ಕಿನ್ನರಿ ಧಾರಾವಾಹಿ ನಾಯಕ ನಟ ಕಿರಣ್ ರಾಜ್’ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

ಬೆಂಗಳೂರು : ಕಿನ್ನರಿ ಧಾರಾವಾಹಿ ನಾಯಕ ನಟ ಕಿರಣ್ ರಾಜ್’ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಮುಂಬೈ ಮಾಡೆಲ್ ದೂರು ದಾಖಲಿಸಿದ್ದರು. ನಟ ಕಿರಣ್​ ರಾಜ್​ ವಿರುದ್ಧ ಮುಂಬೈನಲ್ಲಿ FIR ದಾಖಲು ಮಾಡಲಾಗಿತ್ತು. 

ಕಿರಣ್​ ರಾಜ್​ ವಿರುದ್ಧ ಮಾಡೆಲ್​ ಯಾಸ್ಮಿನ್​ ಎಂಬಾಕೆ ಕಿರಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ದೂರು ದಾಖಲು ಮಾಡಲಿದ್ದರು. ದೈಹಿಕ ಹಲ್ಲೆ ನಡೆಸಿರುವುದಾಗಿ ಕಿರಣ್​ ವಿರುದ್ಧ ದೂರು ದಾಖಲಾಗಿದ್ದು, ಯಾಸ್ಮಿನ್​ ವಿರುದ್ಧ ಕಿರಣ್ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಆರ್.ಆರ್. ನಗರ ಠಾಣೆಯಲ್ಲಿ ಕಿರಣ್​ ರಾಜ್​ ದೂರು ನೀಡಿದ್ದಾರೆ. ಕಿನ್ನರಿ ಸೀರಿಯಲ್​ನಲ್ಲಿ ಕಿರಣ್ ರಾಜ್ ನಕುಲ್​ ಪಾತ್ರ ಮಾಡುತ್ತಿದ್ದಾರೆ.