ಕಮೀಷನ್ ತೊಗೊಂಡ್ರಾ ಯೋಗರಾಜಭಟ್ಟರು.. ?ನಿರ್ಮಾಪಕ ಶ್ರೀನಿವಾಸ್ ಗರಂ ಆಗಿದ್ಯಾಕೆ..?
ಬೆಂಗಳೂರು(ಅ.05): ‘ದನ ಕಾಯೋನು’ ಚಿತ್ರ ತಂಡದಲ್ಲಿ ಗಲಾಟೆ ಶುರುವಾಗಿದೆ. ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರ ನಡುವೆ ಕಿತ್ತಾಡಿಕೊಂಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಗರಂ ಆಗಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್, ಯೋಗರಾಜ್ ಭಟ್ ಕಮಿಷನ್ ಪಡೆದಿದ್ದಾರೆಂದು ಆರೋಪ ಮಾಡಿದ್ದಾರೆ.
ಶ್ರೀನಿವಾಸ್ ಕ್ಷಮೆಯಾಚನೆಗೆ ಯೋಗರಾಜ್ ಭಟ್ ಬಿಗಿಪಟ್ಟು ಹಿಡಿದಿದ್ದಾರೆ. ಕ್ಷಮೆ ಕೇಳೋವರೆಗೂ ಚಿತ್ರದ ಪ್ರಚಾರಕ್ಕೆ ಬರೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಕ್ಟೋಬರ್ 7ರಂದು ಚಿತ್ರ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ‘ನಿಗದಿತ ದಿನದಂದೇ ದನ ಕಾಯೋನು ಚಿತ್ರ ಬಿಡುಗಡೆ ಖಚಿತ ಸುವರ್ಣನ್ಯೂಸ್ಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.