ಜೈದೇವ ಮನೆಯವರ ಎದುರೇ ದಿಯಾಳಿಗೆ ತಾಳಿ ಕಟ್ಟಲು ಮುಂದಾಗಿದ್ದಾನೆ. ಅಲ್ಲಿಗೆ ಬಂದ ಗೌತಮ್​, ಭೂಮಿಕಾ ಎದುರು ತನ್ನ ಆಟಾಟೋಪ ತೋರಿಸೋಣ ಎಂದುಕೊಂಡರೆ ಮದುವೆಗೆ ಗೌತಮ್​ನೇ ಗ್ರೀನ್​ ಸಿಗ್ನಲ್​ ಕೊಟ್ಟು ಎಲ್ಲರನ್ನೂ ಕಕ್ಕಾಬಿಕ್ಕಿ ಮಾಡಿದ್ದಾನೆ. ಏನಿದು ಟ್ವಿಸ್ಟ್​? 

ಅಮೃತಧಾರೆ ಇದೀಗ ಭಾರಿ ಕುತೂಹಲದ ತಿರುವು ಪಡೆದುಕೊಂಡಿದೆ. ಗಂಡ ಜೈದೇವನನ್ನು ಮೂರು ತಿಂಗಳಿನಲ್ಲಿ ಬದಲು ಮಾಡ್ತೇನೆ ಎಂದು ಮಲ್ಲಿ ಶಪಥ ಮಾಡಿದ್ದಳು. ಆದರೆ ಪರಸ್ತ್ರೀ ವ್ಯಾಮೋಹ ಎಂದರೆ ಅದೇನು ಸಣ್ಣದಲ್ಲವಲ್ಲ, ಇದೀಗ ಮನೆಯವರಿಗೆ ಖುದ್ದು ಇನ್ವಿಟೇಷನ್​ ಕೊಟ್ಟು ಜೈದೇವ ದಿಯಾಳನ್ನು ಮದುವೆಯಾಗಲು ಹೊರಟಿದ್ದಾನೆ. ಭೂಮಿಕಾ ಕೈಯಲ್ಲಿ ಆಮಂತ್ರಣ ಪತ್ರಿಕೆಯನ್ನೂ ಕೊಟ್ಟಿದ್ದಾನೆ. ಆದರೆ ಆ ಸ್ಥಳಕ್ಕೆ ಎಲ್ಲರೂ ಹೋದಾಗ, ದಿಯಾಳನ್ನು ಕರೆದುಕೊಂಡು ಜೈದೇವ ನೇರವಾಗಿ ಮನೆಗೇ ಬಂದಿದ್ದು, ಇಲ್ಲೇ ನಮ್ಮ ಮದುವೆ ನಡೆಯುತ್ತದೆ ಎಂದಿದ್ದಾರೆ. ಮನೆಯಲ್ಲಿರುವ ಪಾರ್ಥ, ಸುಧಾ ಎಲ್ಲರಿಗೂ ಗನ್​ನಿಂದ ಹೆದರಿಸಿ ಮದುವೆಗೆ ರೆಡಿಯಾಗಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಆತ ಅಣ್ಣ ಗೌತಮ್​, ಭೂಮಿಕಾ ಎಲ್ಲರನ್ನೂ ಫೋನ್​ ಮಾಡಿ ಮನೆಗೆ ಕರೆಸಿದ್ದಾನೆ.

ಅದೇ ಇನ್ನೊಂದೆಡೆ, ಜೈದೇವನ ಕುತಂತ್ರ ಎಲ್ಲವೂ ಗೌತಮ್ ಎದುರು ಬಯಲಾಗಿದೆ. ಗೌತಮ್​ ತಾನು ಭೂಪತಿ ಜೊತೆ ಸೇರಿ ಮಾಡಿರುವ ನೀಚಕೃತ್ಯಗಳನ್ನು ಇಬ್ಬರೂ ಮಾತನಾಡುತ್ತಿದ್ದ ಸಮಯದಲ್ಲಿ ಮಲ್ಲಿಯ ತಾತ ಅದನ್ನು ಕೇಳಿಸಿಕೊಂಡಿದ್ದಾನೆ. ಅದನ್ನೆಲ್ಲಾ ಅವನು ಗೌತಮ್​ಗೆ ಬಂದು ಹೇಳಿದ್ದಾನೆ. ಅಷ್ಟರಲ್ಲಿಯೇ ಮದುವೆಯ ಬಗ್ಗೆ ಜೈದೇವ ಕರೆ ಮಾಡಿದ್ದಾನೆ. ಅಷ್ಟಕ್ಕೂ ಭೂಪತಿಯೇ ಮುಂದೆ ನಿಂತು ಜೈದೇವನ ಮದುವೆ ಮಾಡಿಸುತ್ತಿದ್ದಾರೆ. ಆದರೆ ಆತನಿಗೆ ಮಲ್ಲಿ ಅವನದ್ದೇ ಮಗಳು ಎನ್ನುವ ಸತ್ಯ ಇನ್ನೂ ಗೊತ್ತಿಲ್ಲ. ಈ ಸತ್ಯವನ್ನು ಹೇಳಲು ಗೌತಮ್​ ಸಾಕಷ್ಟು ಬಾರಿ ಪ್ರಯತ್ನಿಸಿದ್ದರೂ ಅದು ಯಶಸ್ವಿಯಾಗಲಿಲ್ಲ. ಈಗ ಜೈದೇವ ಮತ್ತು ದಿಯಾಳ ಮದುವೆ ಮಾಡಿಸಿ, ತನ್ನ ಸ್ವಂತ ಮಗಳ ಬಾಳಿಗೆ ಕೊಳ್ಳಿ ಇಡಲು ಹೋಗುತ್ತಿರುವ ವಿಷಯ ಅವನಿಗೆ ತಿಳಿದಿಲ್ಲ.

