗೂ ಸಂಜನಾ ವಿರುದ್ಧ  ಆರೋಪ ಮಾಡಿದ್ದ ಗುರುಪ್ರಸಾದ್ ಹೇಳಿಕೆಯನ್ನು ಖಂಡಿಸಿರುವ ವೆಂಕಟ್ ಹೆಣ್ಣು ಮಕ್ಕಳಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದ್ದಾರೆ. ಗುರುಪ್ರಸಾದ್ ಮೇಲೆ ಮಾತಿನ ಬಾಣಗಳನ್ನು ಎಸೆದಿರುವ ವೆಂಕಟ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೆಣ್ಣು ಮಕ್ಕಳ ನೋವಿಗೆ ಸ್ಪಂದಿಸಬೇಕು.. ನಟಿಯರನ್ನು ನಿಷೇಧ ಮಾಡುವ ಅಧಿಕಾರ ಯಾರಿಗೂ ಇಲ್ಲ  ಎಂದು ತಮ್ಮದೇ ಧಾಟಿಯಲ್ಲಿ ಮಾತನಾಡಿದ್ದಾರೆ.

Follow Us:
Download App:
  • android
  • ios