ಕುಡಿದ ಅಮಲಿನಲ್ಲಿ ಸ್ಕೈಬಾರ್ ನಲ್ಲಿ ಜಗಳ ತೆಗೆದಿದ್ದಾನೆ. ಗಲಾಟೆ ಆಗುತ್ತಿದ್ದಂತೆ ಸ್ಕೈಬಾರ್ ಸಿಬ್ಬಂದಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುಡಿದ ಮತ್ತಿನಲ್ಲಿ ಸೀರಿಯಲ್ ಌಕ್ಟರ್ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ‘ಸರ್ಪ ಸಂಬಂಧ’ ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಿರುಷಾ ಮೇಲೆ ಬಿಲ್ಡರ್ ಪುತ್ರ ದರ್ಪ ತೋರಿದ್ದಾನೆ. ಖ್ಯಾತ ಬಿಲ್ಡರ್ ಶ್ರೀನಿವಾಸ್ ಮಗ ದರ್ಶನ್, ಕುಡಿದ ಅಮಲಿನಲ್ಲಿ ಸ್ಕೈಬಾರ್ ನಲ್ಲಿ ಜಗಳ ತೆಗೆದಿದ್ದಾನೆ. ಗಲಾಟೆ ಆಗುತ್ತಿದ್ದಂತೆ ಸ್ಕೈಬಾರ್ ಸಿಬ್ಬಂದಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಬಿಲ್ಡರ್ ಪುತ್ರ ಹಾಗೂ ಸ್ನೇಹಿತರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
