ಕಿರುತೆರೆ ಡಿಂಪಲ್ ಬಾಯ್‌ ವಿಜಯ್ ಸೂರ್ಯ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ, please dont go ಅನ್ನುವ ಮಹಿಳಾ ಅಭಿಮಾನಿಗಳಿಗೆ ಸಿದ್ದು ಕೊಟ್ಟ ಕಾರಣವೇನು ಗೊತ್ತಾ?

ಕಲರ್ಸ್ ಕನ್ನಡದ ಖ್ಯಾತ ಧಾರಾವಾಹಿ 'ಅಗ್ನಿಸಾಕ್ಷಿ'ಯ ಮೋಸ್ಟ್ ಹ್ಯಾಂಡ್ಸಮ್ ಆ್ಯಂಡ್ ಸ್ಮಾರ್ಟ್ ಮ್ಯಾನ್ ಸಿದ್ದಾರ್ಥ್ ಉರುಫ್ ವಿಜಯ್ ಸೂರ್ಯ ಹುಡುಗಿಯರಿಗೆ ಮತ್ತೊಮ್ಮೆ ಹಾರ್ಟ್ ಬ್ರೇಕ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!

ಎದುರಾಗಿದ್ದ ಸಂಕಷ್ಟಗಳಿಂದ ಪಾರಾಗಿ ಈಗಷ್ಟೇ ರೊಮ್ಯಾಂಟಿಕ್ ತಿರುವು ಪಡೆಯುವ ಸಮಯದಲ್ಲಿ ಹೊರ ಬರಲು ತೆಗೆದುಕೊಂಡ ನಿರ್ಧಾರ ಪ್ರೇಕ್ಷಕರಿಗೆ ಬೇಜಾರು ತಂದಿದೆ. ಈಗಷ್ಟೇ ಅಲ್ಪಸ್ವಲ್ಪ ರೊಮ್ಯಾನ್ಸ್ ಶುರುವಾಗಿತ್ತು. ನೋಡೊಕೆ ಸೂಪರ್ ಆಗಿತ್ತು ನೀವೇಕೆ ನಮ್ಮನ್ನು ಬಿಟ್ಟು ಹೋಗುತ್ತಿದ್ದೀರಾ ಎಂದು ಅಭಿಮಾನಿಗಳು ಕೇಳಿದಕ್ಕೆ ವಿಜಯ್ ಕೊಟ್ಟ ಉತ್ತರವಿದು.

ಮಂಡ್ಯದ ಹೆಣ್ಣು ಸುಮಲತಾಗೆ ಇತ್ತು ಇವರ ಮೇಲೆ ಕ್ರಶ್!

ಧಾರಾವಾಹಿಯಲ್ಲಿ ಸಿದ್ದಾರ್ಥ್ ಆಸ್ಟ್ರೇಲಿಯಾಗೆ ತೆರಳುತ್ತಾರೆ. ಅಲ್ಲಿಗೆ ಅವರ ಪಾತ್ರ ಮುಗಿಯುತ್ತದೆ. ಧಾರಾವಾಹಿಯಿಂದ ಹೊರ ಬರಲು ಪಾತ್ರ ಮುಗಿದಿದೆ ಹಾಗೂ ಧಾರಾವಾಹಿಗೆಂದು ಮಾಡಿದ 5 ವರ್ಷದ ಅಗ್ರಿಮೆಂಟ್ ಮುಗಿಯುವ ಹಂತಕ್ಕೆ ಬಂದಿದ್ದು ಲೈಫ್‌ನಲ್ಲಿ ಸಣ್ಣದೊಂದು ಬ್ರೇಕ್ ಬೇಕೆಂದು ಹೊರ ಬಂದಿದ್ದಾರೆ ಎನ್ನಲಾಗಿದೆ.