ದರ್ಶನ್ ಬರ್ತಡೇಗೆ ಸಿಕ್ತು ಸಿಕ್ಕಾಪಟ್ಟೆ ಸ್ಪೆಷಲ್ ಗಿಫ್ಟ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇಗೆ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್ | ಖ್ಯಾತ ಗೀತ ರಚನೆಗಾರ ನಾಗೇಂದ್ರ ಪ್ರಸಾದ್ ಕೂಡಾ ವಿಶೇಷ ಉಡುಗೊರೆ ನೀಡಿದ್ದಾರೆ | ಏನಿರಬಹುದು ಎಂದು ಯೋಚಿಸುತ್ತಿದ್ದೀರಾ? ಈ ಸುದ್ಧಿ ಓದಿ.
ಬೆಂಗಳೂರು (ಜ. 28): ಫೆ. 16 ಕ್ಕೆ ಸ್ಯಾಂಡಲ್ ವುಡ್ ಡಿ ಬಾಸ್ ಹುಟ್ಟುಹಬ್ಬವಿದ್ದು ನೆಚ್ಚಿನ ನಟನಿಗೆ ಬರ್ತಡೇ ಗಿಫ್ಟ್ ಕೊಡಲು ಅಭಿಮಾನಿಗಳು ತಯಾರಾಗಿದ್ದಾರೆ.
ಖ್ಯಾತ ಗೀತ ರಚನೆಗಾರ ನಾಗೇಂದ್ರ ಪ್ರಸಾದ್ ದರ್ಶನ್ ಬರ್ತಡೇಗೆ ಸ್ಪೆಷಲ್ ಗಿಫ್ಟ್ ನೀಡಲಿದ್ದಾರೆ.
ಕಚಗುಳಿ ಇಡುವಂತಿದೆ ’ಯಜಮಾನ’ ಚಿತ್ರದ ಈ ಹಾಡು
ಸಿದ್ಧಗಂಗಾ ಮಠ ಅನ್ನದಾಸೋಹಕ್ಕೆ ದರ್ಶನ್ ಸಾಥ್
ಸಾರಥಿಗಾಗಿ ಒಂದು ಹಾಡು ಬರೆಯಲಿದ್ದಾರೆ. ಇದು ದರ್ಶನ್ ಹಾಗೂ ಅಭಿಮಾನಿಗಳ ನಡುವಿನ ಬಾಂಧವ್ಯವನ್ನು ಹೇಳಲಿದೆಯಂತೆ. ಈ ಹಾಡಿಗೆ ನಾಗೇಂದ್ರ ಪ್ರಸಾದ್ ಅವರ ಏ ಸಾಹಿತ್ಯ, ಸಂಗೀತ ನೀಡಲಿದ್ದಾರೆ.
ಅದೇ ರೀತಿ ಆನಂದ್ ಎನ್ನುವ ಅಭಿಮಾನಿಯೊಬ್ಬ ಸ್ಪೆಷಲ್ ಗಿಫ್ಟ್ ಕೊಡಲು ಮುಂದಾಗಿದ್ದಾನೆ. ಬೆನ್ನ ತುಂಬಾ ದರ್ಶನ್ ಹಚ್ಚೆ ಹಾಕಿಸಿಕೊಂಡಿದ್ದಾನೆ. ಸುಮಾರು 16 ಗಂಟೆಗಳ ಕಾಲ ಆನಂದ್ ಬೆನ್ನಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಅಂಬರೀಶ್ ನಿಧನದ ಹಿನ್ನಲೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಿಕೊಳ್ಳಲು ದರ್ಶನ್ ನಿರಾಕರಿಸಿದ್ದಾರೆ. ಅಭಿಮಾನಿಗೋಸ್ಕರ ಸರಳವಾಗಿ ಸೆಲಬ್ರೇಶನ್ ಮಾಡಿಕೊಳ್ಳಲು ಒಪ್ಪಿದ್ದಾರೆ.