ದರ್ಶನ್ ಯಜಮಾನಕ್ಕೆ ಸರಳ ಮುಹೂರ್ತ
ದರ್ಶನ್ ನಟನೆಯ ‘ಯಜಮಾನ’ ಚಿತ್ರಕ್ಕೆ ಸರಳವಾಗಿ ಮುಹೂರ್ತ ನಡೆಯಿತು. ದೇವರಿಗೆ ಕೈ ಮುಗಿಯುವ ಮೊದಲ ದೃಶ್ಯದ ಮೂಲಕ ಚಿತ್ರೀಕರಣ ಶುರುವಾಯಿತು.
ದರ್ಶನ್ ನಟನೆಯ ‘ಯಜಮಾನ’ ಚಿತ್ರಕ್ಕೆ ಸರಳವಾಗಿ ಮುಹೂರ್ತ ನಡೆಯಿತು. ದೇವರಿಗೆ ಕೈ ಮುಗಿಯುವ ಮೊದಲ ದೃಶ್ಯದ ಮೂಲಕ ಚಿತ್ರೀಕರಣ ಶುರುವಾಯಿತು. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ನಿರ್ದೇಶಕ ದಿನಕರ್. ಫೆ.18ರಂದು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಜರುಗಿತು.
ನಿರ್ಮಾಪಕರಾದ ಶೈಲಜಾ ನಾಗ್, ಬಿ ಸುರೇಶ್, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ನಿರ್ದೇಶಕ ಪಿ ಕುಮಾರ್ ಹಾಜರಿದ್ದರು. ಮೈಸೂರಿನಲ್ಲಿ ಚಿತ್ರಕ್ಕೆ ವಿಶಾಲವಾದ ಹಳ್ಳಿ ಸೆಟ್ ಹಾಕಲಾಗಿದ್ದು, ಈ ಸೆಟ್ನಲ್ಲಿ ಸತತವಾಗಿ 25 ದಿನ ಚಿತ್ರೀಕರಣ ನಡೆಯಲಿದೆ.