ಕಿನ್ನರಿ ಧಾರಾವಾಹಿ ನಟ ಕಿರಣ್ ರಾಜ್ ವಿಚಾರಣೆ
ಕಿನ್ನರಿ ಧಾರಾವಾಹಿ ನಾಯಕ ನಟ ಕಿರಣ್ ರಾಜ್’ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ
ಬೆಂಗಳೂರು : ಕಿನ್ನರಿ ಧಾರಾವಾಹಿ ನಾಯಕ ನಟ ಕಿರಣ್ ರಾಜ್’ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಮುಂಬೈ ಮಾಡೆಲ್ ದೂರು ದಾಖಲಿಸಿದ್ದರು. ನಟ ಕಿರಣ್ ರಾಜ್ ವಿರುದ್ಧ ಮುಂಬೈನಲ್ಲಿ FIR ದಾಖಲು ಮಾಡಲಾಗಿತ್ತು.
ಕಿರಣ್ ರಾಜ್ ವಿರುದ್ಧ ಮಾಡೆಲ್ ಯಾಸ್ಮಿನ್ ಎಂಬಾಕೆ ಕಿರಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ದೂರು ದಾಖಲು ಮಾಡಲಿದ್ದರು. ದೈಹಿಕ ಹಲ್ಲೆ ನಡೆಸಿರುವುದಾಗಿ ಕಿರಣ್ ವಿರುದ್ಧ ದೂರು ದಾಖಲಾಗಿದ್ದು, ಯಾಸ್ಮಿನ್ ವಿರುದ್ಧ ಕಿರಣ್ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಆರ್.ಆರ್. ನಗರ ಠಾಣೆಯಲ್ಲಿ ಕಿರಣ್ ರಾಜ್ ದೂರು ನೀಡಿದ್ದಾರೆ. ಕಿನ್ನರಿ ಸೀರಿಯಲ್ನಲ್ಲಿ ಕಿರಣ್ ರಾಜ್ ನಕುಲ್ ಪಾತ್ರ ಮಾಡುತ್ತಿದ್ದಾರೆ.