Asianet Suvarna News Asianet Suvarna News

ನೋ ವೇ... ಚಾನ್ಸೇ ಇಲ್ಲ... ಅಂಬರೀಶ್ ಹೋಗಿಯೇ ಇಲ್ಲ!

ಡ್ರಾಮಾ ಚಿತ್ರದಲ್ಲಿ ಅಂಬರೀಶ್ ನೆನೆದ ಯೋಗರಾಜ್ ಭಟ್ | ನೋ ವೇ .. ಚಾನ್ಸೇ ಇಲ್ಲ ಎಂದ ಭಟ್ಟರು | 

Director Yogaraj Bhat remembers Ambareesh memory in Drama movie
Author
Bengaluru, First Published Nov 25, 2018, 5:26 PM IST

ಬೆಂಗಳೂರು (ನ.25): ಡ್ರಾಮಾ ಚಿತ್ರದಲ್ಲಿ ಯೋಗರಾಜ್ ಭಟ್ಟರು ಹಾಗೂ ಅಂಬರೀಶ್ ಒಟ್ಟಿಗೆ ಕೆಲಸ ಮಾಡಿದವರು. ಬೊಂಬೆ ಆಡ್ಸೋನು ಮೇಲೆ ಕುಂತವ್ನೆ ಎಂದು ಅಂಬಿ ಜೀವನದ ಅರ್ಥವನ್ನು ಹೇಳಿಕೊಟ್ಟರು. ಇಂದು ಇವರು ಕೂಡಾ ವಿಧಿಯಾಟದ ಬೊಂಬೆಯಾಗಿದ್ದಾರೆ. ಅಂಬರೀಶ್ ಜೊತೆಗಿನ ಡ್ರಾಮಾ ನೆನಪನ್ನು  ಯೋಗರಾಜ್ ಭಟ್ಟರು ಈ ರೀತಿ ನೆನಪಿಸಿಕೊಂಡಿದ್ದಾರೆ.  ತೆರೆಮೇಲೆ ತಮ್ಮ ಚಿತ್ರದಲ್ಲಿ ವೇದಾಂತ ಹೇಳುತ್ತಿದ್ದ ಭಟ್ಟರು ಇದೀಗ ಸಾವಿನಲ್ಲೂ ಅದನ್ನೇ ಹೇಳಿದ್ದಾರೆ. 

  • ತುಂಬಾ ಸಂತಸದ ಜೀವನ ಬಾಳಿದ ದೊಡ್ಡ ವ್ಯಕ್ತಿ ಹೋದಾಗ ಅದನ್ನ ಸಾವು ಅಂತ ಅನ್ನಬಾರದು, ಹುಟ್ಟು ಅನ್ನಬೇಕು. 
  • ಸಾವಲ್ಲ ಇದು ಅಂಬರೀಷ್ ಅಣ್ಣನ ಹುಟ್ಟು.
  • ಅವರು ಎಲ್ಲೂ ಹೋಗಿಲ್ಲ, ಹೋಗೋದೂ ಇಲ್ಲ, ಸದಾಕಾಲ ನಮ್ಮೆಲ್ಲರ ಮನದಾಳದಲ್ಲಿ ಜೀವಂತವಾಗಿದ್ದಾರೆ, ಮುಂದೆಯೂ ಜೀವಂತವಾಗಿಯೇ ಇರುತ್ತಾರೆ.
  • ನನ್ನ ಪ್ರಕಾರ ಈಗ ಅವರು ಸಾವಿಗೆ ಬಯ್ಯುತ್ತಾ ಕೂತಿದ್ದಾರೆ. "ನನ್ಮಗ್ನೆ ಮಾಡಕ್ ಕೆಲ್ಸ ಇಲ್ಲ ನಿಂಗೆ" ಅಂತ ಸಾವನ್ನು ಮುದ್ದಾಗಿ ಗದರಿಸುವ ತಾಕತ್ತು ಅವರೊಬ್ಬರಿಗೇ ಇರೋದು.
  • ಯಾರನ್ನೂ ಬಿಡದ ಸಾವಿಗೆ ಅಂಬರೀಷಣ್ಣನ ದೋಸ್ತಿ ಮಾಡೋ ಅಸೆ ಯಾಕಾದ್ರೂ ಬಂತೋ 
  • "ಬೊಂಬೆ ಆಡ್ಸೋನು" ಡ್ರಾಮ ಟೈಮ್ ಅವರ ಜೊತೆ ಇದ್ದ ನೆನಪು 
  • ಮೊನ್ನೆ ಅವರಿಗೆ ನಾನು ಮತ್ತು ರಾಕ್ಲೈನ್ ವೆಂಕಟೇಶ್ ಹೆಡ್ ಮಸಾಜ್ ಮಾಡಿದ ನೆನಪು 
  • ಅವರ ಕನಸಲ್ಲಿ ನಾನು ಹೋಗಿದ್ದಕ್ಕೆ ಅವರು ಕರೆದು ಬೈದ ನೆನಪು 
  • ಯಶ್ ರಾಧಿಕ ಸೀಮಂತದಲ್ಲಿ ಅವರು ಜೋಕ್ ಮಾಡುತ್ತಾ ಕೂತಿದ್ದ ನೆನಪು 
  • ನೋ ವೇ... ಚಾನ್ಸೇ ಇಲ್ಲ... ಅವ್ರು ಹೋಗಿಲ್ಲ

ನೆನಪಿನ ಹೂವು ಸರಪಳಿಯಲ್ಲಿ ಎಲ್ಲರನ್ನು ಬಿಗಿಯಾಗಿ ಪ್ರೇಮದಿಂದ ಬಾಚಿ ಬಂಧಿಸಿದ ಧೀಮಂತ ಆತ್ಮಕ್ಕೆ ನಾಡಿನ ನಮನ. ನಮನ , ನಮನ

-ಯೋಗರಾಜ್ ಭಟ್ 

Follow Us:
Download App:
  • android
  • ios