ಇದೇ ವೇಳೆ ಗೌತಮ್​- ಭೂಮಿಕಾ ಎಲ್ಲರೂ ಮನೆಗೆ ಬಂದಿದ್ದಾರೆ. ಮದುವೆಯನ್ನು ನಿಲ್ಲಿಸಲು ಬಂದು ರಂಪಾಟ ಮಾಡುತ್ತಾನೆ ಎಂದು ಜೈದೇವ ಅಂದುಕೊಂಡಿದ್ದ. ಹೀಗೆ ರಂಪಾಟ ಮಾಡುವ ಮಧ್ಯೆಯೇ ತಾನು ತಾಳಿ ಕಟ್ಟಿ ಮೆರೆಯುವ, ಎಲ್ಲರ ಹೊಟ್ಟೆಯನ್ನೂ ಉರಿಸುವ ಎಂದುಕೊಂಡಿದ್ದ. ಆದರೆ ಆತ ಹೇಳಿಕೇಳಿ ಗೌತಮ್​. ಯಾವಾಗ ಏನು ಮಾಡಬೇಕು ಎನ್ನುವುದು ಚೆನ್ನಾಗಿ ಗೊತ್ತಿದೆ ಅವನಿಗೆ. ದೊಡ್ಡ ಪ್ಲ್ಯಾನ್​ ಅನ್ನೇ ಮಾಡಿಕೊಂಡು ಬಂದಿರೋ ಹಾಗಿದೆ ಗೌತಮ್​. ಇದೇ ಕಾರಣಕ್ಕೆ ನನ್ನ ಎದುರೇ ತಾಳಿ ಕಟ್ಟು ಎಂದು ಜೈದೇವ್​ಗೆ ಹೇಳಿದಾಗ ಅಲ್ಲಿರೋರು ಎಲ್ಲರೂ ಶಾಕ್​. ಜೈದೇವನೂ ಒಮ್ಮೆ ಇದೇನಿದು ಎಂದು ತಲೆಬುಡ ಅರ್ಥವಾಗದೇ ಕುಸಿದಿದ್ದಾನೆ. ಏನೋ ಎಡವಟ್ಟು ಆಗುತ್ತದೆ ಎನ್ನುವುದು ಅವನಿಗೆ ಮನವರಿಕೆ ಆಗಿದೆ. ಆದರೆ ಮದುವೆಗೆ ಗ್ರೀನ್​ ಸಿಗ್ನಲ್​ ಕೊಟ್ಟಿರೋ ಗೌತಮ್​ ಏನು ಮಾಡುತ್ತಾನೆ ಎನ್ನೋದು ಈಗಿರುವ ಪ್ರಶ್ನೆ.

ಅಷ್ಟಕ್ಕೂ ಮಲ್ಲಿ ಪೊಲೀಸರಲ್ಲಿ ದೂರು ಕೊಟ್ಟರೆ ಜೈದೇವ್​ಗೆ ಜೈಲೇ ಗತಿ. ಇನ್ನು ಈಕೆಗೆ ತಾಳಿ ಕಟ್ಟಿದರೆ ನನ್ನೆಲ್ಲಾ ಆಸ್ತಿಯಿಂದ ನಿನ್ನನ್ನು ಬೇರೆ ಮಾಡುತ್ತೇನೆ ಎಂದೇನಾದ್ರೂ ಗೌತಮ್​ ಹೇಳಿದ್ರೆ, ಆಸ್ತಿಗಾಗಿಯೇ ಮದ್ವೆಯಾಗ್ತಿರೋ ದಿಯಾ ಅವನ ಕಡೆ ಕಣ್ಣೆತ್ತಿಯೂ ನೋಡಲಾರಳು. ಇನ್ನು ಇದೇ ವೇಳೆ ಮಲ್ಲಿಯ ಅಸಲಿಯತ್ತನ್ನು ಗೌತಮ್​ ಭೂಪತಿ ಎದುರು ಬಹಿರಂಗಪಡಿಸಿ ಇವಳು ನಿನ್ನದೇ ಮಗಳು ಎಂದರೆ ಈ ಮದುವೆಯನ್ನು ಖುದ್ದು ಭೂಪತಿಯೂ ತಡೆಯಬಹುದು ಹಾಗೂ ಅಷ್ಟು ಆಸ್ತಿಯ ಮಾಲೀಕಳು ಮಲ್ಲಿ ಎನ್ನುವುದು ಗೊತ್ತಾಗಿ ದುಡ್ಡಿನ ಹಿಂದೆ ಬಿದ್ದಿರೋ ಜೈದೇವ್​, ದಿಯಾಳನ್ನು ಅಲ್ಲಿಯೇ ಬಿಟ್ಟು ಮಲ್ಲಿಯ ಬಳಿ ಓಡಿ ಬರಹುದು. ಇಷ್ಟು ಅದರೆ ಅಲ್ಲಿಗೆ ಸೀರಿಯಲ್​ ಮುಗಿದಂತೆ. ಅದರೆ ಇವಿಷ್ಟು ಕಥೆ ಇನ್ನೆಷ್ಟು ದಿನ ಸಾಗುತ್ತದೆಯೋ ಯಾರಿಂದಲೂ ಹೇಳುವುದು ಕಷ್ಟ!

View post on Instagram