Asianet Suvarna News Asianet Suvarna News

ಸಿದ್ಧಗಂಗಾದ 'ಅನ್ನದ ಬೆಲೆ' ಬಾಲಕನಿಗೆ ಗಣೇಶ್ ಬೋಲ್ಡ್!

ಅತ್ತ ಸಿದ್ಧಗಂಗಾದ ಶತಮಾನದ ಸಂತ ಲಿಂಗೈಕ್ಯರಾದರೆ, ಇತ್ತ ಮಠದ ಬಾಲಕನೊಬ್ಬ 'ಅನ್ನದ ಬೆಲೆ' ಬಗ್ಗೆ ಅರಿವು ಮೂಡಿಸಿದ ವೀಡಿಯೋವೊಂದು ವೈರಲ್ ಆಗಿತ್ತು. ಈ ಬಾಲಕನ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಿಷ್ಟು....

Golden star Ganesh  appreciates  Siddaganga mutt boy who shares value of rice
Author
Bengaluru, First Published Jan 24, 2019, 2:15 PM IST

ಸಿದ್ಧಗಂಗಾ ಮಠದ ಮಕ್ಕಳ ಆಸ್ತಿಯೇ ಭಯ, ಭಕ್ತಿ ಹಾಗೂ ಶ್ರದ್ಧೆ. ಜತೆಗೆ ಅವರಿಗೆ ಅನ್ನ ಹಾಗೂ ಭೂಮಿ ಬೆಲೆಯನ್ನು ಕಲಿಸಿ, ಅತ್ಯುತ್ತಮ ಸಂಸ್ಕಾರ ನೀಡಿದ ಸಿದ್ಧಗಂಗಾ ಶ್ರೀಗಳು 'ನಡೆದಾಡುವ ದೇವರು' ಎಂಬ ಕೀರ್ತಿಗೆ ಪಾತ್ರರಾದರು. ಮಠದ ಮಕ್ಕಳಿಗಿರೋ ಅನ್ನಬ್ರಹ್ಮದ ಮೇಲಿನ ಪ್ರೀತಿ ಇತ್ತೀಚೆಗೆ ವೈರಲ್ ಆದ ವೀಡಿಯೋ ಮೂಲಕ ಜಗಜ್ಜಾಹೀರವಾಗಿತ್ತು. ಆ ಮೂಲಕ ಸಿದ್ಧಗಂಗೆ ಮೇಲಿನ ಗೌರವ ಮತ್ತಷ್ಟು ಹೆಚ್ಚುವಂತಾಯಿತು. ಈ ವಿದ್ಯಾರ್ಥಿಯ ನಡೆಗೆ ಎಲ್ಲೆಡೆ ಪ್ರಶಂಸೆಯಾದ ಬೆನ್ನಲ್ಲೇ, ಗೋಲ್ಡನ್ ಸ್ಟಾರ್ ಗಣೇಶ್ ಸಹ ಶ್ಲಾಘಿಸಿದ್ದಾರೆ.

ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ

'ಅನ್ನದ ಬೆಲೆ ಸಿದ್ಧಗಂಗಾ ಮಠದ ಮಕ್ಕಳಿಗೆ ಗೊತ್ತು. ಇಂದು ದಾಸೋಹದಲ್ಲಿ ಕಂಡ ದೃಶ್ಯ,' ಎಂದು ಬಾಲಕ ಹಿರಿಯರೊಬ್ಬರಿಗೆ ಅನ್ನದ ಬೆಲೆಯನ್ನು ತಿಳಿಸಿರುವ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.

 

ಇದನ್ನು ನಟ ರವಿಶಂಕರ್ ಗೌಡ ಕೂಡ ಟ್ವೀಟ್ ಮಾಡಿ, 'ಶ್ರೀಗಳ ಮಠದಲ್ಲಿ ಅನ್ನದ ಬೆಲೆಯನ್ನು ಹೇಗೆ ತಿಳಿಸುತ್ತಾರೆ ಮಕ್ಕಳು....ನೀವೇ ನೋಡಿ..." ಎಂದಿದ್ದಾರೆ.

 

Follow Us:
Download App:
  • android
  • ios